ಬೆಂಗಳೂರು
15-02-2021
ನಮ್ಮ
ಮಾತೃ ಶ್ರೀಯವರಾದ ದಿ.
ಕೋಳಾರಿ
ಕೋರಿಕ್ಕಾರು ಕೃಷ್ಣ ಭಟ್ಟರ
ಧರ್ಮಪತ್ನಿ,
ದಿ.
ಶ್ರೀಮತಿ
ಲಕ್ಷ್ಮಿ ಅಮ್ಮನವರು ನಮ್ಮ ನ್ನಗಲಿ
ಇಂದಿಗೆ ಐದು ತಿಂಗಳು.
ಅವರಿಗೆ
ದೊರೆತ ಅತ್ಯಲ್ಪ ಶಾಲಾ ಶಿಕ್ಷಣವನ್ನು
ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯು
ನೀಡಿತ್ತು ಎಂಬುದು ಹೆಮ್ಮೆಯ
ವಿಚಾರವಾಗಿದೆ.
ನಮ್ಮ
ಮಾತೃಶ್ರೀಯವರು ನಮಗೆ ನೀಡಿದ
ಆರಂಭಿಕ ಶಿಕ್ಷಣವೂ ಜೀವನ ಮೌಲ್ಯಗಳೂ
ಅಳತೆಗೆ ನಿಲುಕದಷ್ಟು.
ನಾವು
ಏಳು ಜನ ಮಕ್ಕಳನ್ನು ಬಡತನ ಹಾಗೂ
ಸೌಲಭ್ಯ ರಹಿತ ದಿನಗಳಾದ 1950-80ರ
ದಶಕಗಳಲ್ಲಿ ಸ್ಪೂರ್ತಿ ಮತ್ತು
ಉತ್ಸಾಹಗಳನ್ನು ತುಂಬಿ ಮುನ್ನಡೆಸಿದ
ಅವರ ದಿವ್ಯ ಚೇತನಕ್ಕೆ ನಮ್ಮ
ಅನಂತಾನಂತ ನಮನಗಳು.
1930-40ರ
ದಶಕಗಳಲ್ಲಿ ಹೆಣ್ಣು ಮಕ್ಕಳ
ಶಿಕ್ಷಣವು ಒಂದು ಕನಸಿನ ಮಾತು.
ನಮ್ಮ
ಮಾತಶ್ರೀ ಯವರೂ ಕೂಡಾ
ಶಿಕ್ಷಣ
ವಂಚಿತರಾದ ಆ ಕಾಲದ ಹೆಣ್ಣು
ಮಕ್ಕಳಲ್ಲಿ ಒಬ್ಬರು.
ಅವರ
ಶಾಲಾ ಶಿಕ್ಷಣವು 3ನೇ
ತರಗತಿಯಿಂದ ಆರಂಭವಾಗಿ 6ನೇ
ತರಗತಿಯಲ್ಲಿ ಕೊನೆಗೊಂಡಿತ್ತು.
ತಮ್ಮ
13ನೇ
ವಯಸ್ಸಿನಲ್ಲಿ ವಿವಾಹ ಜೀವನಕ್ಕೆ
ಕಾಲಿರಿಸಿದ ಅವರು ಮತ್ತೆಂದೂ ಯಾವ
ವಿಧವಾದ ವಿದ್ಯಾಭ್ಯಾಸವನ್ನೂ
ಮುಂದುವರಿಸಲಾಗಲಿಲ್ಲ.
ಹೀಗಿದ್ದೂ
ತಮ್ಮ ಮಕ್ಕಳಿಗೆ ಶಿಕ್ಷಣದ
ಮಹತ್ವವನ್ನು ಮನದಟ್ಟು ಮಾಡಿ
ಅವರನ್ನು ಉನ್ನತ ಶಿಕ್ಷಣದತ್ತ
ಮುನ್ನಡೆಸಿದರು.
ತಮ್ಮ
ಮಕ್ಕಳಲ್ಲದೆ ಕುಟುಂಬದ ಹಾಗೂ
ಕುಟುಂಬೇತರ ಮಕ್ಕಳ ವಿದ್ಯಾಭ್ಯಾಸಕ್ಕೂ
ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ
ಸಹಕರಿಸಿದ ಅವರ ದಿವ್ಯಾತ್ಮಕ್ಕೆ
ಒಂದು ಕಿರು ಕಾಣಿಕೆಯಾಗಿ,
ಅವರು
ಕಲಿತ ಶಾಲೆಯಲ್ಲಿ 10ನೇ
ತರಗತಿಯಲ್ಲಿ ಅತೀ ಹೆಚ್ಚು ಅಂಕ
ಗಳಿಸಿದ ವಿದ್ಯಾರ್ಥಿನಿ (ಯರಿ)ಗೆ
ಒಂದು
ನಗದು ಬಹುಮಾನವನ್ನು ಕೊಡಮಾಡಲು
ತೀರ್ಮಾನಿಸಿದ್ದೇವೆ.
ನಮ್ಮ ಅಪೇಕ್ಷೆಯನ್ನು ಅಂಗೀಕರಿಸಿ ಶ್ರೀಮತಿ ಲಕ್ಷ್ಮಿ ಅಮ್ಮ ಸ್ಮಾರಕ ಬಹುಮಾನವನ್ನು ಅನುಷ್ಠಾನಗೊಳಿಸಿದ ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಆಡಳಿತ ಮಂಡಳಿ, ಮೂಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದಕ್ಕೆ ನಾವು ಆಭಾರಿಗಳು.
ಈ ಕಾರ್ಯದಲ್ಲಿ ನಮ್ಮ ಪರವಾಗಿ ಅಪೇಕ್ಷೆಯನ್ನು ಮಂಡಿಸಿ ಎಲ್ಲಾ ವಿಧವಾದ ಸಹಕಾರವನ್ನೂ ನೀಡಿದ ನಮ್ಮ ಸೋದರ ಸಂಬಂಧಿ ಮತ್ತು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಅಧ್ಯಾಪಕರೂ ಆಗಿರುವ ಶ್ರೀ ಗೋವಿಂದ ಶರ್ಮ, ಕೋರಿಕ್ಕಾರು ಅವರಿಗೆ ನಮ್ಮೆಲ್ಲರ ಅಕ್ಕರೆಯ ಧನ್ಯವಾದಗಳು.
ಇಂತಿ,
ದಿ.
ಕೋಳಾರಿ
ಕೋರಿಕ್ಕಾರು
ಕೃಷ್ಣ
ಭಟ್ ಮತ್ತು ಶ್ರೀಮತಿ ಲಕ್ಷ್ಮಿ
ಅಮ್ಮ ನವರ ಮಕ್ಕಳ ಪರವಾಗಿ,
ಶ್ರೀಮತಿ
ಡಾ.
ಕೆ.
ಸುಮಂಗಲಾ
ಭಟ್
ಸಂಸ್ಥಾಪಕ
ನಿರ್ದೇಶಕರು
ಡೆಕ್ಟ್ರಾಸ್
ಟೆಕ್ನಾಲಜೀಸ್
ಕೆಂಗೇರಿ,
ಬೆಂಗಳೂರು
-560060.
No comments:
Post a Comment