Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

14 February 2014

ಶಾಲೆಯಲ್ಲಿ ಯೋಗ ಶಿಬಿರ


 “ಯೋಗದ ಅಭ್ಯಾಸವು ಏಕಾಗ್ರತೆಯ ಸಿದ್ಧಿಗೆ ಉತ್ತಮ ಹಾದಿ. ಪರೀಕ್ಷೆಗೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳಲ್ಲಿ ಯೋಗಾಭ್ಯಾಸವು ಹೊಸ ಹುಮ್ಮಸ್ಸನ್ನು ಮೂಡಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಯೋಗವನ್ನು ನಿಷ್ಟೆಯಿಂದ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಮಂಗಳೂರು ವಲಯ ಬೌದ್ಧಿಕ್ ಪ್ರಮುಖ್, ನಿವೃತ್ತ ಶಿಕ್ಷಕಿ ಸವಿತಾ ಅಭಿಪ್ರಾಯಪಟ್ಟರು. ಅವರು ಹಿಂದೂ ಸೇವಾ ಪ್ರತಿಷ್ಠಾನದ ರಾಷ್ಟ್ರ ಸೇವಿಕಾ ಸಮಿತಿಯು ಸ್ವಾಮಿ ವಿವೇಕಾನಂದರ 150ನೆಯ ಜನ್ಮವರ್ಷಾಚರಣೆಯ ಅಂಗವಾಗಿ ಕಳೆದ 08.02.2014 ಶನಿವಾರ ನಮ್ಮ ಶಾಲೆಯಲ್ಲಿ ಕಿಶೋರಿಯರಿಗಾಗಿ ಆಯೋಜಿಸಿದ ಯೋಗ ಮತ್ತು ನೈತಿಕ ತಿಳುವಳಿಕೆಯ ಶಿಬಿರದಲ್ಲಿ ಮಾತನಾಡುತ್ತಿದ್ದರು.
ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಉದ್ಘಾಟಿಸಿದರು. ಹಿಂದೂ ಸೇವಾ ಪ್ರತಿಷ್ಠಾನದ ಸೇವಾವೃತ್ತಿಯಲ್ಲಿರುವ ಇಂದಿರಾ ಯೋಗ ತರಬೇತಿ ನೀಡಿದರು.

No comments:

Post a Comment