-ಶ್ರೀವಾಣಿ.ಕೆ
ಮರಗಿಡಗಳ ತಾಯ್ನೆಲವಿದು
ಬನವನಗಳ ನಾಡು
ದಿನದಿನವೂ
ತಂಪೆರೆಯುವ ವನದೇವಿಯ ಬೀಡು
ಈ ಮಣ್ಣಿನ ಈ ನಾಡಿನ
ಹಿರಿಮೆಯದೆಂತೋ
ಈ ನಾಡಿನ ಸ್ವಾತಂತ್ರ್ಯಕೆ
ಹೋರಾಡಿದವರೆನಿತೋ
ಶ್ರೀಗಾಂಧಿಯ ಆದರ್ಶವ
ಪಾಲಿಪ ನಾಡು
ಮತಜಾತಿಯ ಮರೆತಿಹ ಇದು
ದೇವರ ಬೀಡು
ಸೌಂದರ್ಯವ ತುಂಬಿರುವ
ನದಿಹೊಳೆಗಳ ನೋಡು
ಗಿರಿಶಿಖರದ ಉನ್ನತಿಯಲಿ
ಮೆರೆಯುತಿಹುದು ಕಾಡು
ಮೃಗಪಕ್ಷಿಯ ನಲಿವಿರುವುದು
ಇದು ಪ್ರಕೃತಿಯ ಬೆಡಗು
ಮನಮೋಹಕ ಸೌಂದರ್ಯದ
ಭೂ ತಾಯಿಯ ಸೊಬಗು
ಜನಮನಗಳ ಸಮ್ಮಿಲನವು
ತರುತಿಹವು ಹರುಷವು
ಮತಭಾಷೆಯ ಮರೆತಿಹರು
ಹರುಷದಿ ಒಗ್ಗೂಡುವರು
ಪರಿಸರವೇ ನಮ್ಮುಸಿರು
ಅದರಿಂದಲೇ ನಾವು
ಸುಖವಿರುವುದು ಅದನುಳಿಸಿದರೆ
ಭಾಗಿಯಾಗೋಣ ಅದರಲಿ ನಾವು ನೀವು.
good enviernment kavana
ReplyDeleteThis comment has been removed by the author.
ReplyDelete