Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

21 January 2009

ಮಹಾಜನ ‘ಬ್ಲಾಗ್’ ಅನಾವರಣ


“ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯನ್ನು ಕಂಡು ಅಚ್ಚರಿಯಾಗುತ್ತಿದೆ. ಸದುದ್ದೇಶದಿಂದ ನಾವೆಲ್ಲರೂ ಈ ವ್ಯವಸ್ಥೆಯನ್ನು ಅಭ್ಯಾಸ ಮಾಡಿಕೊಳ್ಳಬೇಕಾಗಿದೆ. ಈ ಬ್ಲಾಗ್ ಶಾಲೆ, ಸಹೃದಯಿಗಳು ಮತ್ತು ಪೂರ್ವ ವಿದ್ಯಾರ್ಥಿಗಳ ನಡುವೆ ಸ್ನೇಹದ ಕೊಂಡಿಯಾಗಿರಲಿ" ಎಂದು ಖಂಡಿಗೆ ಶಾಮ ಭಟ್ಟರು ಹೇಳಿದರು. ಅವರು ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಬೆಸೆಯುವ ಉದ್ದೇಶದಿಂದ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯು ಅಂತರ್ಜಾಲದಲ್ಲಿ ಆರಂಭಿಸಿದ ‘ಮಹಾಜನ’ ಬ್ಲಾಗ್ ಅನಾವರಣ ಕಾರ್ಯಕ್ರಮವನ್ನು ದಿನಾಂಕ ೨೦.೦೧.೨೦೦೯, ಮಂಗಳವಾರ ಉದ್ಘಾಟಿಸಿ ಮಾತನಾಡುತ್ತಿದ್ದರು. ಶಾಲಾ ವಿದ್ಯಾರ್ಥಿಗಳ ಕಥೆ, ಕವನ, ಚಿತ್ರ, ಲೇಖನ, ಪ್ರತಿಭೆ, ವರದಿಗಳನ್ನು ಈ ಬ್ಲಾಗ್ ಅನಾವರಣಗೊಳಿಸುತ್ತದೆ. ಪ್ರಪಂಚದ ಯಾವುದೇ ಮೂಲೆಯಲ್ಲಿರುವ ಆಸಕ್ತರಿಗೆ ಅಂತರ್ಜಾಲದ ಮೂಲಕ ಕನ್ನಡದಲ್ಲಿರುವ ಈ ಬರಹಗಳನ್ನು ಸುಲಲಿತವಾಗಿ ಓದಬಹುದು. ಸಮಾರಂಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಪಡಿಯಡ್ಪು ಶಂಕರ ಭಟ್, ಶಾಲಾ ಮುಖ್ಯೋಪಾಧ್ಯಾಯ ಯು. ರವಿಕೃಷ್ಣ ಉಪಸ್ಥಿತರಿದ್ದರು.

2 comments:

  1. Dear Ravi,
    Nijavagalu idondu uttama praytna. Halli nada pratibhegallnu gurutisuttiruv neevu nijakku shikshakana aadarsha merediddiri. Shubhavagali.
    -Bhadti

    ReplyDelete
  2. I congratulate the team for starting a blog for the students. This will be a model for other schools.
    With best wishes
    Purushothama Bilimale, New Delhi

    ReplyDelete