ನಮ್ಮ ಶಾಲಾ ವ್ಯವಸ್ಥಾಪಕರೂ, ಮಾಜಿ ಪ್ರಿನ್ಸಿಪಾಲರೂ ಆದ ಖಂಡಿಗೆ ಶಾಮ ಭಟ್ಟರಿಗೆ ಈಗ ತೊಂಭತ್ತರ ಹರೆಯ. ಈ ಇಳಿವಯಸ್ಸಿನಲ್ಲೂ ಅವರದು ಏರುವ ಉತ್ಸಾಹ. ಶಾಲಾ ಕಾರ್ಯಕ್ರಮಗಳಿಗೆಲ್ಲ ನಿಯಮಿತವಾಗಿ ಭೇಟಿ ನೀಡುತ್ತಾರೆ. ಅವರ ಮಾರ್ಗದರ್ಶನ ನಮಗೆ ದಾರಿದೀಪ. ಹಿಂದೆ ನಮ್ಮ ಶಾಲೆ ಸಂಸ್ಕೃತ ಕಾಲೇಜು ಆಗಿತ್ತು. ಆ ಸಂದರ್ಭದಲ್ಲಿ ಕಾಲೇಜಿನ ಪ್ರಿನ್ಸಿಪಾಲರಾಗಿದ್ದರಿಂದ ಊರಿಗೆಲ್ಲ ಅವರು ‘ನಮ್ಮ ಪ್ರಿನ್ಸಿಪಾಲರು’ ಎಂದೇ ಖ್ಯಾತರು. ನೀರ್ಚಾಲಿನ ಬೆಳವಣಿಗೆಯಲ್ಲಿ ಖಂಡಿಗೆ ಮನೆತನದ ಕೊಡುಗೆ ಅಪಾರ. ಒಂಥರಾ ಖಂಡಿಗೆಯನ್ನು ನೀರ್ಚಾಲಿನ ಬೆನ್ನೆಲುಬು ಎನ್ನಬಹುದು. ಇಲ್ಲಿನ ಬ್ಯಾಂಕಿಂಗ್, ವ್ಯಾಪಾರ, ಸಹಕಾರಿ ಸಂಸ್ಥೆ ಮತ್ತು ವಿದ್ಯಾಸಂಸ್ಥೆಗಳ ಸ್ಥಾಪನೆಯಲ್ಲಿ ಅವರ ಕೊಡುಗೆ ಅಗಣಿತವಾಗಿದೆ.
20 January 2009
ನಮ್ಮ ಪ್ರಿನ್ಸಿಪಾಲರು - ಖಂಡಿಗೆ ಶಾಮ ಭಟ್ಟರು
ನಮ್ಮ ಶಾಲಾ ವ್ಯವಸ್ಥಾಪಕರೂ, ಮಾಜಿ ಪ್ರಿನ್ಸಿಪಾಲರೂ ಆದ ಖಂಡಿಗೆ ಶಾಮ ಭಟ್ಟರಿಗೆ ಈಗ ತೊಂಭತ್ತರ ಹರೆಯ. ಈ ಇಳಿವಯಸ್ಸಿನಲ್ಲೂ ಅವರದು ಏರುವ ಉತ್ಸಾಹ. ಶಾಲಾ ಕಾರ್ಯಕ್ರಮಗಳಿಗೆಲ್ಲ ನಿಯಮಿತವಾಗಿ ಭೇಟಿ ನೀಡುತ್ತಾರೆ. ಅವರ ಮಾರ್ಗದರ್ಶನ ನಮಗೆ ದಾರಿದೀಪ. ಹಿಂದೆ ನಮ್ಮ ಶಾಲೆ ಸಂಸ್ಕೃತ ಕಾಲೇಜು ಆಗಿತ್ತು. ಆ ಸಂದರ್ಭದಲ್ಲಿ ಕಾಲೇಜಿನ ಪ್ರಿನ್ಸಿಪಾಲರಾಗಿದ್ದರಿಂದ ಊರಿಗೆಲ್ಲ ಅವರು ‘ನಮ್ಮ ಪ್ರಿನ್ಸಿಪಾಲರು’ ಎಂದೇ ಖ್ಯಾತರು. ನೀರ್ಚಾಲಿನ ಬೆಳವಣಿಗೆಯಲ್ಲಿ ಖಂಡಿಗೆ ಮನೆತನದ ಕೊಡುಗೆ ಅಪಾರ. ಒಂಥರಾ ಖಂಡಿಗೆಯನ್ನು ನೀರ್ಚಾಲಿನ ಬೆನ್ನೆಲುಬು ಎನ್ನಬಹುದು. ಇಲ್ಲಿನ ಬ್ಯಾಂಕಿಂಗ್, ವ್ಯಾಪಾರ, ಸಹಕಾರಿ ಸಂಸ್ಥೆ ಮತ್ತು ವಿದ್ಯಾಸಂಸ್ಥೆಗಳ ಸ್ಥಾಪನೆಯಲ್ಲಿ ಅವರ ಕೊಡುಗೆ ಅಗಣಿತವಾಗಿದೆ.
Subscribe to:
Post Comments (Atom)
No comments:
Post a Comment