ವ್ಯಾವಹಾರಿಕವಾಗಿ ನಾಳೆಯಿಂದ ೨೦೧೧ ಹೊಸ ವರ್ಷ ಪ್ರಾರಂಭ. ನಮಗೆಲ್ಲರಿಗೂ ಹೊಸ ಕ್ಯಾಲೆಂಡರ್ ವರ್ಷ ಸುಖ, ಶಾಂತಿ, ನೆಮ್ಮದಿ ತರಲೆಂದು ಹಾರೈಸುತ್ತೇವೆ.
31 December 2010
27 December 2010
ಸಮಗ್ರ ಪ್ರಶಸ್ತಿ ಪಡೆದ ತಂಡ
10 December 2010
ಸಂಸ್ಕೃತೋತ್ಸವ ಚಾಂಪಿಯನ್, ಸಮಗ್ರ ರನ್ನರ್ಸ್ ಅಪ್...
ನಮ್ಮ ನಿಮ್ಮೆಲ್ಲರ ಹಾರೈಕೆ ಸಫಲವಾಗಿದೆ. ಸೂರಂಬೈಲಿನಲ್ಲಿ ನಿನ್ನೆ ಮುಕ್ತಾಯವಾದ ಕುಂಬಳೆ ಉಪಜಿಲ್ಲಾ ಕಲೋತ್ಸವದಲ್ಲಿ ನಮ್ಮ ವಿದ್ಯಾರ್ಥಿಗಳು ಕೆಲವಾರು ಟ್ರೋಫಿಗಳನ್ನು ಕೂಡಾ ಹೊತ್ತು ತಂದಿದ್ದಾರೆ. ಸಂಸ್ಕೃತೋತ್ಸವ ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಮತ್ತು ಯುಪಿ ವಿಭಾಗದಲ್ಲಿ ದ್ವಿತೀಯ ಸ್ಥಾನದ ಗೌರವದಿಂದಾಗಿ ನಮ್ಮ ವಿದ್ಯಾರ್ಥಿಗಳಿಗೆ ಅರ್ಹವಾದ ಸಂಸ್ಕೃತೋತ್ಸವ ಚಾಂಪಿಯನ್ ಪ್ರಶಸ್ತಿ ದೊರೆತಿದೆ. ಉಳಿದ ವಿಭಾಗಗಳಲ್ಲೂ ಬಹುಮಾನಗಳು ಬಂದಿರುವುದರಿಂದ ಎಲ್ಲಾ ವಿಭಾಗದ ಕಲೋತ್ಸವದಲ್ಲಿ ರನ್ನರ್ಸ್ ಅಪ್ ಆಗಲು ಸಾಧ್ಯವಾಗಿದೆ. ನಿಮಗಾಗಿ ಒಂದು ಸೂಚನೆ: ಪ್ರಥಮ ಸ್ಥಾನ ಪಡೆದ ಶಾಲೆಯಲ್ಲಿ ಒಂದರಿಂದ ಹನ್ನೆರಡರ ತನಕ ತರಗತಿಗಳಿವೆ, ಅರಬಿಕ್ ಸ್ಪರ್ಧೆಗಳಲ್ಲಿ ಭಾಗವಿಸುವ ವಿದ್ಯಾರ್ಥಿಗಳಿದ್ದಾರೆ. ನಮ್ಮ ವಿದ್ಯಾರ್ಥಿಗಳು ಐದರಿಂದ ಹತ್ತು ತರಗತಿಯವರು ಮಾತ್ರ.
08 December 2010
ಕುಂಬಳೆ ಉಪಜಿಲ್ಲಾ ಕಲೋತ್ಸವ: ನಾವು ಮುನ್ನಡೆಯಲ್ಲಿ...
ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ಮೊನ್ನೆ ೩ನೇ ತಾರೀಕಿನಂದು ಸೂರಂಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭವಾದ ವಿಚಾರ ನಮಗೆ ತಿಳಿದಿರಬಹುದು. ಇಂದು ಮಧ್ಯಾಹ್ನ ದೊರೆತ ವಿವರದ ಪ್ರಕಾರ ನಮ್ಮ ಶಾಲೆ ಸಮಗ್ರ ೧೬೯ ಅಂಕಗಳನ್ನು ಪಡೆದು ಪ್ರಥಮ ಸ್ಥಾನದಲ್ಲಿ ಮುಂದುವರಿಯುತ್ತಿದೆ.
01 December 2010
ಚಿಣ್ಣರ ಅಂಗಳಕ್ಕೆ ಪುತ್ಥಳಿ ಯಾತ್ರೆ
ಕಾಸರಗೋಡಿನ ಪ್ರಸಿದ್ಧ ಗೊಂಬೆಯಾಟ ಸಂಘದ ರೂವಾರಿ, ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ನಮ್ಮ ಶಾಲಾ ಹಳೆ ವಿದ್ಯಾರ್ಥಿ ಕೆ.ವಿ.ರಮೇಶ್ ನೇತೃತ್ವದಲ್ಲಿ ಗೋಪಾಲಕೃಷ್ಣ ಗೊಂಬೆಯಾಟ ಸಂಘದ ‘ನರಕಾಸುರ ವಧೆ’ ಪ್ರದರ್ಶನ ನಿನ್ನೆ ನಮ್ಮ ಶಾಲೆಯಲ್ಲಿ ಜರಗಿತು. ನಮ್ಮ ಶಾಲಾ ಮುಖ್ಯೋಪಾಧ್ಯಾಯರಾದ ಯು.ರವಿಕೃಷ್ಣ ವಿನೂತವಾಗಿ ಸೂತ್ರದ ಗೊಂಬೆಯ ಸಹಾಯದಿಂದ ಉದ್ಘಾಟನೆ ನೆರವೇರಿಸಿದರು. ಗೊಂಬೆಯಾಟ ಕಾರ್ಯಕ್ರಮ ನಮ್ಮ ಪುಟಾಣಿಗಳ ಮನಸೂರೆಗೊಂಡಿತು.
29 November 2010
ಡಾ| ಮಹೇಶ್ - ಅಭಿನಂದನೆಗಳು
ನಿನ್ನೆ ಬದಿಯಡ್ಕ ನವಜೀವನ ಹಿರಿಯ ಪ್ರೌಢಶಾಲೆಯಲ್ಲಿ ಒಂದು ಒಳ್ಳೆಯ ಕಾರ್ಯಕ್ರಮ. ನಮ್ಮ ಶಾಲಾ ಹಳೆ ವಿದ್ಯಾರ್ಥಿ ಡಾ ಕೂಳಕ್ಕೋಡ್ಳು ಮಹೇಶ್ಗೆ ಅಭಿನಂದನಾ ಸಮಾರಂಭ. ಮನ ತುಂಬಿ ಹರಸಿದ ಸಭಾಸದರ ಮಧ್ಯೆ ಹಿರಿಯ ಸಂಸ್ಕೃತ ತಜ್ಞ ಡಾ ನಿಟಿಲಾಪುರ ಕೃಷ್ಣಮೂರ್ತಿ ಊರ ನಾಗರಿಕರ ಪರವಾಗಿ ಮಹೇಶರನ್ನು ಅಭಿನಂದಿಸಿದರು. ಮಹೇಶ್ಗೆ ನಮ್ಮೆಲ್ಲರ ಪ್ರೀತಿಯ ಹಾರೈಕೆಗಳು... ಚಂದದ ಫೋಟೋ ಒದಗಿಸಿದ ಯೇನಂಕೂಡ್ಳು ಕಿಶೋರ್ ಇವರಿಗೂ ಕೃತಜ್ಞತೆಗಳು...
26 November 2010
ಕೂಳಕ್ಕೋಡ್ಳು ಮಹೇಶ್ಗೆ ಅಭಿನಂದನೆ - ಬನ್ನ್ರಿ...
ನಮ್ಮ ಶಾಲಾ ಹಳೆವಿದ್ಯಾರ್ಥಿ ಕೂಳಕ್ಕೋಡ್ಳು ಮಹೇಶ್ ಡಾಕ್ಟರೇಟ್ ಗೌರವ ಪಡೆದ ಸುದ್ದಿಯನ್ನು ಈ ಹಿಂದೆಯೇ ಹೇಳಿದ್ದೇವೆ. ಊರವರೆಲ್ಲ ಸೇರಿಕೊಂಡು ಡಾಕೂಳಕ್ಕೋಡ್ಳು ಮಹೇಶ್ ಅಭಿನಂದನಾ ಸಮಿತಿ ರೂಪಿಸಿ, ನಾಡಿದ್ದು ಭಾನುವಾರ ನವೆಂಬರ್ ೨೮ ರಂದು ಅಪರಾಹ್ನ ೩.೩೦ಕ್ಕೆ ಬದಿಯಡ್ಕ ನವಜೀವನ ಪ್ರೌಢಶಾಲಾ ಸಭಾಂಗಣದಲ್ಲಿ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ತಾವೆಲ್ಲರೂ ಬರಬೇಕಾಗಿ ಅಪೇಕ್ಷೆ.
24 November 2010
ವಿದ್ಯಾರಂಗ ಕಲಾ ಸಾಹಿತ್ಯೋತ್ಸವ
“ಸಾಹಿತ್ಯ ಮತ್ತು ಕಲೆ ಶರೀರದ ಮಾನಸಿಕ ನೆಮ್ಮದಿಯ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎನ್ನುವುದು ವೈಜ್ಞಾನಿಕ ಸತ್ಯ. ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಲ್ಲಿ ಚಿಗುರುವ ಸಾಹಿತ್ಯದ ಮೊಳಕೆ ಅವರನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತದೆ. ವಿದ್ಯಾರ್ಥಿಗಳಲ್ಲಿ ಕಲೆ ಮತ್ತು ಸಾಹಿತ್ಯ ಅಭಿರುಚಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿದ್ಯಾರಂಗ ಕಲಾ ಸಾಹಿತ್ಯವೇದಿಕೆಯ ಪ್ರಯತ್ನ ಶ್ಲಾಘನೀಯ” ಎಂದು ಸಾಹಿತಿ ಶ್ರೀಕೃಷ್ಣಯ್ಯ ಅನಂತಪುರ ಅಭಿಪ್ರಾಯಪಟ್ಟರು. ಅವರು ನಿನ್ನೆ ಬೆಳಗ್ಗೆ ನಮ್ಮ ಶಾಲೆಗಳಲ್ಲಿ ನಡೆದ ಕುಂಬಳೆ ಉಪಜಿಲ್ಲಾ ವಿದ್ಯಾರಂಗ ಕಲಾ ಸಾಹಿತ್ಯೋತ್ಸವ - ೨೦೧೦ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಹಾಜನ ವಿದ್ಯಾ ಸಂಸ್ಥೆಗಳ ವ್ಯವಸ್ಥಾಪಕ ಖಂಡಿಗೆ ಶಾಮ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕರುಣಾಕರ ಅನಂತಪುರ ಧ್ವಜಾರೋಹಣ ನೆರವೇರಿಸಿದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯರಾದ ಸೌಮ್ಯಾ ಮಹೇಶ್, ಗಂಗಾಧರ ಗೋಳಿಯಡ್ಕ, ಮಂಜುನಾಥ, ಮಹಾಜನ ವಿದ್ಯಾಸಂಸ್ಥೆಗಳ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ನಟರಾಜ ರಾವ್ ಮತ್ತು ಬಾಲಕೃಷ್ಣ ಶೆಟ್ಟಿ, ಕಾರ್ಯಕಾರೀ ಸಮಿತಿ ಸದಸ್ಯ ಶಂಕರನಾರಾಯಣ ಭಟ್ ದೇವಸ್ಯ ಶುಭಹಾರೈಸಿದರು.
ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಸ್ವಾಗತಿಸಿದರು. ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ವಂದಿಸಿದರು. ಶಿಕ್ಷಕಿ ವಾಣಿ ಪಿ.ಎಸ್ ಕಾರ್ಯಕ್ರಮ ನಿರೂಪಿಸಿದರು. ಕುಂಬಳೆ ಉಪಜಿಲ್ಲೆಯ ವಿವಿಧ ಶಾಲೆಗಳಿಂದ ಬಂದ ೬೦೦ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ೧೭ ವೇದಿಕೆಗಳಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಜೋನಿ ಕ್ರಾಸ್ತಾ, ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಜಿಲ್ಲಾ ಸಂಚಾಲಕ ಅಶೋಕನ್ ಕುಣಿಯೇರಿ, ಕೇರಳ ವ್ಯಾಪಾರೀ ವ್ಯವಸಾಯಿ ಏಕೋಪನ ಸಮಿತಿಯ ನೀರ್ಚಾಲು ಘಟಕದ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಶುಭಹಾರೈಸಿದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಶೀಲಾ ಕೆ.ಎನ್. ಭಟ್ ಬಹುಮಾನ ವಿತರಿಸಿದರು.
ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕರುಣಾಕರ ಅನಂತಪುರ ಸ್ವಾಗತಿಸಿದರು. ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಉಪಜಿಲ್ಲಾ ಕಾರ್ಯದರ್ಶಿ ಜಯನ್ ಮಾಸ್ತರ್ ವಂದಿಸಿದರು. ಶಿಕ್ಷಕಿ ಶೈಲಜಾ.ಎ ಕಾರ್ಯಕ್ರಮ ನಿರೂಪಿಸಿದರು.
08 November 2010
೨೩ ಕ್ಕೆ ಉಪಜಿಲ್ಲಾ ವಿದ್ಯಾರಂಗ ಕಲೋತ್ಸವ, ಬನ್ನಿ...
ಕುಂಬಳೆ ಉಪಜಿಲ್ಲಾ ಮಟ್ಟದ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಕಲೋತ್ಸವ-೨೦೧೦ ನಮ್ಮ ಶಾಲೆಯಲ್ಲಿ ೨೩.೧೧.೨೦೧೦ ಮಂಗಳವಾರ ಜರಗಲಿರುವುದು. ದಿನಪೂರ್ತಿ ನಡೆಯುವ ಈ ಕಾರ್ಯಕ್ರಮದಲ್ಲಿ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಹೊರಗೆಡವಲಿದ್ದಾರೆ. ಈ ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ಆತ್ಮೀಯ ಸ್ವಾಗತ.
01 November 2010
ರಾಜ್ಯೋತ್ಸವ ಶುಭಾಶಯಗಳು...
20 October 2010
ಇಂದು ಕ್ರೀಡಾ ದಿನ
ಶಾಲಾ ಮಟ್ಟದ ಕ್ರೀಡಾ ಚಟುವಟಿಕೆಗಳು ಇಂದು ಮತ್ತು ನಾಳೆ ನಡೆಯಲಿವೆ. ವಿದ್ಯಾರ್ಥಿಗಳು ಹೊಸ ಉನ್ಮೇಷದೊಂದಿಗೆ ಸ್ಪರ್ಧೆಗಳಲ್ಲಿ ತಲ್ಲೀನರಾಗಿದ್ದಾರೆ. ಆಟ, ಓಟ... ಹೀಗೆ ಮೈದಾನ ತುಂಬ ಚಟುವಟಿಕೆಗಳು... ಎಲ್ಲ ಸ್ಪರ್ಧಾಳುಗಳಿಗೆ ನಮ್ಮ ಶುಭಾಶಯಗಳು.
19 October 2010
ಹಾಲು ವಿತರಣೆ
ಕೇರಳ ಸರಕಾರ ರಾಜ್ಯ ಮಟ್ಟದಲ್ಲಿ ವಾರದ ಎರಡು ದಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಹಾಲು ವಿತರಿಸಲು ನಿರ್ಧರಿಸಿದೆ. ಆ ಪ್ರಕಾರ ಇಂದು ಈ ಕಾರ್ಯಕ್ರಮದ ಶಾಲಾ ಉದ್ಘಾಟನೆಯನ್ನು ನಮ್ಮ ವಿದ್ಯಾಸಂಸ್ಥೆಗಳ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರುಗಳಾದ ಎಂ. ನಟರಾಜ ರಾವ್ ಮತ್ತು ಬಾಲಕೃಷ್ಣ ಶೆಟ್ಟಿ ನೆರವೇರಿಸಿದರು. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಉಪಸ್ಥಿತರಿದ್ದರು.
ಶ್ರೀ ಶಾರದಾ ಪೂಜೆ
ಮೊನ್ನೆ ಭಾನುವಾರ ನಮ್ಮ ವಿದ್ಯಾಸಂಸ್ಥೆಗಳಲ್ಲಿ ಶಾರದಾ ಪೂಜೆಯ ಸಂಭ್ರಮ. ಶ್ರೀಯುತ ಗೋಪಾಲಕೃಷ್ಣ ಭಟ್ಟರು ಶಾರದಾ ಪೂಜೆಯ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟರು. ಅಷ್ಟಾವಧಾನ ಸೇವೆ ನಮ್ಮ ಶಾಲಾ ಸಂಸ್ಕೃತ ಅಧ್ಯಾಪಕ ಶ್ರೀ ಎಸ್. ವಿ. ಭಟ್ಟರ ನೇತೃತ್ವದಲ್ಲಿ ಶ್ರೀ ಶಾರದಾಂಬೆಗೆ ಅಷ್ಟಾವಧಾನ ಸೇವೆ ಜರಗಿತು. ಆದರೆ ಈ ಎಲ್ಲ ಸಂಭ್ರಮಗಳ ನಡುವೆ ಒಂದು ಕಹಿ ನೆನಪು ನಮ್ಮನ್ನು ಕಾಡುತ್ತಿತ್ತು. ಕಳೆದ ವರ್ಷ ನಮ್ಮ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಇದೇ ದಿನ ೧೭.೧೦.೨೦೦೯ ರಂದು ಎರ್ದುಂಕಡವು ಹೊಳೆಯಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟಿದ್ದರು. ಅವರ ನೆನಪಿನಲ್ಲಿ ಎರಡು ದಿನ ಮ್ಲಾನವಾಗಿ ಕಳೆದು ಹೋಯಿತು. ಮೃತರ ಆತ್ಮಕ್ಕೆ ಮತ್ತೆ ನಮನಗಳನ್ನು ಸಲ್ಲಿಸುತ್ತೇವೆ...
13 October 2010
ಕೇರಳ ಕ್ರೀಡಾ ದಿನ ಆಚರಣೆ
11 October 2010
ಶಾಲೆ ತುಂಬ ಕಲೋತ್ಸವದ ಕಲರವ
07 October 2010
05 October 2010
ಗರ್ತಿಕೆರೆ ರಾಘಣ್ಣ ಗಾನ ಸುಧೆ
ಖ್ಯಾತ ಗಾಯಕ, ರಾಜ್ಯ ಪ್ರಶಸ್ತಿ ವಿಜೇತ ಹೊ.ನಾ.ರಾಘವೇಂದ್ರ ರಾವ್ (ಗರ್ತಿಕೆರೆ ರಾಘಣ್ಣ) ಇವರಿಂದ ಗಾನ ಸುಧೆ ಕಾರ್ಯಕ್ರಮ ನಮ್ಮ ಶಾಲೆಯಲ್ಲಿ ೦೪.೧೦.೨೦೧೦ ಸೋಮವಾರ ಜರಗಿತು. ಶಾಲಾ ಹಿರಿಯ ವಿದ್ಯಾರ್ಥಿ, ಖ್ಯಾತ ಸಾಹಿತಿ ಎಂ.ವಿ.ಭಟ್ ಮಧುರಂಗಾನ, ಶಾಲಾ ಆಡಳಿತ ಮಂಡಳಿಯ ಜಯದೇವ ಖಂಡಿಗೆ ಉಪಸ್ಥಿತರಿದ್ದರು. ನಿವೃತ್ತ ಚಿತ್ರಕಲಾ ಅಧ್ಯಾಪಕ ಬಾಲ ಮಧುರಕಾನನ ಗಾಯಕರನ್ನು ಪರಿಚಯಿಸಿ ಸ್ವಾಗತಿಸಿದರು. ಹಿರಿಯ ಅಧ್ಯಾಪಿಕೆ ವಾಣಿ. ಪಿ.ಎಸ್ ವಂದಿಸಿದರು.
04 October 2010
ನಮ್ಮ ತರಾವರಿ ತೋಟ
02 October 2010
24 September 2010
ಶಾಲಾ ವಿಜ್ಞಾನ ಮೇಳ
ಉದ್ಯೋಗ ಮಾಹಿತಿ
“ಕಾಸರಗೋಡು ಜಿಲ್ಲೆಯ ಕನ್ನಡ ವಿದ್ಯಾರ್ಥಿಗಳಲ್ಲಿ ಮಲಯಾಳದ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಉದ್ಯೋಗ ಕುರಿತಾದ ಮಾಹಿತಿ ಕಡಿಮೆ ಇದೆ. ಮಲಯಾಳದ ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವುದರ ಮೂಲಕ ಉದ್ಯೋಗಕ್ಕೆ ಅಗತ್ಯವಾದ ಕನಿಷ್ಟ ವಿದ್ಯಾಭ್ಯಾಸ ಕುರಿತಾದ ಮಾಹಿತಿಗಳನ್ನು ಪಡೆದುಕೊಳ್ಳುತ್ತಾರೆ. ಆದರೆ ಕನ್ನಡ ವಿದ್ಯಾರ್ಥಿಗಳಿಗೆ ಸಹಾಯಕವಾಗಬಲ್ಲ ಉದ್ಯೋಗ ಮಾಹಿತಿ ನೀಡುವದಕ್ಕೆಂದೇ ಮೀಸಲಾದ ಪತ್ರಿಕೆಗಳ ಕೊರತೆ ಇರುವುದರಿಂದ ಕನ್ನಡ ವಿದ್ಯಾರ್ಥಿಗಳು ಉತ್ತಮ ಅವಕಾಶದಿಂದ ವಂಚಿತರಾಗುತ್ತಿದ್ದಾರೆ" ಎಂದು ಕಾಸರಗೋಡು ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆಯ ಅಧಿಕಾರಿ ಯು.ಸುಕುಮಾರನ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ನಡೆಸಿದ “ಎಸ್.ಎಸ್.ಎಲ್.ಸಿ ನಂತರ ಮುಂದೇನು?" ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಹಿರಿಯ ಅಧ್ಯಾಪಕ ಕೆ.ಶಂಕರನಾರಾಯಣ ಶರ್ಮ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಸ್ಕೃತ ಅಧ್ಯಾಪಕ ಎಸ್.ವಿ.ಭಟ್ ಸ್ವಾಗತಿಸಿದರು. ಅಧ್ಯಾಪಕ ಟಿ.ಕೃಷ್ಣಪ್ರಸಾದ್ ವಂದಿಸಿದರು.
ಹಿರಿಯ ಅಧ್ಯಾಪಕ ಕೆ.ಶಂಕರನಾರಾಯಣ ಶರ್ಮ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಸ್ಕೃತ ಅಧ್ಯಾಪಕ ಎಸ್.ವಿ.ಭಟ್ ಸ್ವಾಗತಿಸಿದರು. ಅಧ್ಯಾಪಕ ಟಿ.ಕೃಷ್ಣಪ್ರಸಾದ್ ವಂದಿಸಿದರು.
15 September 2010
ಮಿಥುನ್ ಬಿಡಿಸಿದ ಚಿತ್ರ
08 September 2010
06 September 2010
ಶಿಕ್ಷಕರ ದಿನಾಚರಣೆ
“ಸಮಾಜಕ್ಕೆ ಶಿಕ್ಷಕರ ಮಹತ್ವವನ್ನು ಸಾರಿದ ಧೀಮಂತ ವ್ಯಕ್ತಿ ಡಾಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಶಿಕ್ಷಕರ ದಿನವನ್ನಾಗಿ ಕೊಂಡಾಡುವುದು ಅವರ ಜೀವನ ಸಂದೇಶವನ್ನು ಮೆಲುಕು ಹಾಕಲು ಉತ್ತಮ ಅವಕಾಶವನ್ನು ನೀಡುತ್ತದೆ. ಶಾಲೆಗಳಲ್ಲಿ ಶಿಕ್ಷಕರ ದಿನವನ್ನು ಆಚರಿಸಿಕೊಳ್ಳುವುದು ವಿದ್ಯಾರ್ಥಿಗಳಿಗೆ ಶಿಕ್ಷಕರನ್ನು ಗೌರವಿಸಲು ಅವಕಾಶವನ್ನು ಒದಗಿಸಿಕೊಡುತ್ತದೆ, ಆ ಮೂಲಕ ವಿದ್ಯಾರ್ಥಿಗಳಲ್ಲಿ ಗುರುಭಕ್ತಿ ಬೆಳೆಯುತ್ತದೆ" ಎಂದು ನಮ್ಮ ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಭಿಪ್ರಾಯಪಟ್ಟರು. ಅವರು ೦೬.೦೯.೨೦೧೦ ಸೋಮವಾರದಂದು ಶಿಕ್ಷಕರ ದಿನಾಚರಣೆಯ ಅಂಗವಾಗಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಶಿಕ್ಷಕರಾದ ಚಂದ್ರಶೇಖರ ರೈ ಮತ್ತು ಪರಮೇಶ್ವರಿ. ವೈ ವಿದ್ಯಾರ್ಥಿಗಳಿಗೆ ಶುಭಾಶಯ ಸಲ್ಲಿಸಿದರು. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಸ್ವಾಗತಿಸಿದರು. ಶಿಕ್ಷಕಿ ಮಾಲತಿ.ಎಂ ವಂದಿಸಿದರು.
ಶಿಕ್ಷಕರಾದ ಚಂದ್ರಶೇಖರ ರೈ ಮತ್ತು ಪರಮೇಶ್ವರಿ. ವೈ ವಿದ್ಯಾರ್ಥಿಗಳಿಗೆ ಶುಭಾಶಯ ಸಲ್ಲಿಸಿದರು. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಸ್ವಾಗತಿಸಿದರು. ಶಿಕ್ಷಕಿ ಮಾಲತಿ.ಎಂ ವಂದಿಸಿದರು.
01 September 2010
ಶ್ರೀಕೃಷ್ಣ ಜಯಂತಿ
“ಶ್ರೀಕೃಷ್ಣ ಜಗತ್ತಿಗೆ ನೀಡಿದ ಮಹಾನ್ ಸಂಪತ್ತು ಭಗವದ್ಗೀತೆ. ಮನಸ್ಸು ತಲ್ಲಣಗೊಂಡು ಸಂಕಷ್ಟದಲ್ಲಿದ್ದಾಗ ಭಗವದ್ಗೀತೆಯ ಸಾಲುಗಳು ನಮಗೆ ಸ್ಫೂರ್ತಿ ನೀಡುತ್ತವೆ. ಶ್ರೀಕೃಷ್ಣ ಮತ್ತು ಭಗವದ್ಗೀತೆಯಂತೆ ಜೀವನ ಸಂಕಷ್ಟಗಳನ್ನು ನಿವಾರಿಸುವ ವಿಚಾರಗಳನ್ನು ನಾವು ಯಾವತ್ತೂ ನೆನಪಿಸಿಕೊಳ್ಳಬೇಕು, ಈ ನಿಟ್ಟಿನಲ್ಲಿ ವಿದ್ಯಾಲಯಗಳಲ್ಲಿ ಶ್ರೀಕೃಷ್ಣ ಜಯಂತಿ ಉತ್ಸವದ ಆಚರಣೆ ಸ್ತುತ್ಯರ್ಹ ಕಾರ್ಯ" ಎಂದು ಪಾಣಾಜೆ ಸುಬೋಧ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಪಿಲಿಂಗಲ್ಲು ಕೃಷ್ಣ ಭಟ್ ಹೇಳಿದರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ‘ಶ್ರೀಕೃಷ್ಣ ಜಯಂತಿ’ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಬೊಳುಂಬು ಸುಬ್ರಾಯ ಭಟ್ ಮುಖ್ಯ ಅತಿಥಿಗಳಾಗಿದ್ದರು. ಜನ್ಮಾಷ್ಟಮಿಯ ಅಂಗವಾಗಿ ಜರಗಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಎಂ.ವಿ.ಭಟ್ ಮಧುರಂಗಾನ ಬಹುಮಾನ ವಿತರಿಸಿದರು. ಶಾಲಾ ವಿದ್ಯಾರ್ಥಿ ಮುಖಂಡ ಮಿಥುನ್ ಪಿ.ಎಸ್ ವರದಿ ವಾಚಿಸಿದರು. ಹಿರಿಯ ಅಧ್ಯಾಪಕರಾದ ಸುಬ್ರಹ್ಮಣ್ಯ ವಿ.ಭಟ್ ಸ್ವಾಗತಿಸಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ವಂದಿಸಿದರು. ಕಾರ್ಯಕ್ರಮದ ಸಂಚಾಲಕ, ಶಿಕ್ಷಕ ಚಂದ್ರಶೇಖರ ರೈ ಕಾರ್ಯಕ್ರಮ ನಿರೂಪಿಸಿದರು.
ಮನರಂಜನಾ ಕಾರ್ಯಕ್ರಮದ ಅಂಗವಾಗಿ ಶಾಲೆಯ ಪೂರ್ವ ವಿದ್ಯಾರ್ಥಿ ಸರಳಿ ಈಶ್ವರ ಪ್ರಕಾಶ್ ಮತ್ತು ಬಳಗದವರಿಂದ ‘ಸಂಗೀತ ಸ್ವರ ಸಿಂಚನ’ ಕಾರ್ಯಕ್ರಮ ಜರಗಿತು.
31 August 2010
ನಾಳೆ ಶ್ರೀಕೃಷ್ಣ ಜನ್ಮಾಷ್ಟಮಿ, ಬನ್ನಿ...
27 August 2010
‘ಗಣಕ ಯಂತ್ರ ಆಧುನಿಕ ಜಗತ್ತಿನ ಅವಿಭಾಜ್ಯ ಅಂಗ’
“ಹಿಂದಿನ ಕಾಲದ ವಿದ್ಯಾಭ್ಯಾಸ ಪದ್ಧತಿಗಿಂತ ಭಿನ್ನವಾಗಿ ಹೊಸ ತಲೆಮಾರಿನ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ದೊರೆಯುತ್ತಿದೆ. ಯಾವುದೇ ಕಛೇರಿ ಸಂದರ್ಶಿಸಿದರೂ ಬಹುಪಾಲು ಚಟುವಟಿಕೆಗಳು ಗಣಕ ಯಂತ್ರದ ಮೂಲಕ ಜರಗುತ್ತಿರುವುದನ್ನು ಕಾಣಬಹುದು. ಕಂಪ್ಯೂಟರ್ ಸಾಕ್ಷರತೆಯ ಆವಶ್ಯಕತೆ ಈಗ ಹೆಚ್ಚುತ್ತಿದೆ ಎಂಬುದಕ್ಕೆ ಇದು ನಿದರ್ಶನವಾಗಿದೆ. ಈಗಿನ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ದೊರೆಯುತ್ತಿರುವುದು ಮತ್ತು ಇಂತಹ ಕಾರ್ಯಾಗಾರಗಳ ಮೂಲಕ ಬಳಕೆಯಲ್ಲಿ ನೈಪುಣ್ಯ ಪಡೆಯಲು ಸಾಧ್ಯವಾಗುತ್ತಿರುವುದು ಮತ್ತಷ್ಟು ಸಂತಸದ ಸಂಗತಿ" ಎಂದು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ, ನೀರ್ಚಾಲು ಘಟಕದ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಕೇರಳ ರಾಜ್ಯ ಐಟಿ ಸ್ಕೂಲ್ ಪ್ರೋಜೆಕ್ಟ್ ಕಾಸರಗೋಡು ವಿಭಾಗದ ಆಶ್ರಯದಲ್ಲಿ ನಡೆಯುತ್ತಿರುವ ವಿವಿಧ ಶಾಲೆಗಳ ಆಯ್ದ ವಿದ್ಯಾರ್ಥಿಗಳ ಎರಡು ದಿನಗಳ “ಗಣಕ ಯಂತ್ರ ಚಟುವಟಿಕೆಗಳತ್ತ ನೈಪುಣ್ಯ ಗಳಿಕೆ ಕಾರ್ಯಾಗಾರ”ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪೆರಡಾಲ ಮಹಾಜನ ವಿದ್ಯಾಭಿವರ್ಧಕ ಸಂಘದ ಕಾರ್ಯದರ್ಶಿ ಜಯದೇವ ಖಂಡಿಗೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅನುಭವಿ ಕಂಪ್ಯೂಟರ್ ತಂತ್ರಜ್ಞ ವೇಣುಗೋಪಾಲ ಆರೋಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ರಾಜಶೇಖರ ಪದ್ಮಾರು ಪ್ರಾಸ್ತಾವಿಕ ಭಾಷಣ ಮಾಡಿದರು. ವಿದ್ಯಾರ್ಥಿಗಳಾದ ಸುಬ್ರಹ್ಮಣ್ಯ ಪ್ರಸಾದ ಸ್ವಾಗತಿಸಿ ಸುಶೀಲ.ಎಸ್ ವಂದಿಸಿದರು. ಶಾಂತಿ.ಕೆ ಕಾರ್ಯಕ್ರಮ ನಿರೂಪಿಸಿದರು.
ಪೆರಡಾಲ ಮಹಾಜನ ವಿದ್ಯಾಭಿವರ್ಧಕ ಸಂಘದ ಕಾರ್ಯದರ್ಶಿ ಜಯದೇವ ಖಂಡಿಗೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅನುಭವಿ ಕಂಪ್ಯೂಟರ್ ತಂತ್ರಜ್ಞ ವೇಣುಗೋಪಾಲ ಆರೋಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ರಾಜಶೇಖರ ಪದ್ಮಾರು ಪ್ರಾಸ್ತಾವಿಕ ಭಾಷಣ ಮಾಡಿದರು. ವಿದ್ಯಾರ್ಥಿಗಳಾದ ಸುಬ್ರಹ್ಮಣ್ಯ ಪ್ರಸಾದ ಸ್ವಾಗತಿಸಿ ಸುಶೀಲ.ಎಸ್ ವಂದಿಸಿದರು. ಶಾಂತಿ.ಕೆ ಕಾರ್ಯಕ್ರಮ ನಿರೂಪಿಸಿದರು.
20 August 2010
18 August 2010
‘ಕ್ವಿಟ್ ಇಂಡಿಯಾ’ ಮಾದರಿ
ಈ ಬಾರಿಯ ಸ್ವಾತಂತ್ರ್ಯೋತ್ಸವ ನೀರ್ಚಾಲು ಪರಿಸರದಲ್ಲಿ ಹೊಸ ಅನುಭವದ ಸ್ಪರ್ಶ ನೀಡಿತು. ನಮ್ಮ ಕಿರಿಯ ಪ್ರಾಥಮಿಕ ಶಾಲೆಯ ಪುಟಾಣಿ ವಿದ್ಯಾರ್ಥಿಗಳು ಶ್ವೇತ ವಸ್ತ್ರ ಧಾರಿಗಳಾಗಿ ಪೇಟೆಯಲ್ಲಿ ೧೯೪೨ ರಲ್ಲಿ ಜರಗಿದ ‘ಕ್ವಿಟ್ ಇಂಡಿಯಾ’ ಮಾದರಿಯ ಚಳುವಳಿಯನ್ನು ಪ್ರದರ್ಶಿಸಿದರು.
“ಕ್ವಿಟ್, ಕ್ವಿಟ್, ಕ್ವಿಟ್ ಇಂಡಿಯಾ”
“ನಮಗೆ ಸ್ವಾತಂತ್ರ್ಯ ಕೊಡಿ, ಭಾರತ ಬಿಟ್ಟು ತೊಲಗಿ”
“ಮಹಾತ್ಮಾ ಗಾಂಧೀಜೀ ಕೀ ಜೈ" ಎಂಬೀ ಘೋಷಣೆಗಳನ್ನು ಕೂಗುತ್ತಾ ಪುಟಾಣಿ ವಿದ್ಯಾರ್ಥಿಗಳು ಪೇಟೆಯಲ್ಲಿ ಪ್ರದರ್ಶನ ನಡೆಸಿದರು. ಅಧ್ಯಾಪಕ ಚಂದ್ರಶೇಖರ ರೈಗಳ ಕಲ್ಪನೆಗೆ ಇತರ ಶಿಕ್ಷಕಿಯರು ಸಹಕರಿಸಿದ್ದರು.
“ಕ್ವಿಟ್, ಕ್ವಿಟ್, ಕ್ವಿಟ್ ಇಂಡಿಯಾ”
“ನಮಗೆ ಸ್ವಾತಂತ್ರ್ಯ ಕೊಡಿ, ಭಾರತ ಬಿಟ್ಟು ತೊಲಗಿ”
“ಮಹಾತ್ಮಾ ಗಾಂಧೀಜೀ ಕೀ ಜೈ" ಎಂಬೀ ಘೋಷಣೆಗಳನ್ನು ಕೂಗುತ್ತಾ ಪುಟಾಣಿ ವಿದ್ಯಾರ್ಥಿಗಳು ಪೇಟೆಯಲ್ಲಿ ಪ್ರದರ್ಶನ ನಡೆಸಿದರು. ಅಧ್ಯಾಪಕ ಚಂದ್ರಶೇಖರ ರೈಗಳ ಕಲ್ಪನೆಗೆ ಇತರ ಶಿಕ್ಷಕಿಯರು ಸಹಕರಿಸಿದ್ದರು.
17 August 2010
ಕೀರ್ತನಾ ತರಗತಿ ಆರಂಭ
“ದಾಸವಾಣಿಯನ್ನು ಕೇಳುವುದು ಇಂದಿನ ಯಾಂತ್ರಿಕ ಜೀವನಕ್ಕೆ ಜೀವ ಸೆಲೆಯಾಗಿದೆ. ದಾಸರ ಜನಜಾಗೃತಿ ಕಾರ್ಯವನ್ನು ಸ್ಪಷ್ಟಪಡಿಸುವ ದಾಸವಾಣಿ ಮನೆಮನಗಳ ಆಸ್ತಿಯಾಗಬೇಕು. ಅಂತಹ ದಾರಿ ತೋರುವ ಈ ಕೀರ್ತನಾ ತರಗತಿ ಯಶಸ್ವಿಯಾಗಲಿ" ಎಂದು ಖ್ಯಾತ ಗಾಯಕ ರಾಮಕೃಷ್ಣ ಕಾಟುಕುಕ್ಕೆ ಅಭಿಪ್ರಾಯಪಟ್ಟರು. ಅವರು ನಮ್ಮ ಶಾಲಾ ಆರ್ಟ್ಸ್ ಕ್ಲಬ್ ಆಶ್ರಯದಲ್ಲಿ ನಡೆಯಲಿರುವ ದಾಸವಾಣಿ ಕೀರ್ತನಾ ತರಗತಿಗಳನ್ನು ೧೩.೦೮.೨೦೧೦ ಶುಕ್ರವಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಎಂ.ವಿ.ಭಟ್ ಮಧುರಂಗಾನ ಶುಭ ಹಾರೈಸಿದರು. ಚಿತ್ರಕಲಾ ಅಧ್ಯಾಪಕ ಕೋರಿಕ್ಕಾರು ಗೋವಿಂದ ಶರ್ಮ ಸ್ವಾಗತಿಸಿ ಶಿಕ್ಷಕಿ ವಾಣಿ.ಪಿ.ಎಸ್ ವಂದಿಸಿದರು. ವಿದ್ಯಾರ್ಥಿನಿ ಶಾಂತಿ.ಕೆ ಕಾರ್ಯಕ್ರಮ ನಿರೂಪಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಎಂ.ವಿ.ಭಟ್ ಮಧುರಂಗಾನ ಶುಭ ಹಾರೈಸಿದರು. ಚಿತ್ರಕಲಾ ಅಧ್ಯಾಪಕ ಕೋರಿಕ್ಕಾರು ಗೋವಿಂದ ಶರ್ಮ ಸ್ವಾಗತಿಸಿ ಶಿಕ್ಷಕಿ ವಾಣಿ.ಪಿ.ಎಸ್ ವಂದಿಸಿದರು. ವಿದ್ಯಾರ್ಥಿನಿ ಶಾಂತಿ.ಕೆ ಕಾರ್ಯಕ್ರಮ ನಿರೂಪಿಸಿದರು.
16 August 2010
ಬಾಂಗ್ಲಾ ವಿಭಜನೆಯ ಪ್ರಾತ್ಯಕ್ಷಿಕೆ
“ಆಧುನಿಕತೆಯ ಭರದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ, ಕೊರಗುತ್ತಿರುವ ಕೃಷಿ ದೇಶದ ಭವಿಷ್ಯಕ್ಕೆ ಮಾರಕವಾಗಿದೆ. ಭಾರತದ ಸ್ವಾತಂತ್ರ್ಯದ ಹಿಂದೆ ಹಲವು ಮಂದಿ ಧೀರ ಹೋರಾಟಗಾರರ ತ್ಯಾಗ, ಬಲಿದಾನಗಳಿವೆ. ಈ ದಿನವನ್ನು ಆಚರಿಸುವ ಸಂದರ್ಭದಲ್ಲಿ ನಾವು ಅವರನ್ನು ಸ್ಮರಿಸಬೇಕು, ಗೌರವಿಸಬೇಕು" ಎಂದು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ನಟರಾಜ ರಾವ್ ಅಭಿಪ್ರಾಯಪಟ್ಟರು. ಅವರು ನಿನ್ನೆ ಜರಗಿದ ಸ್ವಾಂತ್ರ್ಯೋತ್ಸವ ಮತ್ತು ಬಾಂಗ್ಲಾ ವಿಭಜನೆಯ ಪ್ರಾತ್ಯಕ್ಷಿಕೆಯ ಸಂದರ್ಭದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಎಂ.ಅಬ್ಬಾಸ್, ಶಾಲಾ ಹಿರಿಯ ಅಧ್ಯಾಪಕ ಕೆ. ನಾರಾಯಣ ಭಟ್ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ದಿನ ಸಂದೇಶವನ್ನು ನೀಡಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು. ರವಿಕೃಷ್ಣ ಸ್ವಾಗತಿಸಿದರು. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಧನ್ಯವಾದ ಸಮರ್ಪಿಸಿದರು. ಚಿತ್ರಕಲಾ ಅಧ್ಯಾಪಕ ಗೋವಿಂದ ಶರ್ಮಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ರೂಪಕ, ಸಮೂಹಗಾನ, ದೇಶಭಕ್ತಿಗೀತೆ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಎಂ.ಅಬ್ಬಾಸ್, ಶಾಲಾ ಹಿರಿಯ ಅಧ್ಯಾಪಕ ಕೆ. ನಾರಾಯಣ ಭಟ್ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ದಿನ ಸಂದೇಶವನ್ನು ನೀಡಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು. ರವಿಕೃಷ್ಣ ಸ್ವಾಗತಿಸಿದರು. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಧನ್ಯವಾದ ಸಮರ್ಪಿಸಿದರು. ಚಿತ್ರಕಲಾ ಅಧ್ಯಾಪಕ ಗೋವಿಂದ ಶರ್ಮಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ರೂಪಕ, ಸಮೂಹಗಾನ, ದೇಶಭಕ್ತಿಗೀತೆ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
10 August 2010
ಸ್ವಾತಂತ್ರ್ಯೋತ್ಸವ ಶುಭಾಶಯಗಳು...
ರಕ್ಷಕ ಶಿಕ್ಷಕ ಸಂಗಮ
“ಶಿಕ್ಷಣ ರಂಗದಲ್ಲಿ ಶರವೇಗದ ಬದಲಾವಣೆಗಳು ಬರುತ್ತಿವೆ. ಆಧುನಿಕತೆಯ ಗಾಳಿ ಶಿಕ್ಷಣ ಪದ್ಧತಿಯ ಬದಲಾವಣೆಗೆ ಕಾರಣವಾಗಿದೆ. ಈ ಬದಲಾವಣೆಗಳ ಕುರಿತಾಗಿ ವಿದ್ಯಾರ್ಥಿಗಳ ಹೆತ್ತವರಿಗೆ ಮಾಹಿತಿ ಇರಬೇಕಾದುದು ಅವಶ್ಯವಾಗಿದೆ. ಈ ಒಂದು ದಿನದ ಶಿಬಿರದ ಮೂಲಕ ಅಗತ್ಯ ಮಾಹಿತಿಗಳನ್ನು ಹೆತ್ತವರು ತಿಳಿದುಕೊಳ್ಳುವಂತಾಗಲಿ" ಎಂದು ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಎಂ.ಅಬ್ಬಾಸ್ ಹೇಳಿದರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ರಕ್ಷಕ ಶಿಕ್ಷಕ ಸಂಗಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಗೀತಾ ಮೊಳೆಯಾರು ಅಧ್ಯಕ್ಷತೆ ವಹಿಸಿದ್ದರು. ಶಾಲಾ ಹಿರಿಯ ಅಧ್ಯಾಪಕ ಕೆ.ನಾರಾಯಣ ಭಟ್ ಶುಭಾಶಂಸನೆಗೈದರು. ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಸ್ವಾಗತಿಸಿದರು. ಶಾರೀರಿಕ ಶಿಕ್ಷಣ ಅಧ್ಯಾಪಕ ಎಂ.ಸೂರ್ಯನಾರಾಯಣ ವಂದಿಸಿದರು. ಅಧ್ಯಾಪಕ ಎಚ್.ಶಿವಕುಮಾರ ಕಾರ್ಯಕ್ರಮ ನಿರೂಪಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಕೆ.ಸುಬ್ರಹ್ಮಣ್ಯ ಭಟ್, ಪ್ರದೀಪ್, ಎ.ಭುವನೇಶ್ವರಿ ಉಪನ್ಯಾಸ ನೀಡಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಗೀತಾ ಮೊಳೆಯಾರು ಅಧ್ಯಕ್ಷತೆ ವಹಿಸಿದ್ದರು. ಶಾಲಾ ಹಿರಿಯ ಅಧ್ಯಾಪಕ ಕೆ.ನಾರಾಯಣ ಭಟ್ ಶುಭಾಶಂಸನೆಗೈದರು. ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಸ್ವಾಗತಿಸಿದರು. ಶಾರೀರಿಕ ಶಿಕ್ಷಣ ಅಧ್ಯಾಪಕ ಎಂ.ಸೂರ್ಯನಾರಾಯಣ ವಂದಿಸಿದರು. ಅಧ್ಯಾಪಕ ಎಚ್.ಶಿವಕುಮಾರ ಕಾರ್ಯಕ್ರಮ ನಿರೂಪಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಕೆ.ಸುಬ್ರಹ್ಮಣ್ಯ ಭಟ್, ಪ್ರದೀಪ್, ಎ.ಭುವನೇಶ್ವರಿ ಉಪನ್ಯಾಸ ನೀಡಿದರು.
06 August 2010
ಶಾಲಾ ಚುನಾವಣೆ
04 August 2010
ಆರ್ಟ್ಸ್ ಕ್ಲಬ್ ಉದ್ಘಾಟನೆ
“ಕಲಾಭಿರುಚಿಯನ್ನು ಬೆಳೆಸಿಕೊಳ್ಳದ ಮನಸ್ಸಿನಲ್ಲಿ ವಿಕೃತ ಚಿಂತನೆಗಳು ಹುಟ್ಟಿಕೊಳ್ಳುತ್ತವೆ. ಇಂದಿನ ಯುವಜನಾಂಗದಲ್ಲಿ ಕಲೆಯ ಕಡೆಗಿನ ಆಸಕ್ತಿ ಕಡಿಮೆಯಾಗಿರುವುದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸಿದೆ. ಸಂಗೀತ,ಚಿತ್ರಕಲೆಗಳ ಕಡೆಗೆ ಆಸಕ್ತಿ ಬೆಳೆದಾಗ ಮನಸ್ಸು ಹಗುರವಾಗುತ್ತದೆ, ಒತ್ತಡ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಕಲಾ ಸಂಘದ ಪ್ರಸಕ್ತಿ ಅಗತ್ಯವಾಗಿದೆ" ಎಂದು ನಿವೃತ್ತ ಚಿತ್ರಕಲಾ ಶಿಕ್ಷಕ, ಸಾಹಿತಿ ಬಾಲ ಮಧುರಕಾನನ ಅಭಿಪ್ರಾಯಪಟ್ಟರು. ಅವರು ೦೩.೦೮.೨೦೧೦ ಮಂಗಳವಾರ ನಮ್ಮ ಆರ್ಟ್ಸ್ ಕ್ಲಬ್ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಹಿಂದೀ ಸಾಹಿತ್ಯ ಸಂಘದ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿದರು. ಶಾಲಾ ಹಿರಿಯ ಶಿಕ್ಷಕ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಚಿತ್ರಕಲಾ ಅಧ್ಯಾಪಕ ಗೋವಿಂದ ಶರ್ಮ ಕೋರಿಕ್ಕಾರು ಪ್ರಾಸ್ತಾವಿಕ ಭಾಷಣ ಮಾಡಿದರು. ವಿದ್ಯಾರ್ಥಿಗಳಾದ ಕ್ಷಮಾದೇವಿ ಸ್ವಾಗತಿಸಿ ಗಿರಿಶಂಕರ.ಕೆ ವಂದಿಸಿದರು. ಶಾಂತಿ.ಕೆ ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಹಿಂದೀ ಸಾಹಿತ್ಯ ಸಂಘದ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿದರು. ಶಾಲಾ ಹಿರಿಯ ಶಿಕ್ಷಕ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಚಿತ್ರಕಲಾ ಅಧ್ಯಾಪಕ ಗೋವಿಂದ ಶರ್ಮ ಕೋರಿಕ್ಕಾರು ಪ್ರಾಸ್ತಾವಿಕ ಭಾಷಣ ಮಾಡಿದರು. ವಿದ್ಯಾರ್ಥಿಗಳಾದ ಕ್ಷಮಾದೇವಿ ಸ್ವಾಗತಿಸಿ ಗಿರಿಶಂಕರ.ಕೆ ವಂದಿಸಿದರು. ಶಾಂತಿ.ಕೆ ಕಾರ್ಯಕ್ರಮ ನಿರ್ವಹಿಸಿದರು.
01 August 2010
ಶಾಲಾ ವಿದ್ಯಾರ್ಥಿಗಳಿಂದ ಸಿಪಿಸಿಆರ್ಐ ಸಂದರ್ಶನ
ಏಳನೇ ತರಗತಿ ವಿದ್ಯಾರ್ಥಿಗಳು ೩೧.೦೭.೨೦೧೦ ಶನಿವಾರ ಕಾಸರಗೋಡು ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ ಮತ್ತು ಕೃಷಿ ವಿಜ್ಞಾನ ಕೇಂದ್ರಕ್ಕೆ ಶೈಕ್ಷಣಿಕ ಪ್ರವಾಸ ನಡೆಸಿ ವಿವಿಧ ತೋಟಗಾರಿಕಾ ಬೆಳೆಗಳ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ತಾಂತ್ರಿಕ ಅಧಿಕಾರಿ ಕೆ.ಮಣಿಕಂಠನ್ ಕಸಿ ಕಟ್ಟುವ ಬಡ್ಡಿಂಗ್, ಗ್ರಾಫ್ಟಿಂಗ್, ಲೇಯರಿಂಗ್ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ, ಅಧ್ಯಾಪಕರಾದ ಎಚ್.ಶಿವಕುಮಾರ, ಇ.ವೇಣುಗೋಪಾಲಕೃಷ್ಣ, ತಲೆಂಗಳ ಕೃಷ್ಣಪ್ರಸಾದ, ರಾಜು ಸ್ಟೀವನ್ ಮತ್ತು ವನಿತಾ ನೇತೃತ್ವ ವಹಿಸಿದ್ದರು.
28 July 2010
ಕೂಳಕ್ಕೋಡ್ಲು ಮಹೇಶ್ಗೆ ಡಾಕ್ಟರೇಟ್
ನಮ್ಮ ಶಾಲೆಯ ಪೂರ್ವ ವಿದ್ಯಾರ್ಥಿ, ಕಾಸರಗೋಡಿನ ಬದಿಯಡ್ಕ ಬಳಿಯ ಕೂಳಕ್ಕೋಡ್ಲು ಈಶಾವಾಸ್ಯಂ ಮನೆಯ ಹುಡುಗ ಸಂಸ್ಕೃತ ಲೋಕದಲ್ಲಿ ಉತ್ತಮ ಸಾಧನೆಗೈದು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಸುಲೋಚನಾ-ಶಂಕರನಾರಾಯಣ ಭಟ್ಟ ದಂಪತಿಯರ ಪುತ್ರ ೨೯ ವರ್ಷದ ಯುವ ಸಂಶೋಧಕ ಮಹೇಶ್ ಕೂಳಕ್ಕೋಡ್ಲು ಈ ಸಾಧನೆಗೈದ ಪ್ರತಿಭಾವಂತ.
‘ಎ ಕ್ರಿಟಿಕಲ್ ಸ್ಟಡಿ ಓಫ್ ಸಿದ್ಧಾಂತ ದರ್ಪಣ ಓಫ್ ನೀಲಕಂಠ ಸೋಮಯಾಜಿ’ ಎಂಬ ಶೀರ್ಷಿಕೆಯ ಮಹಾ ಪ್ರಬಂಧವನ್ನು ಮುಂಬಯಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಚಾರ್ಯ ಶ್ರೀ ರಾಮಸುಬ್ರಹ್ಮಣ್ಯಂ ಮಾರ್ಗದರ್ಶನದಲ್ಲಿ ಬರೆದಿರುವ ಮಹೇಶ್ ಈ ಮಹಾ ಪ್ರಬಂಧವನ್ನು ಮುಂಬಯಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಸಲ್ಲಿಸಿ ಡಾಕ್ಟರೇಟ್ ಪದವಿಗೆ ಪಾತ್ರರಾಗಿದ್ದಾರೆ. ಸಂಸ್ಕೃತದಲ್ಲಿರುವ ವಿಜ್ಞಾನ ವಿಷಯವನ್ನು ಆಧರಿಸಿ ಸಿದ್ಧವಾದ ಮೊದಲ ಪಿಎಚ್ಡಿ ಇದು ಎಂಬುದು ಈ ಪದವಿಯ ಗೌರವವನ್ನು ಹೆಚ್ಚಿಸುತ್ತದೆ.
ಸಂಸ್ಕೃತದಲ್ಲಿರುವ ಈ ಸಿದ್ಧಾಂತ-ದರ್ಪಣ ಗ್ರಂಥ ಭಾರತೀಯ ಖಗೋಳ ಶಾಸ್ತ್ರದ ಕೆಲವು ನಿಯಮಗಳನ್ನು ಉಲ್ಲೇಖಿಸುತ್ತದೆ. ಇದನ್ನು ರಚಿಸಿದ ವಿಜ್ಞಾನಿ ಕೇರಳದ ತ್ರಿಕ್ಕಂಟಿಯೂರಿನ ನೀಲಕಂಠ (೧೫ ನೆ ಶತಮಾನ), ನಮ್ಮ ದೇಶ ಕಂಡ ಒಬ್ಬ ಅತ್ಯಂತ ಮೇಧಾವೀ ಗಣಿತ-ಖಗೋಳಜ್ಞ. ಈ ಗ್ರಂಥದ ಭಾಷೆ, ವ್ಯಾಖ್ಯಾನ, ವಿಷಯ ಪ್ರಸ್ತುತಿಯ ಶೈಲಿ ಎಲ್ಲವೂ ಅದ್ಭುತ. ಒಬ್ಬ ವಿಜ್ಞಾನಿಗೆ ಇರಬೇಕಾದ ದೃಷ್ಟಿ, ಒಬ್ಬ ಶಿಕ್ಷಕ ವಿದ್ಯಾರ್ಥಿಗೆ ಹೇಳಬೇಕಾದ ಹಿತವಚನಗಳ ಸಂಗ್ರಹ ಈ ಗ್ರಂಥದಲ್ಲಿದೆ. ಭಾರತೀಯ ವಿಜ್ಞಾನ/ಗಣಿತದಲ್ಲಿ ಉಪಪತ್ತಿ (ಪ್ರೂಫ್)- ಮತ್ತು ವೈಚಾರಿಕ ಚಿಂತನೆಗೆ ಎಷ್ಟು ಮಹತ್ತ್ವ ನೀಡಲಾಗಿದೆ ಎನ್ನುವುದು ಕೂಡಾ ಈ ಗ್ರಂಥದಲ್ಲಿ ವ್ಯಕ್ತವಾಗುತ್ತದೆ. ಭಾರತದ ಗ್ರಂಥಗಳಲ್ಲಿ ಪ್ರೂಫ್ ಇಲ್ಲ ಎಂಬ ಒಂದು ಮಿಥ್ಯಾ ಆರೋಪ ವಿದೇಶೀಯರಲ್ಲಿರುವುದರಿಂದ ಈ ಗ್ರಂಥಕ್ಕೆ ಅಪಾರ ಮಹತ್ವವಿದೆ.
ಮಹೇಶ್ ಈ ಗ್ರಂಥದ ಸಂಪೂರ್ಣ ಆಂಗ್ಲ ಭಾಷಾಂತರ ಮಾಡಿದ್ದಾರೆ ಮತ್ತು ಅಗತ್ಯ ವಿವರಣೆಗಳನ್ನೂ ಆಂಗ್ಲ ಭಾಷೆಯಲ್ಲಿ ನೀಡಿದ್ದಾರೆ. ಸೂಕ್ತ ಆಧುನಿಕ ಗಣಿತ ವಿವರಣೆ, ಅಗತ್ಯ ಚಿತ್ರಗಳನ್ನೂ ಸೇರಿಸಿದ್ದಾರೆ. ಗ್ರಹ-ಭ್ರಮಣ ಸಿದ್ಧಾಂತ (ಥಿಯರಿ ಓಫ್ ಪ್ಲಾನೆಟರಿ ಮೋಷನ್) ದ ಬೆಳವಣಿಗೆಯಲ್ಲಿ ಗ್ರಂಥದ ಕೊಡುಗೆ ಇತ್ಯಾದಿ ಮಹತ್ತ್ವ ಪೂರ್ಣ ವಿಷಯದ ಕುರಿತು ಪ್ರತಿಪಾದಿಸಿದ್ದಾರೆ. ಭಾರತದಲ್ಲಿ ಆದ ವಿಜ್ಞಾನದ ಬೆಳವಣಿಗೆಯ ಇತಿಹಾಸ ತಿಳಿಯಲು ಹಾಗೂ ನಮ್ಮ ಪೂರ್ವಜರ ಕೊಡುಗೆಯ ಮಹತ್ತ್ವ ತಿಳಿಯಲು ಈ ಅಧ್ಯಯನ ಸಹಕಾರಿ ಆಗಲಿದೆ.
ನಮ್ಮ ಸಂಸ್ಕೃತಿಯ ಆಧಾರವಾದ ಸಂಸ್ಕೃತ ಭಾಷೆಯ ಪ್ರಪಂಚದೆಲ್ಲೆಡೆ ಇರುವ ಅಭಿಮಾನದ ದ್ಯೋತಕವೇ ವಿಶ್ವ ಸಂಸ್ಕೃತ ಸಮ್ಮೇಳನ. ಈ ಸಮ್ಮೇಳನ ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುತ್ತದೆ. ಸೆಪ್ಟೆಂಬರ್ ೧-೫, ೨೦೦೯ ದ ತನಕ ೧೪ನೆಯ ವಿಶ್ವ ಸಂಸ್ಕೃತ ಸಮ್ಮೇಳನ ಜಪಾನಿನ ಕ್ಯೋಟೋ ವಿಶ್ವವಿದ್ಯಾಲಯದಲ್ಲಿ ನಡೆದಿತ್ತು. ಈ ವಿಶ್ವ ವಿದ್ಯಾಲಯದಲ್ಲಿ ಭಾರತೀಯ ಗಣಿತ-ಖಗೋಳಶಾಸ್ತ್ರದ ಬಗ್ಗೆಯೂ ಸಂಶೋಧನೆ-ಅಧ್ಯಯನ ನಡೆಯುತ್ತಿದೆ. ಇಂತಹ ಅತ್ಯಪೂರ್ವ ಸಮ್ಮೇಳನದಲ್ಲಿ ಸಂಸ್ಕೃತದಲ್ಲಿರುವ ವಿಶಾಲವಾದ ಜ್ಞಾನ ವಿಜ್ಞಾನ ಶಾಖೆಗಳ ಬಗ್ಗೆ ಆಯಾಯ ಕ್ಷೇತ್ರಗಳಲ್ಲಿ ಪರಿಶ್ರಮ ಮಾಡಿದವರಿಂದ ವಿಚಾರ ಮಂಡನೆ ಗಳು ಮಾಡಲ್ಪಟ್ಟಿದ್ದವು. ಸುಮಾರು ೩೫೦ ಪ್ರಸ್ತುತಿಗಳು ೧೫ ಗೋಷ್ಠಿ ಗಳಲ್ಲಿ ೫ ದಿನಗಳ ಕಾಲ ನಡೆದಿದ್ದವು. ೩೫ ದೇಶಗಳಿಂದ ಬಂದ ಸಂಸ್ಕೃತ ವಿದ್ವಾಂಸರು, ಶೋಧ ವಿದ್ಯಾರ್ಥಿಗಳು, ಅಭಿಮಾನಿಗಳ ಒಟ್ಟು ಸಂಖ್ಯೆ ಸುಮಾರು ೫೦೦. ಇಂತಹ ಅಪೂರ್ವ ಸಮ್ಮೇಳನದಲ್ಲ್ಲಿ ಸಂಸ್ಕೃತ ಮತ್ತು ವೈಜ್ಞಾನಿಕ ಸಾಹಿತ್ಯ ಎಂಬ ಗೋಷ್ಠಿಯಲ್ಲಿ ‘ಶ್ಯೇನ ಚಿತಿ’ ಎಂಬ ಒಂದು ವಿಚಾರವನ್ನು ಮಹೇಶ ಕೂಳಕ್ಕೋಡ್ಲು ಪ್ರಸ್ತುತ ಪಡಿಸಿ ವಿದ್ವಾಂಸರ ಪ್ರಶಂಸೆಗೆ ಪಾತ್ರರಾಗಿದ್ದರು.
ವಿಶ್ವದ ಗಣಿತದ ಇತಿಹಾಸವನ್ನು ತಿಳಿಯುವುದರಲ್ಲಿ ಅತ್ಯಂತ ಆವಶ್ಯಕವಾಗಿರುವುದು ಸಂಸ್ಕೃತದ ಗ್ರಂಥಗಳ ಪರಿಶೀಲನೆ. ಕ್ರಿ.ಪೂ. ೮೦೦ ಗಿಂತಲೂ ಹಿಂದಿನದಾದ ಶುಲ್ಬಸೂತ್ರ ಗಳಲ್ಲಿ ಯಜ್ಞ ವೇದಿಕೆಗಳ ನಿರ್ಮಾಣಕ್ಕೆ ಸಂಬಂಧಿಸಿದ ರೇಖಾಗಣಿತದ ಮಾಹಿತಿ ದೊರೆಯುತ್ತದೆ. ಶ್ಯೇನ ಚಿತಿ ಎಂಬುದು ಗಿಡುಗ ಪಕ್ಷಿಯಾಕಾರದ ಒಂದು ಯಜ್ಞ ವೇದಿಕೆ. ಇದರ ನಿರ್ಮಾಣದಲ್ಲಿ ಬಳಸಬೇಕಾದ ಇಟ್ಟಿಗೆಗಳ ನಿರ್ಮಾಣ ಕ್ರಮ, ಆಕಾರ, ವಿನ್ಯಾಸ ಕ್ರಮ ಇತ್ಯಾದಿ ವಿಚಾರಗಳು ಅಲ್ಲಿ ಉಲ್ಲಿಖಿತವಾಗಿವೆ. ರೇಖಾಗಣಿತದ ದೃಷ್ಟಿಯಿಂದ, ವಿನ್ಯಾಸಕ್ರಮದ ರೀತಿಯಿಂದ ಇದರ ಮಹತ್ತ್ವವೇನು ಎಂಬುದರ ಬಗ್ಗೆ ಮಾಹಿತಿ ನೀಡುವಂತಹ ಚಿತ್ರಗಳ-ಸ್ಲೈಡ್ ಶೋ ಸಹಿತವಾದ ಭಾಷಣವನ್ನು ಕೂಳಕ್ಕೋಡ್ಳು ಮಹೇಶ್ ಮಾಡಿದ್ದರು.
ನ್ಯೂಟನ ನಿಗಿಂತ ಸುಮಾರು ೨೦೦ ವರ್ಷಗಳ ಹಿಂದೆ ಭಾರತದಲ್ಲಿ ದ್ವಿಪದ ವಿಸ್ತರಣೆ (ಬೈನೋಮಿಯಲ್ ಎಕ್ಸ್ಪಾನ್ಶನ್) ಯ ವಿಚಾರ ಕ್ರಿಯಾಕ್ರಮಕರೀ ಎಂಬ ಗಣಿತ ಗ್ರಂಥದಲ್ಲಿ ಉಲ್ಲೇಖವಾಗಿರುವುದನ್ನು ಆಧಾರಸಹಿತವಾಗಿ ತೋರಿಸುವ ಒಂದು ಭಾಷಣವನ್ನು (ಟರ್ನಿಂಗ್ ಏನ್ ಆಲ್ಜೀಬ್ರಿಕ್ ಎಕ್ಸ್ಪ್ರೆಷನ್ ಇನ್ ಟು ಏನ್ ಇನ್ಫೈನೈಟ್ ಸೀರೀಸ್ - ಏನ್ ಇಂಡಿಯನ್ ಕೋಂಟ್ರಿಬ್ಯೂಷನ್) ಅವರು ಕಳೆದ ವರ್ಷಾರಂಭದಲ್ಲಿ ಬೆಲ್ಜಿಯಂ ದೇಶದ ಬ್ರಸ್ಸೆಲ್ಸ್ ವಿಶ್ವವಿದ್ಯಾಲಯದಲ್ಲಿ ಮಾಡಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು.
ಭಾರತೀಯ ವಿಜ್ಞಾನದ ಬಗ್ಗೆ ಅಧ್ಯಯನ ಕಾರ್ಯ ನಿರತರಾಗಿದ್ದಾರೆ. ಇವರು ಉಜಿರೆಯ ಶ್ರೀ ಮಂಜುನಾಥೇಶ್ವರ ಕಾಲೇಜಿನಲ್ಲಿ ಹಾಗೂ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದಲ್ಲಿ ವಿಜ್ಞಾನ ಮತ್ತು ಸಂಸ್ಕೃತದ ವಿಶೇಷ ಅಧ್ಯಯನವನ್ನು ಮಾಡಿದ್ದಾರೆ. ಇವರು ರಾಷ್ಟ್ರಪತಿ ಸುವರ್ಣ ಪದಕ ಪುರಸ್ಕಾರ (೨೦೦೩), ಯು ಜಿ ಸಿ ಯ ರಿಸರ್ಚ್ ಫೆಲೋಶಿಪ್ (೨೦೦೩),ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ ಯ ರಿಸರ್ಚ್ ಫೆಲೋಶಿಪ್ (೨೦೦೮--) ಗಳನ್ನೂ ಸಾಧಿಸಿದವರಾಗಿದ್ದಾರೆ. ಮುಂಬೈ ಐಐಟಿ ಯ ವಿಜ್ಞಾನಿಗಳು-ಇಂಜಿನಿಯರಿಂಗ್ ವಿದ್ಯಾರ್ಥಿಗಳು ಇವರಿಂದ ಸಂಸ್ಕೃತ ಮಾತನಾಡಲು ಪ್ರೇರಿತರಾಗುತ್ತಿದ್ದಾರೆ. ಅಭಿನಂದನೆಗಳು, ಮಹೇಶ್...
‘ಎ ಕ್ರಿಟಿಕಲ್ ಸ್ಟಡಿ ಓಫ್ ಸಿದ್ಧಾಂತ ದರ್ಪಣ ಓಫ್ ನೀಲಕಂಠ ಸೋಮಯಾಜಿ’ ಎಂಬ ಶೀರ್ಷಿಕೆಯ ಮಹಾ ಪ್ರಬಂಧವನ್ನು ಮುಂಬಯಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಚಾರ್ಯ ಶ್ರೀ ರಾಮಸುಬ್ರಹ್ಮಣ್ಯಂ ಮಾರ್ಗದರ್ಶನದಲ್ಲಿ ಬರೆದಿರುವ ಮಹೇಶ್ ಈ ಮಹಾ ಪ್ರಬಂಧವನ್ನು ಮುಂಬಯಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಸಲ್ಲಿಸಿ ಡಾಕ್ಟರೇಟ್ ಪದವಿಗೆ ಪಾತ್ರರಾಗಿದ್ದಾರೆ. ಸಂಸ್ಕೃತದಲ್ಲಿರುವ ವಿಜ್ಞಾನ ವಿಷಯವನ್ನು ಆಧರಿಸಿ ಸಿದ್ಧವಾದ ಮೊದಲ ಪಿಎಚ್ಡಿ ಇದು ಎಂಬುದು ಈ ಪದವಿಯ ಗೌರವವನ್ನು ಹೆಚ್ಚಿಸುತ್ತದೆ.
ಸಂಸ್ಕೃತದಲ್ಲಿರುವ ಈ ಸಿದ್ಧಾಂತ-ದರ್ಪಣ ಗ್ರಂಥ ಭಾರತೀಯ ಖಗೋಳ ಶಾಸ್ತ್ರದ ಕೆಲವು ನಿಯಮಗಳನ್ನು ಉಲ್ಲೇಖಿಸುತ್ತದೆ. ಇದನ್ನು ರಚಿಸಿದ ವಿಜ್ಞಾನಿ ಕೇರಳದ ತ್ರಿಕ್ಕಂಟಿಯೂರಿನ ನೀಲಕಂಠ (೧೫ ನೆ ಶತಮಾನ), ನಮ್ಮ ದೇಶ ಕಂಡ ಒಬ್ಬ ಅತ್ಯಂತ ಮೇಧಾವೀ ಗಣಿತ-ಖಗೋಳಜ್ಞ. ಈ ಗ್ರಂಥದ ಭಾಷೆ, ವ್ಯಾಖ್ಯಾನ, ವಿಷಯ ಪ್ರಸ್ತುತಿಯ ಶೈಲಿ ಎಲ್ಲವೂ ಅದ್ಭುತ. ಒಬ್ಬ ವಿಜ್ಞಾನಿಗೆ ಇರಬೇಕಾದ ದೃಷ್ಟಿ, ಒಬ್ಬ ಶಿಕ್ಷಕ ವಿದ್ಯಾರ್ಥಿಗೆ ಹೇಳಬೇಕಾದ ಹಿತವಚನಗಳ ಸಂಗ್ರಹ ಈ ಗ್ರಂಥದಲ್ಲಿದೆ. ಭಾರತೀಯ ವಿಜ್ಞಾನ/ಗಣಿತದಲ್ಲಿ ಉಪಪತ್ತಿ (ಪ್ರೂಫ್)- ಮತ್ತು ವೈಚಾರಿಕ ಚಿಂತನೆಗೆ ಎಷ್ಟು ಮಹತ್ತ್ವ ನೀಡಲಾಗಿದೆ ಎನ್ನುವುದು ಕೂಡಾ ಈ ಗ್ರಂಥದಲ್ಲಿ ವ್ಯಕ್ತವಾಗುತ್ತದೆ. ಭಾರತದ ಗ್ರಂಥಗಳಲ್ಲಿ ಪ್ರೂಫ್ ಇಲ್ಲ ಎಂಬ ಒಂದು ಮಿಥ್ಯಾ ಆರೋಪ ವಿದೇಶೀಯರಲ್ಲಿರುವುದರಿಂದ ಈ ಗ್ರಂಥಕ್ಕೆ ಅಪಾರ ಮಹತ್ವವಿದೆ.
ಮಹೇಶ್ ಈ ಗ್ರಂಥದ ಸಂಪೂರ್ಣ ಆಂಗ್ಲ ಭಾಷಾಂತರ ಮಾಡಿದ್ದಾರೆ ಮತ್ತು ಅಗತ್ಯ ವಿವರಣೆಗಳನ್ನೂ ಆಂಗ್ಲ ಭಾಷೆಯಲ್ಲಿ ನೀಡಿದ್ದಾರೆ. ಸೂಕ್ತ ಆಧುನಿಕ ಗಣಿತ ವಿವರಣೆ, ಅಗತ್ಯ ಚಿತ್ರಗಳನ್ನೂ ಸೇರಿಸಿದ್ದಾರೆ. ಗ್ರಹ-ಭ್ರಮಣ ಸಿದ್ಧಾಂತ (ಥಿಯರಿ ಓಫ್ ಪ್ಲಾನೆಟರಿ ಮೋಷನ್) ದ ಬೆಳವಣಿಗೆಯಲ್ಲಿ ಗ್ರಂಥದ ಕೊಡುಗೆ ಇತ್ಯಾದಿ ಮಹತ್ತ್ವ ಪೂರ್ಣ ವಿಷಯದ ಕುರಿತು ಪ್ರತಿಪಾದಿಸಿದ್ದಾರೆ. ಭಾರತದಲ್ಲಿ ಆದ ವಿಜ್ಞಾನದ ಬೆಳವಣಿಗೆಯ ಇತಿಹಾಸ ತಿಳಿಯಲು ಹಾಗೂ ನಮ್ಮ ಪೂರ್ವಜರ ಕೊಡುಗೆಯ ಮಹತ್ತ್ವ ತಿಳಿಯಲು ಈ ಅಧ್ಯಯನ ಸಹಕಾರಿ ಆಗಲಿದೆ.
ನಮ್ಮ ಸಂಸ್ಕೃತಿಯ ಆಧಾರವಾದ ಸಂಸ್ಕೃತ ಭಾಷೆಯ ಪ್ರಪಂಚದೆಲ್ಲೆಡೆ ಇರುವ ಅಭಿಮಾನದ ದ್ಯೋತಕವೇ ವಿಶ್ವ ಸಂಸ್ಕೃತ ಸಮ್ಮೇಳನ. ಈ ಸಮ್ಮೇಳನ ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುತ್ತದೆ. ಸೆಪ್ಟೆಂಬರ್ ೧-೫, ೨೦೦೯ ದ ತನಕ ೧೪ನೆಯ ವಿಶ್ವ ಸಂಸ್ಕೃತ ಸಮ್ಮೇಳನ ಜಪಾನಿನ ಕ್ಯೋಟೋ ವಿಶ್ವವಿದ್ಯಾಲಯದಲ್ಲಿ ನಡೆದಿತ್ತು. ಈ ವಿಶ್ವ ವಿದ್ಯಾಲಯದಲ್ಲಿ ಭಾರತೀಯ ಗಣಿತ-ಖಗೋಳಶಾಸ್ತ್ರದ ಬಗ್ಗೆಯೂ ಸಂಶೋಧನೆ-ಅಧ್ಯಯನ ನಡೆಯುತ್ತಿದೆ. ಇಂತಹ ಅತ್ಯಪೂರ್ವ ಸಮ್ಮೇಳನದಲ್ಲಿ ಸಂಸ್ಕೃತದಲ್ಲಿರುವ ವಿಶಾಲವಾದ ಜ್ಞಾನ ವಿಜ್ಞಾನ ಶಾಖೆಗಳ ಬಗ್ಗೆ ಆಯಾಯ ಕ್ಷೇತ್ರಗಳಲ್ಲಿ ಪರಿಶ್ರಮ ಮಾಡಿದವರಿಂದ ವಿಚಾರ ಮಂಡನೆ ಗಳು ಮಾಡಲ್ಪಟ್ಟಿದ್ದವು. ಸುಮಾರು ೩೫೦ ಪ್ರಸ್ತುತಿಗಳು ೧೫ ಗೋಷ್ಠಿ ಗಳಲ್ಲಿ ೫ ದಿನಗಳ ಕಾಲ ನಡೆದಿದ್ದವು. ೩೫ ದೇಶಗಳಿಂದ ಬಂದ ಸಂಸ್ಕೃತ ವಿದ್ವಾಂಸರು, ಶೋಧ ವಿದ್ಯಾರ್ಥಿಗಳು, ಅಭಿಮಾನಿಗಳ ಒಟ್ಟು ಸಂಖ್ಯೆ ಸುಮಾರು ೫೦೦. ಇಂತಹ ಅಪೂರ್ವ ಸಮ್ಮೇಳನದಲ್ಲ್ಲಿ ಸಂಸ್ಕೃತ ಮತ್ತು ವೈಜ್ಞಾನಿಕ ಸಾಹಿತ್ಯ ಎಂಬ ಗೋಷ್ಠಿಯಲ್ಲಿ ‘ಶ್ಯೇನ ಚಿತಿ’ ಎಂಬ ಒಂದು ವಿಚಾರವನ್ನು ಮಹೇಶ ಕೂಳಕ್ಕೋಡ್ಲು ಪ್ರಸ್ತುತ ಪಡಿಸಿ ವಿದ್ವಾಂಸರ ಪ್ರಶಂಸೆಗೆ ಪಾತ್ರರಾಗಿದ್ದರು.
ವಿಶ್ವದ ಗಣಿತದ ಇತಿಹಾಸವನ್ನು ತಿಳಿಯುವುದರಲ್ಲಿ ಅತ್ಯಂತ ಆವಶ್ಯಕವಾಗಿರುವುದು ಸಂಸ್ಕೃತದ ಗ್ರಂಥಗಳ ಪರಿಶೀಲನೆ. ಕ್ರಿ.ಪೂ. ೮೦೦ ಗಿಂತಲೂ ಹಿಂದಿನದಾದ ಶುಲ್ಬಸೂತ್ರ ಗಳಲ್ಲಿ ಯಜ್ಞ ವೇದಿಕೆಗಳ ನಿರ್ಮಾಣಕ್ಕೆ ಸಂಬಂಧಿಸಿದ ರೇಖಾಗಣಿತದ ಮಾಹಿತಿ ದೊರೆಯುತ್ತದೆ. ಶ್ಯೇನ ಚಿತಿ ಎಂಬುದು ಗಿಡುಗ ಪಕ್ಷಿಯಾಕಾರದ ಒಂದು ಯಜ್ಞ ವೇದಿಕೆ. ಇದರ ನಿರ್ಮಾಣದಲ್ಲಿ ಬಳಸಬೇಕಾದ ಇಟ್ಟಿಗೆಗಳ ನಿರ್ಮಾಣ ಕ್ರಮ, ಆಕಾರ, ವಿನ್ಯಾಸ ಕ್ರಮ ಇತ್ಯಾದಿ ವಿಚಾರಗಳು ಅಲ್ಲಿ ಉಲ್ಲಿಖಿತವಾಗಿವೆ. ರೇಖಾಗಣಿತದ ದೃಷ್ಟಿಯಿಂದ, ವಿನ್ಯಾಸಕ್ರಮದ ರೀತಿಯಿಂದ ಇದರ ಮಹತ್ತ್ವವೇನು ಎಂಬುದರ ಬಗ್ಗೆ ಮಾಹಿತಿ ನೀಡುವಂತಹ ಚಿತ್ರಗಳ-ಸ್ಲೈಡ್ ಶೋ ಸಹಿತವಾದ ಭಾಷಣವನ್ನು ಕೂಳಕ್ಕೋಡ್ಳು ಮಹೇಶ್ ಮಾಡಿದ್ದರು.
ನ್ಯೂಟನ ನಿಗಿಂತ ಸುಮಾರು ೨೦೦ ವರ್ಷಗಳ ಹಿಂದೆ ಭಾರತದಲ್ಲಿ ದ್ವಿಪದ ವಿಸ್ತರಣೆ (ಬೈನೋಮಿಯಲ್ ಎಕ್ಸ್ಪಾನ್ಶನ್) ಯ ವಿಚಾರ ಕ್ರಿಯಾಕ್ರಮಕರೀ ಎಂಬ ಗಣಿತ ಗ್ರಂಥದಲ್ಲಿ ಉಲ್ಲೇಖವಾಗಿರುವುದನ್ನು ಆಧಾರಸಹಿತವಾಗಿ ತೋರಿಸುವ ಒಂದು ಭಾಷಣವನ್ನು (ಟರ್ನಿಂಗ್ ಏನ್ ಆಲ್ಜೀಬ್ರಿಕ್ ಎಕ್ಸ್ಪ್ರೆಷನ್ ಇನ್ ಟು ಏನ್ ಇನ್ಫೈನೈಟ್ ಸೀರೀಸ್ - ಏನ್ ಇಂಡಿಯನ್ ಕೋಂಟ್ರಿಬ್ಯೂಷನ್) ಅವರು ಕಳೆದ ವರ್ಷಾರಂಭದಲ್ಲಿ ಬೆಲ್ಜಿಯಂ ದೇಶದ ಬ್ರಸ್ಸೆಲ್ಸ್ ವಿಶ್ವವಿದ್ಯಾಲಯದಲ್ಲಿ ಮಾಡಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು.
ಭಾರತೀಯ ವಿಜ್ಞಾನದ ಬಗ್ಗೆ ಅಧ್ಯಯನ ಕಾರ್ಯ ನಿರತರಾಗಿದ್ದಾರೆ. ಇವರು ಉಜಿರೆಯ ಶ್ರೀ ಮಂಜುನಾಥೇಶ್ವರ ಕಾಲೇಜಿನಲ್ಲಿ ಹಾಗೂ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದಲ್ಲಿ ವಿಜ್ಞಾನ ಮತ್ತು ಸಂಸ್ಕೃತದ ವಿಶೇಷ ಅಧ್ಯಯನವನ್ನು ಮಾಡಿದ್ದಾರೆ. ಇವರು ರಾಷ್ಟ್ರಪತಿ ಸುವರ್ಣ ಪದಕ ಪುರಸ್ಕಾರ (೨೦೦೩), ಯು ಜಿ ಸಿ ಯ ರಿಸರ್ಚ್ ಫೆಲೋಶಿಪ್ (೨೦೦೩),ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ ಯ ರಿಸರ್ಚ್ ಫೆಲೋಶಿಪ್ (೨೦೦೮--) ಗಳನ್ನೂ ಸಾಧಿಸಿದವರಾಗಿದ್ದಾರೆ. ಮುಂಬೈ ಐಐಟಿ ಯ ವಿಜ್ಞಾನಿಗಳು-ಇಂಜಿನಿಯರಿಂಗ್ ವಿದ್ಯಾರ್ಥಿಗಳು ಇವರಿಂದ ಸಂಸ್ಕೃತ ಮಾತನಾಡಲು ಪ್ರೇರಿತರಾಗುತ್ತಿದ್ದಾರೆ. ಅಭಿನಂದನೆಗಳು, ಮಹೇಶ್...
21 July 2010
ಖಂಡಿಗೆ ಮದಕ
ಊರಿನ ಹಿರಿಯರಿಗೆಲ್ಲ ಖಂಡಿಗೆ ಮದಕದ ಪ್ರಯೋಜನ ಗೊತ್ತಿದೆ, ಹುಡುಗರಿಗೆ ಅಲ್ಲಿ ನೀರು ನಿಲ್ಲುತ್ತದೆ ಅಂತ ಮಾತ್ರ ಗೊತ್ತು. ಮಣ್ಣಿನ ರಸ್ತೆಯ ಇಕ್ಕೆಲಗಳಲ್ಲಿ ಸಾಲಾಗಿ ನೆಟ್ಟ ತೆಂಗಿನ ಮರದಿಂದಾಗಿ ಅಲ್ಲಿಗೆ ತೆಂಗಿನ ಸಾಲು ಅಂತ ಹೇಳುತ್ತಾರೆ ಎಂಬುದು ಇನ್ನು ಕೆಲವರಿಗೆ ಗೊತ್ತು. ಅಧ್ಯಯನದ ವಿಚಾರಕ್ಕೆ ಬಂದಾಗ ಮದಕದ ಪ್ರಸ್ತಾಪವಾಯಿತು. ಹತ್ತಿರದಲ್ಲೇ ಇರುವ ಈ ಮದಕವನ್ನು ಕಂಡು ಬಂದಾಗ ವಿದ್ಯಾರ್ಥಿಗಳಿಗೂ ಖುಷಿಯಾಯಿತು.
19 July 2010
ನೀರ್ಚಾಲು ಅಂಗನವಾಡಿಯಲ್ಲಿ ಮಳೆನೀರ ಸಂಗ್ರಹಣೆ
17 July 2010
ಕೋಳಿಮರಿಗಳ ವಿತರಣೆ
14 July 2010
ಕಾರು ಬಂತು...
09 July 2010
ಮೈಕುರಿ ಗದ್ದೆಗೆ ಪಯಣ...
08 July 2010
ಸಮಾಜ ವಿಜ್ಞಾನ ಕ್ಲಬ್ ಉದ್ಘಾಟನೆ
02 July 2010
ರಕ್ಷಕ ಶಿಕ್ಷಕ ಸಂಘದ ಮಹಾಸಭೆ
“ಕಳೆದ ಕೆಲವಾರು ವರ್ಷಗಳಿಂದ ಉತ್ತಮ ಫಲಿತಾಂಶ ದಾಖಲಿಸುತ್ತಾ ಬಂದಿರುವ ಮಹಾಜನ ವಿದ್ಯಾಸಂಸ್ಥೆ ಈಗ ಶತಮಾನೋತ್ಸವ ವರ್ಷದ ಹೊಸ್ತಿಲಿನಲ್ಲಿದೆ. ಶತಮಾನೋತ್ಸವದ ಆಚರಣೆಗೆ ಇದು ಸ್ಪೂರ್ತಿ ನೀಡುತ್ತದೆ. ಶಾಲೆ ಮತ್ತು ವಿದ್ಯಾರ್ಥಿಗಳ ಪ್ರಗತಿಯಲ್ಲಿ ರಕ್ಷಕ ಶಿಕ್ಷಕ ಸಂಘದ ಪಾತ್ರ ಮಹತ್ತರವಾದದ್ದು” ಎಂದು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೆ.ಗೋಪಾಲಕೃಷ್ಣ ಭಟ್ ಅಭಿಪ್ರಾಯಪಟ್ಟರು. ಅವರು ೦೨.೦೭.೨೦೧೦ ಶುಕ್ರವಾರ ನಮ್ಮ ಶಾಲಾ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಅಬ್ಬಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಗತ ವರ್ಷದ ವರದಿ ವಾಚಿಸಿದರು. ಶಾಲಾ ಹಿರಿಯ ಸಂಸ್ಕೃತ ಅಧ್ಯಾಪಕ ಎಸ್.ವಿ.ಭಟ್ ಸ್ವಾಗತಿಸಿದರು. ಹಿರಿಯ ಅಧ್ಯಾಪಕ ಕೆ.ನಾರಾಯಣ ಭಟ್ ಧನ್ಯವಾದ ಸಮರ್ಪಿಸಿದರು.
ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಅಬ್ಬಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಗತ ವರ್ಷದ ವರದಿ ವಾಚಿಸಿದರು. ಶಾಲಾ ಹಿರಿಯ ಸಂಸ್ಕೃತ ಅಧ್ಯಾಪಕ ಎಸ್.ವಿ.ಭಟ್ ಸ್ವಾಗತಿಸಿದರು. ಹಿರಿಯ ಅಧ್ಯಾಪಕ ಕೆ.ನಾರಾಯಣ ಭಟ್ ಧನ್ಯವಾದ ಸಮರ್ಪಿಸಿದರು.
ವಿದ್ಯಾರಂಗ ಉದ್ಘಾಟನೆ
‘ಸಾಹಿತ್ಯ ಎಂದರೆ ಸಾಗರದಂತೆ ವಿಶಾಲವಾದುದು. ಸಾಹಿತ್ಯ ವೇದಿಕೆ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಹೊರತರುವ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಇದನ್ನು ಪೋಷಿಸಿ ಬೆಳೆಸಬೇಕು.’ ಎಂದು ಹಿರಿಯ ಸಾಹಿತಿ ವಿ.ಬಿ.ಕುಳಮರ್ವ ಅಭಿಪ್ರಾಯಪಟ್ಟರು. ಅವರು ೦೨.೦೭.೨೦೧೦ ಶುಕ್ರವಾರ ನಮ್ಮ ಶಾಲಾ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಅಧ್ಯಾಪಕರಾದ ಎಸ್.ವಿ.ಭಟ್, ವಾಣಿ.ಪಿ.ಎಸ್ ಶುಭಾಶಂಸನೆಗೈದರು. ವಿದ್ಯಾರ್ಥಿ ವಿನೀತ್ ಶಂಕರ್.ಎಚ್ ಗತ ವರ್ಷದ ಚಟುವಟಿಕೆಗಳ ವರದಿ ವಾಚಿಸಿದರು. ವಿದ್ಯಾರ್ಥಿಗಳಾದ ಶಾಂತಿ.ಕೆ ಸ್ವಾಗತಿಸಿ ಸುಬ್ರಹ್ಮಣ್ಯ ಪ್ರಸಾದ.ಕೆ ವಂದಿಸಿದರು. ವಿದ್ಯಾರ್ಥಿನಿ ರಂಜಿತಾ ಕಾರ್ಯಕ್ರಮ ನಿರೂಪಿಸಿದಳು. ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಅಧ್ಯಾಪಕರಾದ ಎಸ್.ವಿ.ಭಟ್, ವಾಣಿ.ಪಿ.ಎಸ್ ಶುಭಾಶಂಸನೆಗೈದರು. ವಿದ್ಯಾರ್ಥಿ ವಿನೀತ್ ಶಂಕರ್.ಎಚ್ ಗತ ವರ್ಷದ ಚಟುವಟಿಕೆಗಳ ವರದಿ ವಾಚಿಸಿದರು. ವಿದ್ಯಾರ್ಥಿಗಳಾದ ಶಾಂತಿ.ಕೆ ಸ್ವಾಗತಿಸಿ ಸುಬ್ರಹ್ಮಣ್ಯ ಪ್ರಸಾದ.ಕೆ ವಂದಿಸಿದರು. ವಿದ್ಯಾರ್ಥಿನಿ ರಂಜಿತಾ ಕಾರ್ಯಕ್ರಮ ನಿರೂಪಿಸಿದಳು. ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
Subscribe to:
Posts (Atom)