ಕೊಲ್ಲಂನಲ್ಲಿ ಜರಗಿದ ರಾಜ್ಯ ಮಟ್ಟದ ವಿಜ್ಞಾನ ಮೇಳದಲ್ಲಿ ಭಾಗವಹಿಸಿದ ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿಯರಾದ ಅಕ್ಷತಾ.ಡಿ (ಎಡನಾಡು ಗ್ರಾಮದ ಡಿ.ಗಣಪತಿ ಭಟ್ - ಸಾವಿತ್ರಿ ಇವರ ಪುತ್ರಿ) ಮತ್ತು ನಿಸರ್ಗ.ಕೆ (ಕೇಶವಪ್ರಸಾದ್ ಕೊಡ್ವಕರೆ - ಭಾರತಿ. ಎಂ.ಜಿ ಇವರ ಪುತ್ರಿ) ಮಾಲಿನ್ಯ ಸಂಸ್ಕರಣೆಯ ಕುರಿತಾಗಿ ಪ್ರದರ್ಶಿಸಿದ ಸ್ಥಿರ ಮಾದರಿಯು ‘ಬಿ’ ಗ್ರೇಡ್ ಸಹಿತ ಬಹುಮಾನವನ್ನು ಪಡೆದಿದೆ. ಒಂಭತ್ತನೇ ತರಗತಿ ವಿದ್ಯಾರ್ಥಿಗಳಾದ ಚಿನ್ಮಯ ಭಟ್.ಕೆ.ಕೆ (ಕಳತ್ತೂರು ಕಲ್ಪತರು ನಿವಾಸಿ ಕೆ.ಕೆ.ಲಕ್ಷ್ಮೀನಾರಾಯಣ ಭಟ್ - ಪರಮೇಶ್ವರಿ.ಕೆ.ಕೆ ಇವರ ಪುತ್ರ) ಮತ್ತು ಶರಣ್ ಕುಮಾರ್ (ಬೇಳ ದೊಡ್ಡಡ್ಕ ನಿವಾಸಿ ಹರಿಶ್ಚಂದ್ರ ಶೆಟ್ಟಿ - ಶಾಲಿನಿ ಇವರ ಪುತ್ರ) ಜೈವಿಕ ಕೀಟನಾಶಕದ ಕುರಿತಾಗಿ ಮಂಡಿಸಿದ ಸಂಶೋಧನಾತ್ಮಕ ಪ್ರೋಜೆಕ್ಟ್ ‘ಎ’ ಗ್ರೇಡ್ ಪಡೆದಿದೆ. ಇವರಿಗೆ ಶುಭಾಶಯಗಳು...
ಪ್ರಶಸ್ತಿ ಪಡೆದ ಮಕ್ಕಳಿಗೂ, ಅವರ ಶಿಕ್ಷಕ-ಪೋಷಕರಿಗೂ ಅಭಿನಂದನೆಗಳು, ಶುಭ ಹಾರೈಕೆಗಳು....
ReplyDeleteCongrats Friends...
ReplyDelete