Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

25 June 2018

ಬಳ್ಳಪದವು ಶಂಕರನಾರಾಯಣ ಭಟ್ಟರಿಂದ ಕೊಡುಗೆ


ಶಾಲೆಯ ಪೂರ್ವ ವಿದ್ಯಾರ್ಥಿ, ಸಂಸ್ಕೃತ ವಿದ್ವಾಂಸ ವೇದಮೂರ್ತಿ ಬಳ್ಳಪದವು ಶಂಕರನಾರಾಯಣ ಭಟ್ಟರಿಗೆ ನಮ್ಮ ಸಂಸ್ಥೆಯ ಮೇಲೆ ಅಪಾರ ಪ್ರೀತಿ, ಇಳಿವಯಸ್ಸಿನಲ್ಲಿಯೂ ಶಾಲೆಯ ಮೇಲಿನ ಅಭಿಮಾನದಿಂದ ಮಧ್ಯಾಹ್ನ ಭೋಜನ ವ್ಯವಸ್ಥೆಗೆ ಅನುಕೂಲವಾಗುವಂತೆ ಹೊಸ ಪಾತ್ರೆ ಮತ್ತು ಪರಿಕರಗಳನ್ನು ತೆಗೆದಿಟ್ಟು ನಮ್ಮನ್ನು ಕರೆದಿದ್ದಾರೆ, ಇಂದು ನಮ್ಮ ಶಾಲೆಯ ಮುಖ್ಯೋಪಾಧ್ಯಾಯರಾದ ಸಿ.ಎಚ್ ವೆಂಕಟರಾಜರು ಅವುಗಳನ್ನು ಸ್ವೀಕರಿಸಿದರು. ಜೊತೆಯಲ್ಲಿ ಅಧ್ಯಾಪಕರಾದ ಬಿ.ಸುಬ್ರಹ್ಮಣ್ಯ, ಶಿಕ್ಷಕಿ ವಾಣಿ.ಪಿ.ಎಸ್ ಮತ್ತು ಶೈಲಜಾ.ಬಿ ಉಪಸ್ಥಿತರಿದ್ದರು. ಬಳ್ಳಪದವು ಶಂಕರನಾರಾಯಣ ಭಟ್ಟರಿಗೂ ಅವರ ಧರ್ಮಪತ್ನಿಯವರಿಗೂ ಧನ್ಯವಾದಗಳು...

No comments:

Post a Comment