ನನಗೆ ಮಾರ್ಚ್ ಇಪ್ಪತ್ತೇಳರಂದು ೯ನೇ ತರಗತಿಯ ಎಲ್ಲಾ ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಆರಂಭವಾಯಿತು. ಎಪ್ರಿಲ್ ೨ ರಂದು ನಾನು ಸ್ಕೌಟ್ ರಾಜ್ಯಪುರಸ್ಕಾರ ಪ್ರಿಟೆಸ್ಟ್ ಶಿಬಿರದಲ್ಲಿ ಸಂತಸದಿಂದ ಭಾಗವಹಿಸಿದೆ. ನಂತರ ನಾನು ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಎರಡು ತಿಂಗಳ ಕಾಲ ಜರಗಿದ ವಸಂತ ವೇದಪಾಠ ಶಿಬಿರದಲ್ಲಿ ಭಾಗವಹಿಸಿದೆ. ಅಲ್ಲಿ ಮೇ ೨೧ ರಂದು ಶಿವ ಪಂಚಾಕ್ಷರಿ ಯಜ್ಞ ನಡೆಯಿತು. ಮೇ ೨೬ ರಂದು ನನಗೆ ರಾಜ್ಯ ಪುರಸ್ಕಾರ ಪರಿಕ್ಷೆಯಲ್ಲಿ ಭಾಗವಹಿಸಲಿತ್ತು. ವೇದಪಾಠ ಮುಕ್ತಾಯವಾದ ತಕ್ಷಣ ನಾನು ಆ ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿದೆ. ಮೇ ೨೯ ರಂದು ಮುಕ್ತಾಯವಾದ ಆ ಪರೀಕ್ಷೆ ಬಹಳ ಸುಲಭವಾಗಿತ್ತು. ಪುನಃ ಶಾಲೆ ಆರಂಭವಾಗುವ ಸಮಯವೂ ಸನ್ನಿಹಿತವಾಯಿತು. ನಾನು ಶಾಲೆಯ ಬಾಗಿಲು ತೆರೆಯುವುದನ್ನೇ ಕಾಯಲು ಆರಂಭಿಸಿದೆ.
No comments:
Post a Comment