ನಮ್ಮ ಶಾಲೆಯ ವಿದ್ಯಾರ್ಥಿಗಳು ಈ ಬಾರಿ ಕಲೋತ್ಸವದಲ್ಲಿ ರಾಜ್ಯ ಮಟ್ಟದ ತನಕ ಬೆಳೆದಿದ್ದಾರೆ. ಕೇರಳದ ಮಧ್ಯಭಾಗ ಮಲಪ್ಪುರಂನಲ್ಲಿ ನಡೆಯುತ್ತಿರುವ 53ನೇ ರಾಜ್ಯ ಮಟ್ಟದ ಕಲೋತ್ಸವದಲ್ಲಿ ಭಾಗವಹಿಸಲು ನಮ್ಮ ಶಾಲೆಯ ಒಂಬತ್ತು ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇವುಗಳಲ್ಲಿ ಮೊನ್ನೆ 16ರಂದು ಜರಗಿದ ವಂದೇಮಾತರಂ ಗಾಯನದಲ್ಲಿ ಹತ್ತನೇ ತರಗತಿಯ ಸುಶೀಲಾ. ಎಸ್, ಅಂಕಿತಾ. ಪಿ, ಚೈತ್ರಾ. ಎನ್, ಇಶಿಕಾ, ಒಂಭತ್ತನೇ ತರಗತಿಯ ಭಾಗ್ಯಶ್ರೀ. ಕೆ. ಎಸ್, ಅಶ್ವಿನಿ. ಕೆ ಹಾಗೂ ರಮ್ಯಶ್ರೀ ಇವರ ತಂಡ ‘ಎ’ ಗ್ರೇಡ್ ಪಡೆದಿದೆ. ನಿನ್ನೆ ಜರಗಿದ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಭಾಗ್ಯಶ್ರೀ ಕೆ. ಎಸ್ ‘ಬಿ’ ಗ್ರೇಡ್ ಪಡೆದಿದ್ದಾಳೆ. ಒಂಭತ್ತನೇ ತರಗತಿಯ ಶ್ರದ್ಧಾ. ಎಸ್ ಭಾಗವಹಿಸುವ ಮಿಮಿಕ್ರಿ ಸ್ಪರ್ಧೆ ನಾಡಿದ್ದು ಭಾನುವಾರ, ಅಂದರೆ ಕಲೋತ್ಸವದ ಕೊನೆಯ ದಿನ ಒಂದನೇ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ. ವಿದ್ಯಾರ್ಥಿಗಳಿಗೆ ಶುಭಾಶಯಗಳು.
No comments:
Post a Comment