ನಮಗೆ ಮತ್ತೆ ರಜಾ ಪರ್ವ. ಈ ಬಾರಿ ಕೇರಳದ ನಾಡಹಬ್ಬ ಓಣಂ. ನಿಮಗೆಲ್ಲರಿಗೂ ಓಣಂ ಹಬ್ಬದ ಶುಭಾಶಯಗಳು. ರಜೆ ಮುಗಿಸಿ ವಿದ್ಯಾರ್ಥಿಗಳೆಲ್ಲ ಸೆಪ್ಟೆಂಬರ್ ಏಳರಂದು ಶಾಲೆಗೆ ಹಾಜರಾಗಲಿದ್ದಾರೆ. ಹೊಸ ಉತ್ಸಾಹದೊಂದಿಗೆ...29 August 2009
ಓಣಂ ಹಬ್ಬದ ಶುಭಾಶಯಗಳು
ನಮಗೆ ಮತ್ತೆ ರಜಾ ಪರ್ವ. ಈ ಬಾರಿ ಕೇರಳದ ನಾಡಹಬ್ಬ ಓಣಂ. ನಿಮಗೆಲ್ಲರಿಗೂ ಓಣಂ ಹಬ್ಬದ ಶುಭಾಶಯಗಳು. ರಜೆ ಮುಗಿಸಿ ವಿದ್ಯಾರ್ಥಿಗಳೆಲ್ಲ ಸೆಪ್ಟೆಂಬರ್ ಏಳರಂದು ಶಾಲೆಗೆ ಹಾಜರಾಗಲಿದ್ದಾರೆ. ಹೊಸ ಉತ್ಸಾಹದೊಂದಿಗೆ...27 August 2009
ಕವನ - ಸಂಧ್ಯಾ ಸಮಯ :ಮಾನಸ. ಪಿ.ಯಸ್
ಸಂಜೆಯ ಸಮಯದಿ ಮುಳುಗುವ ಸೂರ್ಯನ
ಕಿರಣದ ಸೊಬಗನು ನೋಡಿದೆಯಾ
ಕಡಲಲಿ ನರ್ತನವಾಡುವ ಕಿರಣದ
ಅಲೆಗಳ ಅಂದವ ಸವಿಯುವೆಯಾ
ಮುಸ್ಸಂಜೆಯ ಸೊಬಗನು ಸವಿಯುವೆಯಾ
ಕೆಂಬಣ್ಣದ ಬಾನಲಿ ಹೊಳೆಯುವ ಮೇಘದಿ
ಹರಿಯುವ ರಕ್ತವ ನೋಡಿದೆಯಾ
ಸಂಜೆಯ ಕಂಪಲಿ ಮಕ್ಕಳ ಆಟದ
ಅಂದವ ನೀನು ಸವಿಯುವೆಯ
ಮುಸ್ಸಂಜೆಯ ಸೊಬಗನು ಸವಿಯುವೆಯಾ
ಚಿಲಿಪಿಲಿಗುಟ್ಟುವ ಹಕ್ಕಿಯು ತನ್ನಯ
ಗೂಡನು ಸೇರುವ ಸಂತಸ ಸವಿಯುವೆಯಾ
ಮೆಲ್ಲನೆ ತನ್ನಯ ಮರಿಗಳ ಮುದ್ದಿಸಿ
ಹಣ್ಣನು ಕೊಡುವುದ ನೋಡಿದೆಯಾ
ಮುಸ್ಸಂಜೆಯ ಸೊಬಗನು ಸವಿಯುವೆಯಾ
ತಣ್ಣನೆ ಗಾಳಿಯು ಬೀಸುತ ಮೆಲ್ಲಗೆ
ಕಂಪನು ತರುವುದ ಸವಿಯುವೆಯಾ
ಗಾಳಿಯ ರಭಸಕೆ ಮಾಮರ ಚಾಮರ
ಮಾಡುವ ನರ್ತನ ನೋಡಿದೆಯಾ
ಮುಸ್ಸಂಜೆಯ ಸೊಬಗನು ಸವಿಯುವೆಯಾ
21 August 2009
ಹೂ ರಂಗವಲ್ಲಿ
20 August 2009
ಹೊಸ ಪ್ರಯತ್ನದ ಕಡೆಗೆ...
19 August 2009
ಜಲಮಾಲಿನ್ಯ
ಒಂದು ಕಥೆ - ಸ್ವಾತಿ ಸಿ.ವಿ.
ಒಂದು ಊರಿನಲ್ಲಿ ರವಿ ಎಂಬ ಒಬ್ಬ ಹುಡುಗನಿದ್ದನು. ಅವನು ಕೆಟ್ಟವನಾಗಿದ್ದನು. ಸ್ನೇಹಾ ಅವನ ತಂಗಿಯಾಗಿದ್ದಳು. ರವಿ ಸ್ನೇಹಾಳಿಂದ ಒಂದು ವರ್ಷ ದೊಡ್ಡವನಾಗಿದ್ದನು. ಅವನು ೯ನೇ ತರಗತಿಯಲ್ಲೂ ಸ್ನೇಹಾ ೮ನೇ ತರಗತಿಯಲ್ಲೂ ಓದುತ್ತಿದ್ದರು. ರವಿ ಶಾಲೆಯಿಂದ ಬಂದ ನಂತರ ಆಟವಾಡಲು ಹೋಗುತ್ತಿದ್ದನು. ಆಗ ಸ್ನೇಹಾ ತನ್ನ ಶಾಲೆ ಕೆಲಸಗಳನ್ನು ಮಾಡುತ್ತಿದ್ದಳು. ಆಟ ಆಡಿ ಬಂದ ನಂತರ ಸ್ನೇಹಾಳಲ್ಲಿ ಅವನ ಶಾಲೆಕೆಲಸಗಳನ್ನು ಮಾಡಿಸುತ್ತಿದ್ದನು.
ಈ ವರ್ಷದ ಕಲಿಯುವಿಕೆಯಲ್ಲಿ ಸ್ನೇಹಾಳಿಗೆ ಪ್ರಥಮ ಸ್ಥಾನ ದೊರೆಯಿತು. ಆಗ ಅವಳ ತಂದೆ ತಾಯಿ ಬಹಳ ಖುಶಿಪಟ್ಟರು. ರವಿಗೆ ಬಹಳ ಬೇಸರವಾಯಿತು. ಅವನು ತಂದೆ ತಾಯಿಯರ ಬಳಿ ಹೋದಾಗ ಅವರು ಮುಖ ಎತ್ತಿ ಇವನನ್ನು ನೋಡುತ್ತಿರಲಿಲ್ಲ. ಒಂದು ದಿನ ರವಿ ಸ್ನೇಹಾಳಲ್ಲಿ ಈ ವಿಷಯದ ಬಗ್ಗೆ ಪ್ರಶ್ನಿಸಿದನು. ಆಗ ಅವಳು “ನೀನು ಕೂಡಾ ಕಲಿಯುವುದರಲ್ಲಿ ಪ್ರಥಮ ಸ್ಥಾನ ಪಡೆದುಕೊ, ಒಳ್ಳೆಯ ರೀತಿಯಲ್ಲಿ ನಡೆದುಕೊ” ಎಂದಳು. ಇದರಿಂದಾಗಿ ರವಿಯ ಮನಪರಿವರ್ತನೆಯಾಗಿ ನಂತರ ಒಳ್ಳೆಯ ವಿದ್ಯಾರ್ಥಿಯಾದನು. ಅದರಂತೆಯೇ ನಾವೂ ಒಳ್ಳೆಯ ವಿದ್ಯಾರ್ಥಿಯಾಗಿ ಎಲ್ಲರೊಡನೆ ಸ್ನೇಹದಿಂದಿರಬೇಕು.
15 August 2009
ನೀರ್ಚಾಲಿನಲ್ಲಿ ಸ್ವಾತಂತ್ರ್ಯೋತ್ಸವ
“ಮಹಾಪುರುಷರ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ೬೩ನೇ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲಿ ನಾವು ಆ ಮಹಾನ್ ತ್ಯಾಗಿಗಳ ಬಲಿದಾನವನ್ನು ನೆನಪಿಸಿಕೊಳ್ಳಬೇಕು. ಬಡವರ ಸೇವೆ, ಪರೋಪಕಾರ, ಅಹಿಂಸೆ, ಸತ್ಯ, ಶಾಂತಿ ನಮ್ಮ ಮಂತ್ರವಾಗಬೇಕು. ಆ ಮೂಲಕ ನಮ್ಮ ದೇಶದ ಉದ್ಧಾರ ಆಗಬೇಕು" ಎಂದು ನಿವೃತ್ತ ಮುಖ್ಯೋಪಾಧ್ಯಾಯ ಕಾನ ಈಶ್ವರ ಭಟ್ ಹೇಳಿದರು. ಅವರು ೧೫.೦೮.೨೦೦೯ ಶನಿವಾರ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಸ್ವಾತಂತ್ರ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. 14 August 2009
ಲೋಕಕಲ್ಯಾಣಕ್ಕಾಗಿ ಕೃಷ್ಣಾವತಾರ: ಸಿ.ಎಚ್.ರಾಮ ಭಟ್

13 August 2009
ಕವಿತೆ - ಕೃಷಿ
-ಸೀಮಾ ಎಂ.ಬಿ.
ಧರೆಯ ಮನುಜರೆಲ್ಲ ಬನ್ನಿ
ಹೊಲದಕಡೆಗೆ ಹೋಗುವ
ಮಳೆಯ ಸಮಯದಲ್ಲಿ ಬೆಳೆವ
ಕೃಷಿಗೆ ನಾವು ತೊಡಗುವ
ಎತ್ತುಗಳನು ನೊಗಕೆ ಬಗೆದು
ನೇಗಿಲುಗಳನು ಒತ್ತಿ ಹಿಡಿದು
ಗದ್ದೆಗಳನು ಉತ್ತು ಬಿತ್ತಿ
ಕೃಷಿಯ ನಾವು ಮಾಡುವ
ಮುಂಜಾನೆ ಹೊಲಕೆ ಹೋಗಿ
ಪೈರು ಭತ್ತ ಬೆಳೆಸುವ
ಸಂಜೆ ತನಕ ಕೆಲಸ ಮಾಡಿ
ಊರಿಗನ್ನ ನೀಡುವ
ಒಣಗಿ ಇರುವ ಭೂಮಿಯನ್ನು
ಹಚ್ಚ ಹಸಿರು ಮಾಡುವ
ನಮ್ಮ ಮುಂದಿನ ಜೀವನಕ್ಕಾಗಿ
ಕೃಷಿಯ ನಾವು ಬೆಳೆಸುವ.
11 August 2009
ಶ್ರೀಕೃಷ್ಣ ಜಯಂತಿ ಉತ್ಸವ - ಬನ್ನಿ
ಮಹಾಜನ ವಿದ್ಯಾಭಿವರ್ಧಕ ಸಂಘದ ಆಶ್ರಯದಲ್ಲಿ ನಮ್ಮ ಶಾಲೆಯಲ್ಲಿ ಶ್ರೀಕೃಷ್ಣ ಜಯಂತಿ ಉತ್ಸವವು ಆಗಸ್ಟ್ ೧೩ರಂದು ಜರಗಲಿದೆ. ಆ ಪ್ರಯುಕ್ತ ಅಪರಾಹ್ನ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ರಾಮ ಭಟ್ ಸಿ.ಎಚ್ ಅಧ್ಯಕ್ಷತೆ ವಹಿಸಲಿದ್ದಾರೆ. ಮನರಂಜನಾ ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ದಿವಾಣ ಶಿವಶಂಕರ ಭಟ್ ದಿಗ್ದರ್ಶನದಲ್ಲಿ“ಶ್ರೀಕೃಷ್ಣ ಲೀಲೆ" ಎಂಬ ಯಕ್ಷಗಾನ ಬಯಲಾಟ ಜರಗಲಿದೆ. ಬನ್ನಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.
ಎರಡು ಕವನಗಳು
ತುಂತುರು ಮಳೆ ಹನಿ
- ಮಾನಸ ಪಿ.ಎಸ್
ತುಂತುರು ಮಳೆ ಹನಿ ಬೀಳುತಿದೆ
ತರತರ ಶಬ್ದವು ಕೇಳುತಿದೆ
ಗಾಳಿಯು ಜೋರು ಬೀಸುತಿದೆ
ತೆಂಗು ಕಂಗು ಬಾಗುತಿದೆ
ಗುಡು ಗುಡು ಗುಡುಗು ಗುಡುಗುತಿದೆ
ಫಳ ಫಳ ಮಿಂಚು ಮಿಂಚುತಿದೆ
ಮಳೆಯದು ಜೋರು ಬರುತಲಿದೆ
ಭೂಮಿಗೆ ತಂಪನು ತರುತಲಿದೆ
ನಕ್ಷತ್ರ
ಫಳ ಫಳ ಮಿನುಗುವ ನಕ್ಷತ್ರ
ಬಾನಲಿ ನಗುತಿಹ ನಕ್ಷತ್ರ
ಚಂದ್ರನ ಬಳಿಯಲಿ ನಗುತಲಿ ನಿಂತಿಹ
ಬೆಳ್ಳಿಯ ಬಣ್ಣದ ನಕ್ಷತ್ರ
ರಾತ್ರಿಲಿ ಕಂಡು ಬೆಳಗಲಿ ಕಾಣದೆ
ಆಟವನಾಡುವ ನಕ್ಷತ್ರ
ಮೆಲ್ಲನೆ ಮಕ್ಕಳ ಮನಸನು ಸೆಳೆಯುತ
ಅಂದದ ಚಂದದ ನಕ್ಷತ್ರ
ಬಾನಲಿ ಮೋಡಗಳೆಡೆಯಲಿ ಅಡಗುವ
ಬಿಳಿ ಬಣ್ಣದ ಅಂದದ ನಕ್ಷತ್ರ
ನನ್ನಯ ಮುದ್ದಿನ ನಕ್ಷತ್ರ







