Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

18 February 2009

ಪ್ರಬಂಧ ೦೧ - ಆದರ್ಶ ವಿದ್ಯಾರ್ಥಿ

ಸ್ವಾತಿ. ಸಿ.ವಿ.
ವಿದ್ಯಾ ಸಂಪಾದನೆಯೇ ವಿದ್ಯಾರ್ಥಿಯ ಮುಖ್ಯ ಗುರಿ. ವಿದ್ಯಾರ್ಥಿ ಜೀವನವು ಒಂದು ತಪಸ್ಸು. ವಿದ್ಯೆಯ ಮಹತ್ವವನ್ನು ಅರಿತುಕೊಂಡ ವಿದ್ಯಾರ್ಥಿಯು ತನ್ನ ನಡೆ, ನುಡಿ ಸದ್ವರ್ತನೆಗಳಿಂದ ಆದರ್ಶಪ್ರಾಯನಾಗುತ್ತಾನೆ. ವಿದ್ಯಾರ್ಥಿಯು ಪ್ರತಿಭಾವಂತನಾಗಿದ್ದರಷ್ಟೇ ಸಾಲದು. ಅವನ ಓದು, ಜೀವನ ಕ್ರಮಗಳುಒಂದು ಶಿಸ್ತಿಗೆ ಒಳಪಡಬೇಕು. ಗುರಿಮುಟ್ಟೂವ ಹಾದಿಯಲ್ಲಿ ಪ್ರಗತಿಪರ ವಿಚಾರಧೋರಣೆ ಅವನದಾಗಬೇಕು. ಅಂಥವನು ನಿಜವಾಗಿ ಆದರ್ಶ ಎನಿಸಿಕೊಳ್ಳುತ್ತಾನೆ. ಅವನ ಜೀವನವು ಇತರರಿಗೆ ಮಾದರಿಯಾಗಿರುತ್ತದೆ.ಆದರ್ಶವಿದ್ಯಾರ್ಥಿಯು ವಿಶೇಷ ಗುಣಲಕ್ಷಣಗಳನ್ನು ಹೊಂದಿರುತ್ತಾನೆ. ಸಮಯದ ಕಡೆಗೆ ಸದಾ ಗಮನವಿಟ್ಟಿರುತ್ತಾನೆ. ವ್ಯರ್ಥವಾಗಿ ವೇಳೆ ಕಳೆಯುವುದಿಲ್ಲ. ನಿಯಮಿತವಾಗಿ ಶಾಲೆಗೆ ಹೋಗುತ್ತಾನೆ. ಶಾಲೆ ನಿಯಮಗಳನ್ನು ಪಾಲಿಸುತ್ತಾನೆ. ಲಕ್ಷ್ಯವಿಟ್ಟು ನಿಷ್ಟೆಯಿಂದ ಓದುತ್ತಾನೆ. ಪರೀಕ್ಷೆಗಳನ್ನು ಪಾಸು ಮಾಡುವುದರಲ್ಲಿ ಮಾತ್ರ ಅವನಿಗೆ ಸಮಾಧಾನ ದೊರೆಯುವುದಿಲ್ಲ. ಉನ್ನತ ಅಂಕಗಳನ್ನು ಪಡೆದು ಪ್ರತಿಭಾವಂತ ವಿದ್ಯಾರ್ಥಿ ಎನಿಸಿಕೊಳ್ಳಲು ಸತತ ಪರಿಶ್ರಮ ಪಡುತ್ತಾನೆ.ಗುರುಹಿರಿಯರಲ್ಲಿ ಅಪಾರ ಭಕ್ತಿ ಇಟ್ಟಿರುತ್ತಾನೆ. ಅವರ ಜೊತೆ ವಿಧೇಯತೆಯಿಂದ ನಡೆದುಕೊಳ್ಳುತ್ತಾನೆ.
ವಿನಯವು ಆದರ್ಶ ವಿದ್ಯಾರ್ಥಿಯ ಮುಖ್ಯಲಕ್ಷಣವಾಗಿದೆ. ತಂದೆ ತಾಯಿಯರ ಮಾತಿಗೆ ವಿರುದ್ಧವಾಗಿ ಅವನೆಂದೂ ವರ್ತಿಸುವುದಿಲ್ಲ. ಕೆಟ್ಟ ಹುಡುಗರ ಗೆಳೆತನ ಮಾಡುವುದಿಲ್ಲ. ಒಳ್ಳೆಯದನ್ನು ಓದುತ್ತಾನೆ. ಒಳ್ಳೆಯದನ್ನು ನೋಡುತ್ತಾನೆ. ಸಜ್ಜನರ ಸಂಗಕ್ಕೆ ಹಾತೊರೆಯುತ್ತಾನೆ. ಸತ್ಯವನ್ನು ಪಾಲಿಸುತ್ತಾನೆ. ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತಾನೆ. ಎಲ್ಲರ ಪ್ರೀತಿ ವಿಶ್ವಾಸಗಳಿಗೆ ಪಾತ್ರನಾಗುತ್ತಾನೆ.ಇಂಥ ಆದರ್ಶ ವಿದ್ಯಾರ್ಥಿಯೇ ಮುಂದೆ ಆದರ್ಶ ಪುರುಷನಾಗುತ್ತಾನೆ. ಇತಿಹಾಸ ಪ್ರಸಿದ್ಧನಾಗುತ್ತಾನೆ. ಆದರ್ಶ ಎನಿಸಿಕೊಳ್ಳುವುದು ಸಾಮಾನ್ಯ ಸಾಧನೆಯೇನಲ್ಲ. ಹಾಗೆಂದು ಪರಿಶ್ರಮ ಪಟ್ಟರೆ ಯಾವುದೂ ಅಸಾಧ್ಯವಲ್ಲ. ಆದ್ದರಿಂದ ನಾವೆಲ್ಲರೂ ಆದರ್ಶ ವ್ಯಕ್ತಿಗಳಾಗುವತ್ತ ಪ್ರಯತ್ನ ಮಾಡಬೇಕಾಗಿದೆ.

No comments:

Post a Comment