ಮೊನ್ನೆ ಭಾನುವಾರ ನಮ್ಮ ವಿದ್ಯಾಸಂಸ್ಥೆಗಳಲ್ಲಿ ಶಾರದಾ ಪೂಜೆಯ ಸಂಭ್ರಮ. ಶ್ರೀಯುತ ಗೋಪಾಲಕೃಷ್ಣ ಭಟ್ಟರು ಶಾರದಾ ಪೂಜೆಯ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟರು. ಅಷ್ಟಾವಧಾನ ಸೇವೆ ನಮ್ಮ ಶಾಲಾ ಸಂಸ್ಕೃತ ಅಧ್ಯಾಪಕ ಶ್ರೀ ಎಸ್. ವಿ. ಭಟ್ಟರ ನೇತೃತ್ವದಲ್ಲಿ ಶ್ರೀ ಶಾರದಾಂಬೆಗೆ ಅಷ್ಟಾವಧಾನ ಸೇವೆ ಜರಗಿತು. ಆದರೆ ಈ ಎಲ್ಲ ಸಂಭ್ರಮಗಳ ನಡುವೆ ಒಂದು ಕಹಿ ನೆನಪು ನಮ್ಮನ್ನು ಕಾಡುತ್ತಿತ್ತು. ಕಳೆದ ವರ್ಷ ನಮ್ಮ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಇದೇ ದಿನ ೧೭.೧೦.೨೦೦೯ ರಂದು ಎರ್ದುಂಕಡವು ಹೊಳೆಯಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟಿದ್ದರು. ಅವರ ನೆನಪಿನಲ್ಲಿ ಎರಡು ದಿನ ಮ್ಲಾನವಾಗಿ ಕಳೆದು ಹೋಯಿತು. ಮೃತರ ಆತ್ಮಕ್ಕೆ ಮತ್ತೆ ನಮನಗಳನ್ನು ಸಲ್ಲಿಸುತ್ತೇವೆ...
may their soul rest in peace... :(
ReplyDelete