Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

30 September 2009

ಜಿಲ್ಲಾ ಥ್ರೋ ಬಾಲ್ ಪ್ರಶಸ್ತಿ

ಕಾಸರಗೋಡು ಜಿಲ್ಲಾ ಮಟ್ಟದ ಥ್ರೋ ಬಾಲ್ ಸ್ಪರ್ಧೆಯ ಹುಡುಗರ ಮತ್ತು ಹುಡುಗಿಯರ ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಬಂದಿದ್ದೇವೆ.

28 September 2009

ಸರಸ್ವತೀ ನಮಸ್ತುಭ್ಯಂ...

ಇಂದು ನಮ್ಮ ಶಾಲೆಯಲ್ಲಿ ಶ್ರೀ ಶಾರದಾ ಪೂಜೆ, ಪೂರ್ವವಿದ್ಯಾರ್ಥಿ ವೇದಮೂರ್ತಿ ಪಾಂಡೇಲು ಶಿವಶಂಕರ ಭಟ್ಟರ ನೇತೃತ್ವದಲ್ಲಿ ಜರಗಿತು. ಅಷ್ಟಾವಧಾನ ಸೇವೆ ಪೂಜಾಕಾರ್ಯಕ್ರಮದ ವಿಶೇಷ ಆಕರ್ಷಣೆ. ವ್ಯವಸ್ಥಾಪಕರು, ನಿವೃತ್ತ ಅಧ್ಯಾಪಕರು, ಊರ ಮಹನೀಯರು, ಅಧ್ಯಾಪಕ - ವಿದ್ಯಾರ್ಥಿ ಬಂಧುಗಳು ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟರು.

26 September 2009

ಜಿಲ್ಲಾ ಸ್ವತಂತ್ರ ಸಾಫ್ಟ್‌ವೇರ್ ಪ್ರಬಂಧ ಸ್ಪರ್ಧೆ - ಶಾಂತಿ.ಕೆ ಪ್ರಥಮ

ಸ್ವತಂತ್ರ ಸಾಫ್ಟ್‌ವೇರ್ ದಿನಾಚರಣೆಯ ಅಂಗವಾಗಿ ಕಾಸರಗೋಡು ಜಿಲ್ಲಾ ಐಟಿ ಸ್ಕೂಲ್ ಆಶ್ರಯದಲ್ಲಿ ೨೪.೦೯.೨೦೦೯ ಗುರುವಾರ ಕಾಸರಗೋಡಿನಲ್ಲಿ ಜರಗಿದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ೮ನೇ ತರಗತಿ ವಿದ್ಯಾರ್ಥಿನಿ ಶಾಂತಿ.ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಈಕೆ ಎಡನೀರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯ ಕೆ. ಗಣೇಶ್ ಭಟ್ ಇವರ ಪುತ್ರಿ. ಕಾಸರಗೋಡು ನಗರಸಭಾ ಅಧ್ಯಕ್ಷೆ ಬೀಫಾತಿಮಾ ಇಬ್ರಾಹಿಂ ಪ್ರಶಸ್ತಿ ವಿತರಿಸಿದರು.

24 September 2009

ಚಿತ್ರ - ಅನುಶ್ರೀ

ಅಕ್ಟೋಬರ್ ೨೧ ರಿಂದ ೩೦ ರ ತನಕ ಶಾಲಾ ಮದ್ಯಾವಧಿ ಪರೀಕ್ಷೆ. ಇನ್ನು ಆ ಕಡೆಗೆ ಹೆಚ್ಚಿನ ಗಮನ ಹರಿಸುತ್ತೇವೆ.

23 September 2009

ಶಟಲ್ ಬ್ಯಾಡ್ಮಿಂಟನ್ - ಪ್ರಶಸ್ತಿ

ಕಾಸರಗೋಡು ಜಿಲ್ಲಾ ಮಟ್ಟದ ಹುಡುಗಿಯರ ಜೂನಿಯರ್ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಬಂದಿದ್ದಾರೆ.

22 September 2009

ದಟ್ಸ್ ಕನ್ನಡದಲ್ಲಿ ನಮ್ಮ ಶಾಲೆ

ದಟ್ಸ್ ಕನ್ನಡದ ಪರಿಚಯ ನಿಮಗೆಲ್ಲ ಇರಬಹುದು. ನಮ್ಮ ಬ್ಲಾಗ್ ಓದಿ ದಟ್ಸ್ ಕನ್ನಡದ ಸಂಪಾದಕ ಶ್ಯಾಮ್ ಸುಂದರ್ ಶಾಲೆಯ ಬಗ್ಗೆ ಪರಿಚಯ ಲೇಖನವನ್ನು ಕೇಳಿದ್ದರು ಮತ್ತು ಸಕಾಲದಲ್ಲಿ ಆ ಲೇಖನವನ್ನು ಪ್ರಕಟಿಸಿದ್ದರು. ಧನ್ಯವಾದಗಳು ಅವರಿಗೆ... ನಿಮ್ಮೆಲ್ಲರ ಓದಿಗಾಗಿ ಈ ಲಿಂಕನ್ನು ಕ್ಲಿಕ್ ಮಾಡಿ. http://thatskannada.oneindia.in/literature/my-karnataka/2009/0910-neerchalu-mahajan-sanskrit-college-kasargod.html

18 September 2009

ಚಿತ್ರ - ಅನುಶ್ರೀ

ಅನುಶ್ರೀ ಬಿಡಿಸಿದ ಹಾಸ್ಯ ಚಿತ್ರ ಇರಿಸಿದ್ದೇವೆ, ನಿಮ್ಮ ಮುಂದೆ...

17 September 2009

ಬಯಲು ಪ್ರವಾಸ

ಬಯಲು ಪ್ರವಾಸದ ಅಂಗವಾಗಿ ಮೊನ್ನೆ ನಮ್ಮ ವಿದ್ಯಾರ್ಥಿಗಳು ನೀರ್ಚಾಲು ವಾಷೆ ಸತ್ಯನಾರಾಯಣ ಭಟ್ಟರ ಮನೆ ಸಂದರ್ಶಿಸಿ ಹಳೆಯ ಕಾಲದ ಅಳತೆ ಮಾನಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

16 September 2009

ಶಾಲಾ ಸಂದರ್ಶನ

ಸನ್ಮಾನ್ಯ ಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ಎನ್. ಕೆ. ಮೋಹನದಾಸ್ ಇಂದು ನಮ್ಮ ಶಾಲಾ ಸಂದರ್ಶನದಲ್ಲಿದ್ದಾರೆ. ನಮ್ಮ ಬೆಳವಣಿಗೆಗಾಗಿ ಇನ್ನಷ್ಟು ಸಲಹೆಗಳನ್ನೂ ನೀಡಿದ್ದಾರೆ. ಧನ್ಯವಾದಗಳು... ಅವರಿಗೂ, ಅವರ ತಂಡಕ್ಕೂ...

14 September 2009

ಕ್ರೀಡಾ ವಿಶೇಷಾಂಕ ಬಿಡುಗಡೆ

ಶಾಲಾ ಚಟುವಟಿಕೆಯ ಅಂಗವಾಗಿ ೧೦ಎ ತರಗತಿಯ ವಿದ್ಯಾರ್ಥಿಗಳು ತಯಾರಿಸಿದ ಕ್ರೀಡಾ ವಿಶೇಷಾಂಕವನ್ನು ಶಾರೀರಿಕ ಶಿಕ್ಷಣ ಶಿಕ್ಷಕ ಎಂ. ಸೂರ್ಯನಾರಾಯಣ ಬಿಡುಗಡೆಗೊಳಿಸಿದರು. ಕನ್ನಡ ಅಧ್ಯಾಪಿಕೆ ಶೈಲಜ.ಎ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸ್ವಾತಿ.ಕೆ ಸ್ವಾಗತಿಸಿ ವಿಜೇತ ಬಿ.ಕೆ ವಂದಿಸಿದರು. ಪ್ರೀತಿ.ಎನ್ ಕಾರ್ಯಕ್ರಮ ನಿರೂಪಿಸಿದರು.

10 September 2009

ಚಿತ್ರ - ಅವಿತೇಶ್. ಬಿ

ನಮ್ಮ ಪ್ರಯತ್ನಗಳು ಮುಂದುವರಿಯುತ್ತಿವೆ. ಹತ್ತನೇ ತರಗತಿ ಪರೀಕ್ಷೆಗೆ ತಯಾರಾಗುತ್ತಿರುವ ಹುಡುಗ ಬಿಡಿಸಿದ ಚಿತ್ರ ಇದು.

09 September 2009

“ಯಕ್ಷಗಾನ ಗಂಡುಕಲೆ”:- ಮಾಧವ ತಲ್ಪಣಾಜೆ

“ಕರಾವಳಿ ಮಲೆನಾಡಿನ ಗಂಡುಕಲೆ ಯಕ್ಷಗಾನವು ಕಲಾಲೋಕಕ್ಕೆ ನೀಡಿದ ಸಂಭಾವನೆ ಅನನ್ಯವಾದುದು, ಈ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು” ಎಂದು ಯಕ್ಷಗಾನ ಕಲಾವಿದ ಮಾಧವ ತಲ್ಪಣಾಜೆ ಅಭಿಪ್ರಾಯಪಟ್ಟರು. ಅವರು ೦೮.೦೯.೨೦೦೯ ಮಂಗಳವಾರ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಸಂದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಗೋವಿಂದ ಭಟ್.ಪಿ ಅಧ್ಯಕ್ಷತೆ ವಹಿಸಿದ್ದರು. ನಾಲ್ಕನೇ ತರಗತಿ ವಿದ್ಯಾರ್ಥಿಗಳು ಯಕ್ಷಗಾನ ಕುರಿತಾದ ಸಂವಾದ ನಡೆಸಿದರು. ಶಿಕ್ಷಕಿ ಮಾಲತಿ ಎಂ. ಸ್ವಾಗತಿಸಿದರು. ವಿದ್ಯಾರ್ಥಿ ಸಂದೇಶ ರೈ ವಂದಿಸಿದರು.

07 September 2009

ಸುಧಾ ಪತ್ರಿಕೆಗೆ ನಮ್ಮ ನಮನಗಳು

ಆರಂಭದಿಂದಲೂ ನಮ್ಮನ್ನು ಪ್ರೋತ್ಸಾಹಿಸುತ್ತಿರುವ ಬೇದ್ರೆ ಮಂಜುನಾಥ್ ಈ ಬಾರಿ ಸುಧಾ ಪತ್ರಿಕೆಯಲ್ಲಿ ಬದಲಾದ ಶಿಕ್ಷಕರ ಬಗ್ಗೆ 'ಶಿಕ್ಷಕರು ಬದಲಾಗಿದ್ದಾರೆ!' ಎಂಬ ಲೇಖನ ಬರೆದಿದ್ದಾರೆ. ಜೊತೆಯಲ್ಲಿ ನಮ್ಮ ಬ್ಲಾಗ್ ಕುರಿತ ಪ್ರಶಂಸೆಗಳನ್ನು ಬಾಕ್ಸ್ ಆಗಿ ದಾಖಲಿಸಿದ್ದಾರೆ. ನಮ್ಮ ನಮನಗಳು ಅವರಿಗೂ, ಸುಧಾ ಪತ್ರಿಕೆಗೂ...

ನೀರ್ಚಾಲಿನಲ್ಲಿ ಶಿಕ್ಷಕರ ದಿನಾಚರಣೆ

“ಅಧ್ಯಾಪಕರ ಕರ್ತವ್ಯ ಪ್ರಜ್ಞೆಯನ್ನು ಜಾಗೃತಗೊಳಿಸಿ, ಭಾರತದ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿ ಜನಸಾಮಾನ್ಯರ ಮನದಲ್ಲೂ ಅಚ್ಚಳಿಯದ ನೆನಪು ಉಳಿಸಿದ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ನಾವು ಇಂದು ಶಿಕ್ಷಕರ ದಿನವನ್ನಾಗಿ ಆಚರಿಸುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ಸೂಕ್ತ ಕಿವಿ ಮಾತುಗಳನ್ನು ಹೇಳಿ ಅವರನ್ನು ತಿದ್ದಿ ತೀಡುವ ಅಧ್ಯಾಪಕರಿಗೆ ಗೌರವ ಸಲ್ಲಿಸುವುದು ನಾಳಿನ ಸತ್ಪ್ರಜೆಗಳನ್ನು ರೂಪಿಸುವ ನಿಟ್ಟಿನಲ್ಲಿ ಉಪಯುಕ್ತವಾಗಿದೆ" ಎಂದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು. ರವಿಕೃಷ್ಣ ಅಭಿಪ್ರಾಯಪಟ್ಟರು. ಅವರು ದಿನಾಂಕ ೦೭.೦೯.೨೦೦೯ ಸೋಮವಾರದಂದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಜರಗಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ನಿವೃತ್ತ ಮುಖ್ಯೋಪಾಧ್ಯಾಯ ಎಂ.ವಿ.ಗೋಪಾಲಕೃಷ್ಣ, ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್, ಹಿರಿಯ ಅಧ್ಯಾಪಕರಾದ ಕನ್ನೆಪ್ಪಾಡಿ ನಾರಾಯಣ ಭಟ್, ಭುವನೇಶ್ವರಿ ಹಾಗೂ ವಿದ್ಯಾರ್ಥಿಗಳ ಪರವಾಗಿ ಅವಿತೇಶ್.ಬಿ ಶುಭಾಶಯಗಳನ್ನು ಸಮರ್ಪಿಸಿದರು. ವಿದ್ಯಾರ್ಥಿಗಳಾದ ಮುರಳಿಕೃಷ್ಣ ಶರ್ಮ ಸ್ವಾಗತಿಸಿ ಲತಾಶಂಕರಿ.ಕೆ ವಂದಿಸಿದರು. ಚೈತ್ರಾ. ಟಿ. ಎಸ್ ಕಾರ್ಯಕ್ರಮ ನಿರೂಪಿಸಿದರು. ಜೀವನ್ ಕುಮಾರ್ ಪ್ರಾರ್ಥಿಸಿದರು.