ಮತ್ತೆ ನಮಗೆ ಸಂತಸದ ದಿನ ಇಂದು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಸಾಯನಶಾಸ್ತ್ರ ಇಬ್ಬರು ವಿದ್ಯಾರ್ಥಿಗಳನ್ನು ಕೈಬಿಟ್ಟದ್ದು ಬಿಟ್ಟರೆ ಉಳಿದ ನೂರೈವತ್ತು ಮಂದಿ ತೇರ್ಗಡೆಯಾಗಿದ್ದಾರೆ. ಹತ್ತನೇ ತರಗತಿಯ ‘ಬಿ’ ಡಿವಿಷನ್ ವಿದ್ಯಾರ್ಥಿಗಳಾದ ಕೀರ್ತಿ ಬೊಳುಂಬು, ಸರಿತಾ.ಇ, ಶ್ರೀವಾಣಿ ಕಾಕುಂಜೆ, ಶ್ಯಾಮಲಾ ಪೆರ್ವ ಮತ್ತು ಶ್ರೀನಿವಾಸ ಹೊಸಮನೆ ಎಲ್ಲಾ ಹತ್ತು ವಿಷಯಗಳಲ್ಲಿ ೯೦% ಕ್ಕಿಂತ ಹೆಚ್ಚು ಅಂಕ ಪಡೆದು ಎ+ ಗ್ರೇಡ್ ಪಡೆದಿದ್ದಾರೆ. ಅಭಿನಂದನೆಗಳು ಇವರಿಗೆ.