ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಜವಾನನಾಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿ ವಿದ್ಯಾರ್ಥಿಗಳಿಗೆಲ್ಲ ಅಚ್ಚುಮೆಚ್ಚಿನ ‘ಗೋವಿಂದಣ್ಣ’ನಾಗಿ ಇನ್ನೂ ಕರ್ತವ್ಯ ನಿರ್ವಹಿಸುತ್ತಿದ್ದ ಎ.ಗೋವಿಂದ ಭಟ್(೫೨) ನಿನ್ನೆ ರಾತ್ರಿ ೧.೩೦ಕ್ಕೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ಅನಾರೋಗ್ಯದಿಂದಾಗಿ ನಿಧನ ಹೊಂದಿದರು. ೧೫.೦೫.೧೯೫೭ ರಂದು ಕೃಷ್ಣ ಭಟ್ಟರ ಪುತ್ರನಾಗಿ ಜನಿಸಿದ ಅವರು ೧.೧೧.೧೯೮೯ ರಂದು ನೀರ್ಚಾಲಿನಲ್ಲಿ ಉದ್ಯೋಗಿಯಾಗಿ ಸೇವೆ ಆರಂಭಿಸಿದ್ದರು. ಅವರು ಪತ್ನಿ ರಾಜೇಶ್ವರಿ, ತಾಯಿ, ಅಪಾರ ಬಂಧುವರ್ಗ ಮತ್ತು ಸ್ನೇಹಿತರನ್ನು ಅಗಲಿದ್ದಾರೆ. ಮೃತರ ಗೌರವಾರ್ಥ ಇಂದು ನೀರ್ಚಾಲಿನ ಮಹಾಜನ ವಿದ್ಯಾಸಂಸ್ಥೆಗಳಿಗೆ ರಜೆಸಾರಲಾಗಿದೆ. ಮೃತರ ಆತ್ಮಕ್ಕೆ `ಮಹಾಜನ' ಶ್ರದ್ಧಾಂಜಲಿಗಳನ್ನೂ ಸಮರ್ಪಿಸುತ್ತದೆ.
ಅಪರೂಪದ ಶ್ರದ್ಧಾಂಜಲಿ. ದೊಡ್ಡವರ ಸಂಭ್ರಮವನ್ನೇ ತಮ್ಮದೆಂದು ಭ್ರಮಿಸುವ ಜಗತ್ತಿನಲ್ಲಿ ಇಂಥ ವ್ಯಕ್ತಿಗಳನ್ನು ನಿರ್ಲಕ್ಷ್ಯಿಸದೇ ನೆನಪಿಸಿಕೊಂಡಿದ್ದು ನಿಜಕ್ಕೂ ಅಪರೂಪಲ. ಥ್ಯಾಂಕ್ಸ್ ರವಿಶಂಕರ್.
ಅಪರೂಪದ ಶ್ರದ್ಧಾಂಜಲಿ. ದೊಡ್ಡವರ ಸಂಭ್ರಮವನ್ನೇ ತಮ್ಮದೆಂದು ಭ್ರಮಿಸುವ ಜಗತ್ತಿನಲ್ಲಿ ಇಂಥ ವ್ಯಕ್ತಿಗಳನ್ನು ನಿರ್ಲಕ್ಷ್ಯಿಸದೇ ನೆನಪಿಸಿಕೊಂಡಿದ್ದು ನಿಜಕ್ಕೂ ಅಪರೂಪಲ. ಥ್ಯಾಂಕ್ಸ್ ರವಿಶಂಕರ್.
ReplyDelete