-ಸೀಮಾ ಎಂ.ಬಿ.
ಧರೆಯ ಮನುಜರೆಲ್ಲ ಬನ್ನಿ
ಹೊಲದಕಡೆಗೆ ಹೋಗುವ
ಮಳೆಯ ಸಮಯದಲ್ಲಿ ಬೆಳೆವ
ಕೃಷಿಗೆ ನಾವು ತೊಡಗುವ
ಎತ್ತುಗಳನು ನೊಗಕೆ ಬಗೆದು
ನೇಗಿಲುಗಳನು ಒತ್ತಿ ಹಿಡಿದು
ಗದ್ದೆಗಳನು ಉತ್ತು ಬಿತ್ತಿ
ಕೃಷಿಯ ನಾವು ಮಾಡುವ
ಮುಂಜಾನೆ ಹೊಲಕೆ ಹೋಗಿ
ಪೈರು ಭತ್ತ ಬೆಳೆಸುವ
ಸಂಜೆ ತನಕ ಕೆಲಸ ಮಾಡಿ
ಊರಿಗನ್ನ ನೀಡುವ
ಒಣಗಿ ಇರುವ ಭೂಮಿಯನ್ನು
ಹಚ್ಚ ಹಸಿರು ಮಾಡುವ
ನಮ್ಮ ಮುಂದಿನ ಜೀವನಕ್ಕಾಗಿ
ಕೃಷಿಯ ನಾವು ಬೆಳೆಸುವ.
No comments:
Post a Comment