Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

02 March 2010

ಸಹಾಯ ನಿಧಿ ಹಸ್ತಾಂತರ

ಕಳೆದ ಅಕ್ಟೋಬರ್ ೧೭, ೨೦೦೯ ರಂದು ಎರ್ದುಂಕಡವು ಹೊಳೆಯಲ್ಲಿ ದಾರುಣವಾಗಿ ಮೃತಪಟ್ಟ ನಮ್ಮ ಶಾಲಾ ವಿದ್ಯಾರ್ಥಿಗಳಾದ ಅಜೀಷ್, ಅಜಿತ್, ಅಭಿಲಾಶ್, ರತನ್ ಕುಮಾರ್ ಅವರ ಕುಟುಂಬದ ಸಹಾಯಾರ್ಥವಾಗಿ ಜಿಲ್ಲೆಯ ವಿವಿಧ ಶಾಲೆಗಳಿಂದ, ಸಹೃದಯರಿಂದ ಸಂಗ್ರಹಿಸಿದ ರೂ. ೧,೮೧,೬೦೩/-ನ್ನು ೦೨.೦೩.೨೦೧೦ ಮಂಗಳವಾರ ಕಾಸರಗೋಡು ವಿದ್ಯಾಭ್ಯಾಸ ಜಿಲ್ಲಾ ಶಿಕ್ಷಣಾಧಿಕಾರಿ ಎನ್.ಕೆ.ಮೋಹನದಾಸ್ ಮೃತರ ಕುಟುಂಬಕ್ಕೆ ನೀಡಿದರು. ನಾರಾಯಣ ಮತ್ತು ರಾಘವ ಇವರು ಮೊತ್ತವನ್ನು ಸ್ವೀಕರಿಸಿದರು. ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಜಯದೇವ ಖಂಡಿಗೆ, ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಎಂ.ಅಬ್ಬಾಸ್, ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ದಿವಾಕರ ಮಾನ್ಯ, ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ, ಪತ್ರಕರ್ತರ ಸಂಘಟನೆಯ ಕಾಸರಗೋಡು ಜಿಲ್ಲಾ ಅಧ್ಯಕ್ಷ ಸಿಬಿ ಜೋನ್ ಉಪಸ್ಥಿತರಿದ್ದರು.

No comments:

Post a Comment