ವಿದ್ಯಾರ್ಥಿಗಳ ಕಾಲುವಾರ್ಷಿಕ ಪರೀಕ್ಷೆ ಇನ್ನೂ ಮುಗಿದಿಲ್ಲ. ಮುಂದಿನ ಸೋಮವಾರ ಮತ್ತು ಮಂಗಳವಾರ ಮತ್ತೆ ಪರೀಕ್ಷೆಗಳಿವೆ. ಈ ಒತ್ತಡಗಳ ನಡುವೆ ನಾವು ಸರಳವಾಗಿ ಶಿಕ್ಷಕರ ದಿನವನ್ನು ಆಚರಿಸಿಕೊಂಡೆವು. ಒಂಬತ್ತನೆಯ ತರಗತಿ ಹುಡುಗ ಆದರ್ಶ ಪೆನ್ಸಿಲ್ ಚಿತ್ರಗಳನ್ನು ಬಿಡಿಸುವುದರಲ್ಲಿ ಚೆನ್ನಾಗಿ ಪಳಗುತ್ತಿದ್ದಾನೆ. ಅವನು ಬಿಡಿಸಿದ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಅವರ ರೇಖಾಚಿತ್ರವನ್ನು ಒಂಬತ್ತನೆಯ ತರಗತಿ ಹುಡುಗರು ಹಿರಿಯ ಸಂಸ್ಕೃತ ಶಿಕ್ಷಕ ಎಸ್.ವಿ.ಭಟ್ ಅವರಿಗೆ ಸಮರ್ಪಿಸಿದರು.
ಕರ್ನಾಟಕದಲ್ಲೇ ಕನ್ನಡ ಅಪರೂಪವಾಗಿರುವ ಈ ದಿನಗಳಲ್ಲಿ, ಕರ್ನಾಟಕಕ್ಕೆ ಅಂಟಿಕೊಂಡಿದ್ದರೂ ಮತ್ತು ಕೇರಳದ ಪ್ರವಾಸಿ ವೆಬ್.ಸೈಟಿನಲ್ಲಿ ಕಾಸರಗೋಡಿನ ಬಗ್ಗೆ ಬರೆಯುತ್ತಾ ಇದು ಬ್ರಿಟೀಷರ ಕಾಲದಲ್ಲಿ ದಕ್ಷಿಣ ಕರ್ನಾಟಕದ ಭಾಗವಾಗಿತ್ತು ಎಂದು ಹೇಳುತ್ತಾ ಕಾಸರಗೋಡನ್ನು ಮಲಯಾಳ ಮಯಮಾಡುತ್ತಿರುವ ಕೇರಳಿಗರ ನಡುವೆ ಹೆಮ್ಮೆಯಿಂದ ಕನ್ನಡದ ಶಾಲೆ ನಡೆಯುತ್ತಿರುವುದು ಸಂತಸದ ವಿಷಯ. ಅಷ್ಟೇ ಅಲ್ಲದೆ ಒಳ್ಳೆಯ ಪ್ರಜೆಗಳನ್ನು ರೂಪಿಸುತ್ತಿರುವ ನಿಮ್ಮ ಸಂಸ್ಥೆಗೆ ಅಭಿನಂದನೆಗಳು. ಇದನ್ನು ಬ್ಲಾಗ್ ರೂಪದಲ್ಲಿ ಹೊರತಂದು ಮುನ್ನಡೆಸುತ್ತಿರುವ ದೊಡ್ಡಮನಿಯವರಿಗೂ ಅಭಿನಂದನೆಗಳು.
ReplyDeleteನಿಮ್ಮ ಹಾರೈಕೆಗಳನ್ನು ಸ್ವೀಕರಿಸುತ್ತೇವೆ. ಆ ಹಾರೈಕೆಗಳು ನಮಗೆ ದಾರಿದೀಪವಾಗಲಿ ಎಂದು ಪ್ರಾರ್ಥಿಸುತ್ತೇವೆ.
Delete