ಕೇರಳ ಸರಕಾರವು ಮಾರ್ಚ್ 2013ರಲ್ಲಿ ನಡೆಸಿದ ಎಸ್.ಎಸ್.ಎಲ್.ಸಿ ಪರೀಕ್ಷೆಯ
ಮರುಮೌಲ್ಯಮಾಪನದ ಫಲಿತಾಂಶವು ಬಂದಿದ್ದು ನಮ್ಮ ಶಾಲೆಯ ವಿದ್ಯಾರ್ಥಿನಿ ಚೈತಾಲಿ. ಕೆ.ಎನ್ ಎಲ್ಲ ಹತ್ತು ವಿಷಯಗಳಲ್ಲೂ ಎ+ ಗ್ರೇಡ್
ಪಡೆದಿದ್ದಾಳೆ. ಹಿಂದೆ ಫಲಿತಾಂಶ ಬಂದಿದ್ದಾಗ ಈಕೆಗೆ ಹಿಂದಿಯಲ್ಲಿ ಮಾತ್ರ ಎ ಗ್ರೇಡ್
ದೊರೆತಿತ್ತು. ಆದ್ದರಿಂದ ಈಕೆ ಮರುಮೌಲ್ಯಮಾಪನಕ್ಕೆ ಅಪೇಕ್ಷೆ ಸಲ್ಲಿಸಿದ್ದಳು.
ಇದರೊಂದಿಗೆ ನಮ್ಮ ಶಾಲೆಯ ಏಳು ಮಂದಿ ವಿದ್ಯಾರ್ಥಿಗಳಿಗೆ ಎಲ್ಲ ಹತ್ತು ವಿಷಯಗಳಲ್ಲೂ
ಎ+ ಗ್ರೇಡ್ ದೊರೆತಂತಾಗಿದೆ. ಈಕೆ ನಿಡುಗಳ ನಿವಾಸಿ ಕೆ.ಎನ್.ವೆಂಕಟ್ರಮಣ ಭಟ್ ಮತ್ತು
ಕುಸುಮಾ ಇವರ ಪುತ್ರಿ. ಅಂದ ಹಾಗೆ ಶಾಲೆ ನಾಡಿದ್ದು ಸೋಮವಾರ, ಜೂನ್ 3 ರಂದು ಹೊಸ ಅಧ್ಯಯನ ವರ್ಷಕ್ಕಾಗಿ ಬಾಗಿಲು ತೆರೆಯಲಿದೆ. ಅಕ್ಷರದ ಮೆಟ್ಟಿಲನ್ನು ಏರಲು ಆಗಮಿಸುವ ಎಲ್ಲ ವಿದ್ಯಾರ್ಥಿಗಳಿಗೆ ಸ್ವಾಗತಗಳು. ಆ ದಿನ ನಮಗೆ ಪ್ರವೇಶೋತ್ಸವ...
No comments:
Post a Comment