Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

17 August 2010

ಕೀರ್ತನಾ ತರಗತಿ ಆರಂಭ

“ದಾಸವಾಣಿಯನ್ನು ಕೇಳುವುದು ಇಂದಿನ ಯಾಂತ್ರಿಕ ಜೀವನಕ್ಕೆ ಜೀವ ಸೆಲೆಯಾಗಿದೆ. ದಾಸರ ಜನಜಾಗೃತಿ ಕಾರ್ಯವನ್ನು ಸ್ಪಷ್ಟಪಡಿಸುವ ದಾಸವಾಣಿ ಮನೆಮನಗಳ ಆಸ್ತಿಯಾಗಬೇಕು. ಅಂತಹ ದಾರಿ ತೋರುವ ಈ ಕೀರ್ತನಾ ತರಗತಿ ಯಶಸ್ವಿಯಾಗಲಿ" ಎಂದು ಖ್ಯಾತ ಗಾಯಕ ರಾಮಕೃಷ್ಣ ಕಾಟುಕುಕ್ಕೆ ಅಭಿಪ್ರಾಯಪಟ್ಟರು. ಅವರು ನಮ್ಮ ಶಾಲಾ ಆರ್ಟ್ಸ್ ಕ್ಲಬ್ ಆಶ್ರಯದಲ್ಲಿ ನಡೆಯಲಿರುವ ದಾಸವಾಣಿ ಕೀರ್ತನಾ ತರಗತಿಗಳನ್ನು ೧೩.೦೮.೨೦೧೦ ಶುಕ್ರವಾರ ಉದ್ಘಾಟಿಸಿ ಮಾತನಾಡುತ್ತಿದ್ದರು.

ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಎಂ.ವಿ.ಭಟ್ ಮಧುರಂಗಾನ ಶುಭ ಹಾರೈಸಿದರು. ಚಿತ್ರಕಲಾ ಅಧ್ಯಾಪಕ ಕೋರಿಕ್ಕಾರು ಗೋವಿಂದ ಶರ್ಮ ಸ್ವಾಗತಿಸಿ ಶಿಕ್ಷಕಿ ವಾಣಿ.ಪಿ.ಎಸ್ ವಂದಿಸಿದರು. ವಿದ್ಯಾರ್ಥಿನಿ ಶಾಂತಿ.ಕೆ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment