Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

26 June 2014

ಮಾದಕ ದ್ರವ್ಯ ವಿರುದ್ಧ ದಿನ 2014




ಮಾದಕ ದ್ರವ್ಯ ವಿರುದ್ಧ ದಿನದ ಅಂಗವಾಗಿ ನಮ್ಮ ಶಾಲೆಯ ವಿದ್ಯಾರ್ಥಿಗಳಿಂದ ಪೋಸ್ಟರ್ ರಚನಾ ಕಾರ್ಯಕ್ರಮ ಮತ್ತು ನೀರ್ಚಾಲು ಪೇಟೆಯಲ್ಲಿ 26.06.2014 ಗುರುವಾರ ಮೆರವಣಿಗೆ ನಡೆಯಿತು.

21 June 2014

ವಿದ್ಯಾರ್ಥಿಗಳಿಗೆ ಕೊಡೆ ಕೊಡುಗೆ

   
“ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಲಿಕೆಗೆ ಅನುಕೂಲಕರ ವಾತಾವರಣವನ್ನು ಮತ್ತು ಆರ್ಥಿಕ ಸಹಾಯವನ್ನು ಒದಗಿಸುವುದು ಪರಿಸರದ ಹಿರಿಯರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಸಂಸ್ಥೆಗಳಿಗೆ ಬದ್ಧತೆ ಇರಬೇಕು, ಆ ಮೂಲಕ ಕಲಿಕಾ ಸಾಮಾಗ್ರಿಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುವತ್ತ ಗಮನ ಹರಿಸಬೇಕು" ಎಂದು ಕೇರಳ ಗ್ರಾಮೀಣ ಬ್ಯಾಂಕ್ ರೀಜನಲ್ ಮೇನೇಜರ್ ದಾಮೋದರ ಅಭಿಪ್ರಾಯಪಟ್ಟರು. ಅವರು ನಿನ್ನೆ ನಮ್ಮ ಶಾಲೆಯ ಐದನೇ ತರಗತಿ ವಿದ್ಯಾರ್ಥಿಗಳಿಗೆ ಕೇರಳ ಗ್ರಾಮೀಣ ಬ್ಯಾಂಕ್ ಪುತ್ತಿಗೆ ಶಾಖೆ ಮತ್ತು ದಾನಿಗಳಾದ ಉದ್ಯಮಿ ಕೆ.ಎಂ. ಅಬ್ದುಲ್ ರಹಮಾನ್, ನೀರ್ಚಾಲು ಕರ್ನಾಟಕ ಬ್ಯಾಂಕ್ ಶಾಖಾ ಪ್ರಬಂಧಕ ಶಿವಶಂಕರ, ಪೆರಡಾಲ ಪ್ರಿಂಟಿಂಗ್ ಪ್ರೆಸ್ ಮಾಲಕ ನಾರಾಯಣ ಮಣಿಯಾಣಿ ಮೊಳೆಯಾರು, ಬಿ.ಕೃಷ್ಣ ಟೈಲರ್ ಉಚಿತವಾಗಿ ನೀಡಿದ ಕೊಡೆಗಳನ್ನು ವಿತರಿಸಿ ಮಾತನಾಡುತಿದ್ದರು.
    ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಕೇರಳ ಗ್ರಾಮೀಣ ಬ್ಯಾಂಕ್ ಪುತ್ತಿಗೆ ಶಾಖಾ ಪ್ರಬಂಧಕ ಚಂದ್ರಶೇಖರನ್ ನಾಯರ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ, ರಕ್ಷಕ ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವಪ್ರಸಾದ್ ಹೊಸಮನೆ, ವಿದ್ಯಾ.ಬಿ ಕೋಣಮ್ಮೆ , ಶಾಲಾ ಮುಖ್ಯೋಪಾಧ್ಯಾಯ ಕೆ.ಶಂಕರನಾರಾಯಣ ಶರ್ಮ ಉಪಸ್ಥಿತರಿದ್ದರು. ಶಾಲಾ ಶಿಕ್ಷಕರಾದ ಕೆ.ನಾರಾಯಣ ಭಟ್ ಸ್ವಾಗತಿಸಿ, ಎಂ.ಸೂರ್ಯನಾರಾಯಣ ಧನ್ಯವಾದ ಸಮರ್ಪಿಸಿದರು.

19 June 2014

ವಾಚನಾ ಸಪ್ತಾಹ - 2014

   
“ಓದಬೇಕು, ಓದಿ ಕಲಿಯಬೇಕು, ಆ ಮೂಲಕ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಅಜ್ಞಾನವು ಅಂಧಕಾರವನ್ನು ಸೂಚಿಸುತ್ತದೆ. ಆದರೆ ಅಕ್ಷರವು ಬೆಂಕಿ, ಜ್ಞಾನವು ಬೆಳಕು. ಜ್ಞಾನವು ಜಗತ್ತನ್ನು ವ್ಯಾಪಿಸಲಿ. ಬೆಳಕು ಜಗತ್ತನ್ನು ತುಂಬಿ ಶಾಂತಿ, ಸಮೃದ್ಧಿ ನೆಲೆಸಲಿ” ಎಂದು ನಮ್ಮ ಶಾಲೆಯ ಮುಖ್ಯೋಪಾಧ್ಯಾಯ ಕೆ.ಶಂಕರನಾರಾಯಣ ಶರ್ಮ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ವಾಚನಾ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

    ಶಿಕ್ಷಕರಾದ ಕೆ.ನಾರಾಯಣ ಭಟ್, ಸಿ.ಎಚ್. ಸುಬ್ರಹ್ಮಣ್ಯ ಭಟ್, ಎಂ.ಸೂರ್ಯನಾರಾಯಣ ಮತ್ತು ಶಿಕ್ಷಕಿ ವಾಣಿ.ಪಿ.ಎಸ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಚೇತನಕೃಷ್ಣ.ಸಿ.ವಿ ಮತ್ತು ಸ್ವಾಗತ ರೈ.ಕೆ ಓದುವಿಕೆಯ ಮಹತ್ವದ ಬಗ್ಗೆ ಮಾತನಾಡಿದರು. ವಾಚನ ಸಪ್ತಾಹದ ಅಂಗವಾಗಿ ಜರಗಿದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.  ವಿದ್ಯಾರ್ಥಿಗಳಾದ ಕುಮಾರ ಸುಬ್ರಹ್ಮಣ್ಯ.ಎಚ್ ಸ್ವಾಗತಿಸಿ ಅಭಿಲಾಶ ಶರ್ಮಾ.ಎಂ ವಂದಿಸಿದರು. ರಾಮಕಿಶೋರ.ಎಚ್ ಕಾರ್ಯಕ್ರಮ ನಿರೂಪಿಸಿದರು.

05 June 2014

ವಿಶ್ವ ಪರಿಸರ ದಿನ 2014

ವಿಶ್ವ ಪರಿಸರ ದಿನದ ಅಂಗವಾಗಿ ಇಂದು ನಮ್ಮ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಕೆ.ಶಂಕರನಾರಾಯಣ ಶರ್ಮ ಮತ್ತು ವಿದ್ಯಾರ್ಥಿಗಳು ಗಿಡವನ್ನು ನೆಟ್ಟು ಪರಿಸರ ದಿನ ಸಂದೇಶವನ್ನು ಸಾರಿದರು.

02 June 2014

ಶಾಲಾ ಪ್ರವೇಶೋತ್ಸವ 2014

ನಮ್ಮ ಶಾಲೆಯಲ್ಲಿ ಇಂದು ಜರಗಿದ 2014-15 ನೇ ವರ್ಷದ ಶಾಲಾ ಪ್ರವೇಶೋತ್ಸವದಲ್ಲಿ ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ವಿದ್ಯಾರ್ಥಿಗಳಿಗೆ ಪುಷ್ಪಗುಚ್ಛ ಮತ್ತು ಪುಸ್ತಕಗಳನ್ನು ನೀಡಿ ಸ್ವಾಗತಿಸಿದರು. ಶಾಲಾ ನೂತನ ಮುಖ್ಯೋಪಾಧ್ಯಾಯ ಕೆ.ಶಂಕರನಾರಾಯಣ ಶರ್ಮ ಉಪಸ್ಥಿತರಿದ್ದರು.