
31 August 2010
ನಾಳೆ ಶ್ರೀಕೃಷ್ಣ ಜನ್ಮಾಷ್ಟಮಿ, ಬನ್ನಿ...

27 August 2010
‘ಗಣಕ ಯಂತ್ರ ಆಧುನಿಕ ಜಗತ್ತಿನ ಅವಿಭಾಜ್ಯ ಅಂಗ’

ಪೆರಡಾಲ ಮಹಾಜನ ವಿದ್ಯಾಭಿವರ್ಧಕ ಸಂಘದ ಕಾರ್ಯದರ್ಶಿ ಜಯದೇವ ಖಂಡಿಗೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅನುಭವಿ ಕಂಪ್ಯೂಟರ್ ತಂತ್ರಜ್ಞ ವೇಣುಗೋಪಾಲ ಆರೋಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ರಾಜಶೇಖರ ಪದ್ಮಾರು ಪ್ರಾಸ್ತಾವಿಕ ಭಾಷಣ ಮಾಡಿದರು. ವಿದ್ಯಾರ್ಥಿಗಳಾದ ಸುಬ್ರಹ್ಮಣ್ಯ ಪ್ರಸಾದ ಸ್ವಾಗತಿಸಿ ಸುಶೀಲ.ಎಸ್ ವಂದಿಸಿದರು. ಶಾಂತಿ.ಕೆ ಕಾರ್ಯಕ್ರಮ ನಿರೂಪಿಸಿದರು.
20 August 2010
18 August 2010
‘ಕ್ವಿಟ್ ಇಂಡಿಯಾ’ ಮಾದರಿ

“ಕ್ವಿಟ್, ಕ್ವಿಟ್, ಕ್ವಿಟ್ ಇಂಡಿಯಾ”
“ನಮಗೆ ಸ್ವಾತಂತ್ರ್ಯ ಕೊಡಿ, ಭಾರತ ಬಿಟ್ಟು ತೊಲಗಿ”
“ಮಹಾತ್ಮಾ ಗಾಂಧೀಜೀ ಕೀ ಜೈ" ಎಂಬೀ ಘೋಷಣೆಗಳನ್ನು ಕೂಗುತ್ತಾ ಪುಟಾಣಿ ವಿದ್ಯಾರ್ಥಿಗಳು ಪೇಟೆಯಲ್ಲಿ ಪ್ರದರ್ಶನ ನಡೆಸಿದರು. ಅಧ್ಯಾಪಕ ಚಂದ್ರಶೇಖರ ರೈಗಳ ಕಲ್ಪನೆಗೆ ಇತರ ಶಿಕ್ಷಕಿಯರು ಸಹಕರಿಸಿದ್ದರು.
17 August 2010
ಕೀರ್ತನಾ ತರಗತಿ ಆರಂಭ

ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಎಂ.ವಿ.ಭಟ್ ಮಧುರಂಗಾನ ಶುಭ ಹಾರೈಸಿದರು. ಚಿತ್ರಕಲಾ ಅಧ್ಯಾಪಕ ಕೋರಿಕ್ಕಾರು ಗೋವಿಂದ ಶರ್ಮ ಸ್ವಾಗತಿಸಿ ಶಿಕ್ಷಕಿ ವಾಣಿ.ಪಿ.ಎಸ್ ವಂದಿಸಿದರು. ವಿದ್ಯಾರ್ಥಿನಿ ಶಾಂತಿ.ಕೆ ಕಾರ್ಯಕ್ರಮ ನಿರೂಪಿಸಿದರು.
16 August 2010
ಬಾಂಗ್ಲಾ ವಿಭಜನೆಯ ಪ್ರಾತ್ಯಕ್ಷಿಕೆ

ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಎಂ.ಅಬ್ಬಾಸ್, ಶಾಲಾ ಹಿರಿಯ ಅಧ್ಯಾಪಕ ಕೆ. ನಾರಾಯಣ ಭಟ್ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ದಿನ ಸಂದೇಶವನ್ನು ನೀಡಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು. ರವಿಕೃಷ್ಣ ಸ್ವಾಗತಿಸಿದರು. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಧನ್ಯವಾದ ಸಮರ್ಪಿಸಿದರು. ಚಿತ್ರಕಲಾ ಅಧ್ಯಾಪಕ ಗೋವಿಂದ ಶರ್ಮಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ರೂಪಕ, ಸಮೂಹಗಾನ, ದೇಶಭಕ್ತಿಗೀತೆ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
10 August 2010
ಸ್ವಾತಂತ್ರ್ಯೋತ್ಸವ ಶುಭಾಶಯಗಳು...
ರಕ್ಷಕ ಶಿಕ್ಷಕ ಸಂಗಮ

ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಗೀತಾ ಮೊಳೆಯಾರು ಅಧ್ಯಕ್ಷತೆ ವಹಿಸಿದ್ದರು. ಶಾಲಾ ಹಿರಿಯ ಅಧ್ಯಾಪಕ ಕೆ.ನಾರಾಯಣ ಭಟ್ ಶುಭಾಶಂಸನೆಗೈದರು. ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಸ್ವಾಗತಿಸಿದರು. ಶಾರೀರಿಕ ಶಿಕ್ಷಣ ಅಧ್ಯಾಪಕ ಎಂ.ಸೂರ್ಯನಾರಾಯಣ ವಂದಿಸಿದರು. ಅಧ್ಯಾಪಕ ಎಚ್.ಶಿವಕುಮಾರ ಕಾರ್ಯಕ್ರಮ ನಿರೂಪಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಕೆ.ಸುಬ್ರಹ್ಮಣ್ಯ ಭಟ್, ಪ್ರದೀಪ್, ಎ.ಭುವನೇಶ್ವರಿ ಉಪನ್ಯಾಸ ನೀಡಿದರು.
06 August 2010
ಶಾಲಾ ಚುನಾವಣೆ
04 August 2010
ಆರ್ಟ್ಸ್ ಕ್ಲಬ್ ಉದ್ಘಾಟನೆ

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಹಿಂದೀ ಸಾಹಿತ್ಯ ಸಂಘದ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿದರು. ಶಾಲಾ ಹಿರಿಯ ಶಿಕ್ಷಕ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಚಿತ್ರಕಲಾ ಅಧ್ಯಾಪಕ ಗೋವಿಂದ ಶರ್ಮ ಕೋರಿಕ್ಕಾರು ಪ್ರಾಸ್ತಾವಿಕ ಭಾಷಣ ಮಾಡಿದರು. ವಿದ್ಯಾರ್ಥಿಗಳಾದ ಕ್ಷಮಾದೇವಿ ಸ್ವಾಗತಿಸಿ ಗಿರಿಶಂಕರ.ಕೆ ವಂದಿಸಿದರು. ಶಾಂತಿ.ಕೆ ಕಾರ್ಯಕ್ರಮ ನಿರ್ವಹಿಸಿದರು.
01 August 2010
ಶಾಲಾ ವಿದ್ಯಾರ್ಥಿಗಳಿಂದ ಸಿಪಿಸಿಆರ್ಐ ಸಂದರ್ಶನ



ಏಳನೇ ತರಗತಿ ವಿದ್ಯಾರ್ಥಿಗಳು ೩೧.೦೭.೨೦೧೦ ಶನಿವಾರ ಕಾಸರಗೋಡು ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ ಮತ್ತು ಕೃಷಿ ವಿಜ್ಞಾನ ಕೇಂದ್ರಕ್ಕೆ ಶೈಕ್ಷಣಿಕ ಪ್ರವಾಸ ನಡೆಸಿ ವಿವಿಧ ತೋಟಗಾರಿಕಾ ಬೆಳೆಗಳ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ತಾಂತ್ರಿಕ ಅಧಿಕಾರಿ ಕೆ.ಮಣಿಕಂಠನ್ ಕಸಿ ಕಟ್ಟುವ ಬಡ್ಡಿಂಗ್, ಗ್ರಾಫ್ಟಿಂಗ್, ಲೇಯರಿಂಗ್ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ, ಅಧ್ಯಾಪಕರಾದ ಎಚ್.ಶಿವಕುಮಾರ, ಇ.ವೇಣುಗೋಪಾಲಕೃಷ್ಣ, ತಲೆಂಗಳ ಕೃಷ್ಣಪ್ರಸಾದ, ರಾಜು ಸ್ಟೀವನ್ ಮತ್ತು ವನಿತಾ ನೇತೃತ್ವ ವಹಿಸಿದ್ದರು.
Subscribe to:
Posts (Atom)