Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

30 June 2017

ವಿವಿಧ ವಿದ್ಯಾರ್ಥಿ ಸಂಘಗಳ ಉದ್ಘಾಟನೆ


“ಶಾಲಾ ದಿನಗಳಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸ ಅಗತ್ಯ. ಶಾಲೆಯಲ್ಲಿರುವ ವಿವಿಧ ಸಂಘಗಳು ಇದಕ್ಕೆ ಪೂರಕ ವಾತಾವರಣವನ್ನು ನಿರ್ಮಿಸುತ್ತವೆ. ವಿದ್ಯಾರ್ಥಿಗಳು ಇಂತಹ ಸಂಘಗಳಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಬೇಕು.” ಎಂದು ನಮ್ಮ ಶಾಲೆಯ ಮುಖ್ಯೋಪಾಧ್ಯಾಯ ಸಿ.ಎಚ್ ವೆಂಕಟರಾಜ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ವಿವಿಧ ವಿದ್ಯಾರ್ಥಿ ಸಂಘಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಹಿರಿಯ ಶಿಕ್ಷಕ ಸೂರ್ಯನಾರಾಯಣ.ಎಚ್ ಅಧ್ಯಕ್ಷತೆ ವಹಿಸಿದರು. ಶಿಕ್ಷಕಿ ಸರಸ್ವತಿ.ಸಿ.ಎಚ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ವಿದ್ಯಾರ್ಥಿನಿ ಶರ್ವಾಣಿ.ಕೆ ಸ್ವಾಗತಿಸಿ ಕಾರ್ತಿಕ್ ಕೃಷ್ಣ.ಕೆ ವಂದಿಸಿದರು. ಅದಿತಿ.ಕೆ ಮತ್ತು ಮುರಳೀಮಾಧವ.ಸಿ ಕಾರ್ಯಕ್ರಮ ನಿರೂಪಿಸಿದರು.

27 June 2017

ತರಗತಿಯೊಳಗೆ ವಸ್ತು ಪ್ರದರ್ಶನ


ಹೊಸತಾಗಿ ನಮ್ಮ ಶಾಲೆಗೆ ಕಾಲಿರಿಸಿದ ವಿದ್ಯಾರ್ಥಿಗಳು ಪ್ರಾಚೀನ ವಸ್ತುಗಳ ಕಡೆಗೆ ಗಮನ ನೀಡಿ ಅದನ್ನು ಅಕ್ಕರೆಯಿಂದ ಶಾಲೆಗೆ ಹೊತ್ತು ತಂದು ಇಂದು ತರಗತಿಯಲ್ಲಿ ಪ್ರದರ್ಶಿಸಿ ಸಂತಸಪಟ್ಟುಕೊಂಡರು. ಹಳೆಯ ಕಾಲದ ನಾಣ್ಯಗಳು, ಅಳತೆ ಪಾತ್ರೆಗಳು, ಉಪ್ಪಿನ ಮರಿಗೆ... ಇತ್ಯಾದಿ ವಸ್ತುಗಳನ್ನು ಕಂಡವರಿಗೆ ಪ್ರದರ್ಶಿಸುವ ಕುತೂಹಲ, ನೋಡದವರಿಗೆ ವೀಕ್ಷಿಸುವ ಕುತೂಹಲ. ಇಂದು ಐದನೇ ತರಗತಿಯಲ್ಲಿ ಇಂತಹ ನೆನಪಿನಲ್ಲಿ ಉಳಿಯುವ ಕಾರ್ಯಕ್ರಮ ಜರಗಿತು.

21 June 2017

ಯೋಗ ದಿನಾಚರಣೆ



ನಮ್ಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸಂತೋಷ್.ಪಿ.ಎಚ್ ಇವರ ನೇತೃತ್ವದಲ್ಲಿ ಇಂದು ಯೋಗ ದಿನಾಚರಣೆ ನಡೆಯಿತು. ಆರಂಭದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಉದ್ಘಾಟಿಸಿದರು. ಶಾಲಾ ಹಿರಿಯ ಶಿಕ್ಷಕ ಎಚ್.ಸೂರ್ಯನಾರಾಯಣ ಸಭಾಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಕೃಷ್ಣಪ್ರಸಾದ.ಟಿ ಕಾರ್ಯಕ್ರಮ ನಿರೂಪಿಸಿದರು.

15 June 2017

ಎಡನೀರು ಯಕ್ಷಗಾನ ಶಿಬಿರ ಸಂದರ್ಶನ


ಎಡನೀರು ಮಠದ ಆವರಣದಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ತರಬೇತಿ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ಯಕ್ಷಗಾನ ತರಬೇತಿಯನ್ನು ಇಂದು ಮಕ್ಕಳೊಂದಿಗೆ ವೀಕ್ಷಿಸಿ ಬಂದೆವು. ಶಾಲಾ ಬಸ್ಸಿನಲ್ಲಿ ಎಡನೀರಿಗೆ ತೆರಳಿ ಅಲ್ಲಿನ ಶಿಬಿರವನ್ನು ನೋಡಿ, ಸಂದೇಹವನ್ನು ಪರಿಹರಿಸಿ ಹಿಂತಿರುಗಿದಾಗ ಮಕ್ಕಳಿಗೆ ಅಪಾರ ಖುಷಿಯಾಯಿತು.

06 June 2017

ಶಾಲಾ ಸುರಕ್ಷಾ ಸಮಿತಿ


ಶಾಲಾ ಪರಿಸರದಲ್ಲಿ ಮಾದಕ ದ್ರವ್ಯ ಉಪಯೋಗವನ್ನು ನಿಯಂತ್ರಿಸಲು ಮತ್ತು ಶಾಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಸಹಕರಿಸಲು ಶಾಲಾ ಸುರಕ್ಷಾ ಸಮಿತಿಯನ್ನು ಇಂದು ರೂಪೀಕರಿಸಲಾಯಿತು. ಈ ಸಮಿತಿಯು ಶಾಲೆ ಮತ್ತು ಪರಿಸರದ ವಾತಾವರಣವನ್ನು ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತೆ ಉಳಿಸಲಿದೆ. ಈ ಸಮಿತಿಯ ಪದಾಧಿಕಾರಿಗಳನ್ನು ಇಂದು ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ, ಸಂಚಾಲಕರಾಗಿ ಬದಿಯಡ್ಕ ಪೋಲೀಸ್ ಠಾಣೆಯ ಎಸ್.ಐ ಅಂಬಾಡಿ.ಕೆ.ಆರ್ ಇವರನ್ನು ಆಯ್ಕೆ ಮಾಡಲಾಯಿತು. ಸಮಿತಿಯ ಸದಸ್ಯರಾಗಿ ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಶಂಕರ.ಡಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ, ಶಾಲಾ ಮಾತೃ ಸಮಿತಿಯ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ.ಕೆ, ಶಾಲಾ ಶಿಕ್ಷಕರಾದ ಶ್ರೀಮತಿ ವಿನೋದಿನಿ.ಕೆ, ಶಿವಪ್ರಕಾಶ್.ಎಂ.ಕೆ, ಸಂತೋಷ್.ಪಿ.ಎಚ್, ರಂಜಿತ್, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ನೀರ್ಚಾಲು ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್.ಎಂ, ಆಟೋರಿಕ್ಷಾ ಡ್ರೈವರ್ ಸದಾನಂದ.ಪಿ ಮತ್ತು ಶಾಲಾ ಬಸ್ ಚಾಲಕ ಗಂಗಾಧರ.ಪಿ ಇವರನ್ನು ಆಯ್ಕೆ ಮಾಡಲಾಯಿತು. ಈ ಸಮಿತಿಯು ಶಾಲಾ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸಿ, ಶಾಲೆಯನ್ನು ಸುರಕ್ಷಿತವಾಗಿ ಇರಿಸಲಿದೆ.

05 June 2017

ವಿಶ್ವಪರಿಸರ ದಿನಾಚರಣೆ


ಇಂದು ನಮ್ಮ ಶಾಲೆಯಲ್ಲಿ ಜರಗಿದ ವಿಶ್ವಪರಿಸರ ದಿನಾಚರಣೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಶಾಲಾ ಪರಿಸರದಲ್ಲಿ ಗಿಡವನ್ನು ನೆಟ್ಟು ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಿದರು. ಇಕೋ ಕ್ಲಬ್ ಸಂಚಾಲಕ ಶಿವಪ್ರಕಾಶ್.ಎಂ.ಕೆ, ಶಿಕ್ಷಕರಾದ ಗೋವಿಂದ ಶರ್ಮ.ಕೆ, ದೈಹಿಕ ಶಿಕ್ಷಣ ವಿಭಾಗದ ಶಿಕ್ಷಕ ಸಂತೋಷ್, ಹಿರಿಯ ಶಿಕ್ಷಕಿ ಅನ್ನಪೂರ್ಣ ಮತ್ತು ಸರಿತಾ. ಪಿ.ಎಸ್ ಉಪಸ್ಥಿತರಿದ್ದರು.

02 June 2017

ದಿಶಾಂತ್. ಕೆ - ಯು.ಎಸ್.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣ


2016-17 ನೇ ಸಾಲಿನಲ್ಲಿ ಕೇರಳ ಸರಕಾರದ ವಿದ್ಯಾಭ್ಯಾಸ ಇಲಾಖೆಯು ನಡೆಸಿದ ಯು.ಎಸ್.ಎಸ್ ಪರೀಕ್ಷೆಯಲ್ಲಿ  ನಮ್ಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ದಿಶಾಂತ್ .ಕೆ ತೇರ್ಗಡೆ ಹೊಂದಿ ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದಿದ್ದಾನೆ. ಈತ ನಾರಾಯಣಮಂಗಲ ‘ಶ್ರೀ ಹರಿ ಕೃಪಾ’ ನಿವಾಸಿ ಮಹೇಶ್.ಕೆ ಮತ್ತು ತಾರಾವತಿ.ಜಿ.ಕೆ ದಂಪತಿಯ ಪುತ್ರ. ಶುಭ ಹಾರೈಕೆಗಳು...

01 June 2017

ಶಾಲಾ ಪ್ರವೇಶೋತ್ಸವ


ನಮ್ಮ ಶಾಲೆಯಲ್ಲಿ ಪ್ರವೇಶೋತ್ಸವವು ಇಂದು ಜರಗಿತು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ, ರಕ್ಷಕ ಶಿಕ್ಷಕ ಸಂಘದ ಸದಸ್ಯರು ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಿದರು. ನೂತನ ಶೈಕ್ಷಣಿಕ ವರ್ಷಕ್ಕೆ ‘ಮಹಾಜನ’ ದ ಶುಭಾಶಯಗಳು...