Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

26 June 2013

ಮಾದಕ ದ್ರವ್ಯ ವಿರುದ್ಧ ದಿನ

 
“ನೈತಿಕತೆಯನ್ನು ಬದಿಗಿರಿಸಿ ಮಾದಕ ದ್ರವ್ಯಗಳ ದಾಸರಾಗುವತ್ತ ಯುವ ಸಮೂಹ ಮುಖ ಮಾಡಿರುವುದು ಸಮಾಜವನ್ನು ನಲುಗಿಸಲು ಆರಂಭಿಸಿದೆ. ಆ ಮೂಲಕ ಸಮಾಜದ ಧನ, ಆರೋಗ್ಯ ಬಲ ಕುಸಿತಗೊಳ್ಳುತ್ತಿದೆ. ಇದರಿಂದಾಗಿ ದೇಶ ಉನ್ಮತ್ತವಾಗಲು ಆರಂಭಿಸಿದೆ ಹಾಗೂ ಭವಿಷ್ಯದ ಕುರಿತ ಚಿಂತನೆ ಶೋಚನೀಯವಾಗುತ್ತಿದೆ. ಮಾದಕ ದ್ರವ್ಯಗಳನ್ನು ವಿರೋಧಿಸುವ ಮೂಲಕ ಸುಸಂಸ್ಕೃತ ಸಮಾಜವನ್ನು ರೂಪಿಸುವತ್ತ ನಾವು ಶ್ರಮಿಸಬೇಕಾಗಿದೆ" ಎಂದು ನಮ್ಮ ಶಾಲೆಯ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ವಿಶ್ವ ಮಾದಕ ದ್ರವ್ಯ ವಿರುದ್ಧ ದಿನದ ಅಂಗವಾಗಿ ಜರಗಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
    ಶಿಕ್ಷಕರಾದ ಕೆ.ಶಂಕರನಾರಾಯಣ ಶರ್ಮ, ಕೆ.ನಾರಾಯಣ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ರೀಶ.ಕೆ ಮತ್ತು ಸ್ವಾಗತ ರೈ ಓದುವಿಕೆಯ ಮಹತ್ವದ ಬಗ್ಗೆ ಮಾತನಾಡಿದರು. ವಿದ್ಯಾರ್ಥಿನಿ ಸೌಮ್ಯ ಸ್ವಾಗತಿಸಿ ಭವ್ಯಲಕ್ಷ್ಮಿ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಎಂ.ಸೂರ್ಯನಾರಾಯಣ ಕಾರ್ಯಕ್ರಮ ನಿರೂಪಿಸಿದರು.

25 June 2013

ಗದ್ದೆಗೆ ಸಂದರ್ಶನ

ನಮ್ಮ ಶಾಲೆಯ ವಿದ್ಯಾರ್ಥಿಗಳು ಇಂದು ಮೈಕುರಿ ಕೃಷ್ಣ ನಾಯ್ಕರ ಗದ್ದೆಯನ್ನು ಸಂದರ್ಶಿಸಿ ಭತ್ತದ ಬಿತ್ತನೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಕೃಷಿಯ ಕಷ್ಟ ಸುಖಗಳನ್ನು ಆಲಿಸುವಲ್ಲಿ ಕೃಷ್ಣ ನಾಯ್ಕ್ ಮತ್ತು ಅವರ ಸಹೋದರ ಕುಞಪ್ಪು ನಾಯ್ಕ್ ನಮ್ಮ ಜೊತೆ ಸಹಕರಿಸಿದ್ದು ನಮಗೆ ತುಂಬಾ ಸಂತೋಷ ನೀಡಿದೆ. ಧನ್ಯವಾದಗಳು.

19 June 2013

ವಾಚನಾ ಸಪ್ತಾಹ - ಉದ್ಘಾಟನೆ

  
  “ಓದು ಭವಿಷ್ಯದ ಹಾದಿಯನ್ನು ರೂಪಿಸುತ್ತದೆ. ಆಕರ್ಷಕ ಗ್ರಂಥಾಲಯಗಳು ಮತ್ತು ಅತ್ಯುತ್ತಮ ಪುಸ್ತಕಗಳು ಸಮಾಜವನ್ನು ತಮ್ಮತ್ತ ಸೆಳೆಯುತ್ತವೆ. ಈ ಓದುವಿಕೆ ವಿದ್ಯಾರ್ಥಿಗಳಿಗೆ ಅಪಾರ ಜ್ಞಾನ ಸಂಪತ್ತನ್ನು ಒದಗಿಸುತ್ತದೆ. ಉತ್ತಮ ಪ್ರಜೆಗಳಾಗಿ ಬೆಳೆಯಲು ಓದುವಿಕೆ ಅನಿವಾರ್ಯ." ಎಂದು ನಮ್ಮ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಕೆ.ಶಂಕರನಾರಾಯಣ ಶರ್ಮ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ವಾಚನಾ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
    ಶಿಕ್ಷಕರಾದ ಕೆ.ನಾರಾಯಣ ಭಟ್ ಮತ್ತು ಶಿಕ್ಷಕಿ ವಾಣಿ.ಪಿ.ಎಸ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ರೀಶ.ಕೆ ಮತ್ತು ಸ್ವಾಗತ ರೈ ಓದುವಿಕೆಯ ಮಹತ್ವದ ಬಗ್ಗೆ ಮಾತನಾಡಿದರು. ವಿದ್ಯಾರ್ಥಿನಿ ಮಂಜೂಷಾ.ಪಿ.ಎಸ್ ಸ್ವಾಗತಿಸಿ ಮಹಿಮಾ. ಎಚ್.ಎನ್ ವಂದಿಸಿದರು. ಅಶ್ವಿನಿ.ಕೆ ಕಾರ್ಯಕ್ರಮ ನಿರೂಪಿಸಿದರು.

05 June 2013

‘ಯೋಚಿಸಿ, ಸೇವಿಸಿ, ಉಳಿಸಿ’ - ವಿಶ್ವ ಪರಿಸರ ದಿನ


  
   “ವಾತಾವರಣದಲ್ಲಿ ಅಂಗಾರಾಮ್ಲ ಮತ್ತು ಇತರ ವಿಷಕಾರಿ ಅನಿಲಗಳ, ಮಾಲಿನ್ಯದ ಪ್ರಮಾಣ ಗಣನೀಯವಾಗಿ ಏರುತ್ತಿದೆ. ಇದು ಜೀವಜಾಲದ ಭದ್ರತೆಗೆ ತೊಡಕಾಗಿ ಪರಿಣಮಿಸಿದೆ. ಆಹಾರದ ಉತ್ಪಾದನೆ ಸಸ್ಯಗಳಿಂದ ಮಾತ್ರ ಸಾಧ್ಯ. ಅಂತಹ ಸಸ್ಯಗಳಿಗೆ ಪರಿಸರವು ಮಾರಕವಾಗಿ ಪರಿಣಮಿಸುತ್ತಿರುವುದರಿಂದ ನಾವು ಪರಿಸರ ಸಂರಕ್ಷಣೆಯ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗಿದೆ. ಜೊತೆಗೆ ದೊರೆತ ಆಹಾರವನ್ನು ಯುಕ್ತಿಯಿಂದ ಉಪಯೋಗಿಸಬೇಕಾಗಿದೆ, ಮುಂದಿನ ತಲೆಮಾರಿನ ಜೀವಿಗಳಿಗಾಗಿ ಪರಿಸರವನ್ನು ಉಳಿಸಬೇಕಾಗಿದೆ" ಎಂದು ನಮ್ಮ ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ವಿಶ್ವಪರಿಸರ ದಿನಾಚರಣೆಯಲ್ಲಿ ಸಾಂಕೇತಿಕವಾಗಿ ಗಿಡ ನೆಟ್ಟು ಮಾತನಾಡುತ್ತಿದ್ದರು.

ಶಿಕ್ಷಕರಾದ ಕೆ.ಶಂಕರನಾರಾಯಣ ಶರ್ಮ, ಶೈಲಜಾ. ಬಿ ಉಪಸ್ಥಿತರಿದ್ದರು. ಇಕೋ ಕ್ಲಬ್ ಸಂಚಾಲಕ ಶಿವಪ್ರಕಾಶ್.ಎಂ.ಕೆ ಸ್ವಾಗತಿಸಿ ವಿದ್ಯಾರ್ಥಿ ನಾಯಕ ಶ್ರೀಶ.ಕೆ ವಂದಿಸಿದರು.

03 June 2013

ಶಾಲಾ ಪ್ರವೇಶೋತ್ಸವ 2013

  


  “ಕಲಿಕೆ ಆಧುನಿಕ ಕಾಲದ ಅನಿವಾರ್ಯತೆ. ಶಿಸ್ತುಬದ್ಧವಾದ ಶಿಕ್ಷಣ ಸುಸಂಸ್ಕೃತ ಸಮಾಜವನ್ನು ರೂಪಿಸುತ್ತದೆ. ಈ ನಿಟ್ಟಿನಲ್ಲಿ ಶಾಲೆಯ ಮೆಟ್ಟಿಲುಗಳನ್ನು ಏರಿ ಬರುತ್ತಿರುವ ಎಲ್ಲ ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗಲಿ, ಬಾಳು ಹಸನಾಗಲಿ" ಎಂದು ನಮ್ಮ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ನಟರಾಜ ರಾವ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ನೂತನ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
    ರಕ್ಷಕ ಶಿಕ್ಷಕ ಸಂಘದ ಮಾತೃ ವಿಭಾಗದ ಅಧ್ಯಕ್ಷೆ ಅನ್ನಪೂರ್ಣ ಕುಳಮರ್ವ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಪ್ರಾಸ್ತಾವಿಕ ಭಾಷಣ ಮಾಡಿದರು. ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಎಂ.ಸೂರ್ಯನಾರಾಯಣ ಸ್ವಾಗತಿಸಿದರು. ಶಿಕ್ಷಕ ಟಿ.ಕೃಷ್ಣಪ್ರಸಾದ ಬಣ್ಪುತ್ತಡ್ಕ ವಂದಿಸಿದರು. ಚಿತ್ರಕಲಾ ಶಿಕ್ಷಕ ಕೆ.ಗೋವಿಂದ ಶರ್ಮ ಕಾರ್ಯಕ್ರಮ ನಿರೂಪಿಸಿದರು.

01 June 2013

ಮರುಮೌಲ್ಯಮಾಪನ - ಚೈತಾಲಿಗೆ ಎಲ್ಲ ಎ+

ಕೇರಳ ಸರಕಾರವು ಮಾರ್ಚ್ 2013ರಲ್ಲಿ ನಡೆಸಿದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಮರುಮೌಲ್ಯಮಾಪನದ ಫಲಿತಾಂಶವು ಬಂದಿದ್ದು ನಮ್ಮ ಶಾಲೆಯ ವಿದ್ಯಾರ್ಥಿನಿ ಚೈತಾಲಿ. ಕೆ.ಎನ್ ಎಲ್ಲ ಹತ್ತು ವಿಷಯಗಳಲ್ಲೂ ಎ+ ಗ್ರೇಡ್ ಪಡೆದಿದ್ದಾಳೆ. ಹಿಂದೆ ಫಲಿತಾಂಶ ಬಂದಿದ್ದಾಗ ಈಕೆಗೆ ಹಿಂದಿಯಲ್ಲಿ ಮಾತ್ರ ಎ ಗ್ರೇಡ್ ದೊರೆತಿತ್ತು. ಆದ್ದರಿಂದ ಈಕೆ ಮರುಮೌಲ್ಯಮಾಪನಕ್ಕೆ ಅಪೇಕ್ಷೆ ಸಲ್ಲಿಸಿದ್ದಳು. ಇದರೊಂದಿಗೆ ನಮ್ಮ ಶಾಲೆಯ ಏಳು ಮಂದಿ ವಿದ್ಯಾರ್ಥಿಗಳಿಗೆ ಎಲ್ಲ ಹತ್ತು ವಿಷಯಗಳಲ್ಲೂ ಎ+ ಗ್ರೇಡ್ ದೊರೆತಂತಾಗಿದೆ. ಈಕೆ ನಿಡುಗಳ ನಿವಾಸಿ ಕೆ.ಎನ್.ವೆಂಕಟ್ರಮಣ ಭಟ್ ಮತ್ತು ಕುಸುಮಾ ಇವರ ಪುತ್ರಿ. ಅಂದ ಹಾಗೆ ಶಾಲೆ ನಾಡಿದ್ದು ಸೋಮವಾರ, ಜೂನ್ 3 ರಂದು ಹೊಸ ಅಧ್ಯಯನ ವರ್ಷಕ್ಕಾಗಿ ಬಾಗಿಲು ತೆರೆಯಲಿದೆ. ಅಕ್ಷರದ ಮೆಟ್ಟಿಲನ್ನು ಏರಲು ಆಗಮಿಸುವ ಎಲ್ಲ ವಿದ್ಯಾರ್ಥಿಗಳಿಗೆ ಸ್ವಾಗತಗಳು. ಆ ದಿನ ನಮಗೆ ಪ್ರವೇಶೋತ್ಸವ...