Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

22 July 2011

‘ಚೈತನ್ಯ ಕ್ಲಬ್’ ಉದ್ಘಾಟನೆ

"ಜಗತ್ತು ಆಧುನಿಕತೆಯ ಕಡೆಗೆ ಸಾಗುತ್ತಿರುವಂತೆ ವಿದ್ಯುತ್ತಿನ ಉಪಯೋಗ ವಿಪರೀತವಾಗಿ ಹೆಚ್ಚುತ್ತಿದೆ. ಒಂದು ಯೂನಿಟ್ ವಿದ್ಯುತ್ತಿನ ಉಳಿತಾಯ ಮೂರು ಯೂನಿಟ್ ವಿದ್ಯುತ್ ಉತ್ಪಾದನೆಗೆ ಸಮ ಎಂಬ ಸ್ಥಿತಿಗೆ ನಾವು ತಲಪಿದ್ದೇವೆ. ಹಾಗಾಗಿ ಮನೆಮನಗಳಲ್ಲಿ ಚೈತನ್ಯದ ಉಳಿತಾಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೇರಳ ವಿದ್ಯುತ್ ಇಲಾಖೆಯು ವಿದ್ಯಾಭ್ಯಾಸ ಇಲಾಖೆಯ ಸಹಯೋಗದಲ್ಲಿ ವಿದ್ಯಾರ್ಥಿಗಳಲ್ಲಿ ಚೈತನ್ಯದ ಸಂರಕ್ಷಣೆಯ ಕಾರ್ಯಕ್ರಮವನ್ನು ಆಯೋಜಿಸಿದೆ. ವಿದ್ಯುತ್ತಿನ ದುರ್ಬಳಕೆಯನ್ನು ತಡೆಗಟ್ಟಿ ನಾಳೆಗಾಗಿ ಒಂದಿಷ್ಟು ಚೈತನ್ಯ ಉಳಿಸೋಣ" ಎಂದು ಕೇರಳ ರಾಜ್ಯ ವಿದ್ಯುತ್ ಮಂಡಳಿಯ ಬದಿಯಡ್ಕ ವಿಭಾಗದ ಸಹಾಯಕ ಇಂಜಿನಿಯರ್ ರಾಜಗೋಪಾಲ.ಕೆ.ಬಿ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಕೇರಳ ಸರಕಾರದ ‘ನಾಳೆಗಾಗಿ ಚೈತನ್ಯ’ ಯೋಜನೆಯ ಅಂಗವಾಗಿ ಆರಂಭವಾದ ‘ಚೈತನ್ಯ ಕ್ಲಬ್’ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.


ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಅಧ್ಯಾಪಕರಾದ ಎಸ್.ವಿ.ಭಟ್ ಮತ್ತು ಶಂಕರನಾರಾಯಣ ಶರ್ಮ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶಾಂತಿ.ಕೆ ಸ್ವಾಗತಿಸಿ, ಶಶಾಂಕ ಶರ್ಮ.ಎಸ್ ವಂದಿಸಿದರು. ವರ್ಷಾ.ಕೆ ಕಾರ್ಯಕ್ರಮ ನಿರೂಪಿಸಿದರು. ವಿದ್ಯುತ್ ಉಳಿತಾಯದ ಮಹತ್ವವನ್ನು ವಿವರಿಸುವ ಸ್ಲೈಡ್ ಪ್ರದರ್ಶನ ನಡೆಸಲಾಯಿತು. ವಿದ್ಯುತ್ ಉತ್ಪಾದನೆ ಮತ್ತು ಪ್ರೇಷಣೆಯ ಹಂತಗಳ ಬಗ್ಗೆ ವಿದ್ಯಾರ್ಥಿಗಳು ತಮ್ಮ ಸಂಶಯಗಳನ್ನು ಈ ಸಂದರ್ಭಲ್ಲಿ ಬಗೆಹರಿಸಿಕೊಂಡರು.

1 comment: