ಗಮ್ಯಾ. ಕೆ
ಯಕ್ಷಗಾನವನ್ನು ರೂಪಿಸಿ ಬೆಳೆಸಿದ ಮಹಾಮಹಿಮ ‘ಪಾರ್ತಿಸುಬ್ಬ’. ಈತನ ಕಾಲದೇಶಗಳ ಬಗ್ಗೆ ಅನೇಕ ವಾದಗಳಿದ್ದರೂ ಯಕ್ಷಗಾನದ ಬೆಳವಣಿಗೆ ಆತನ ಕಾಲದಲ್ಲಿಯೇ ಆಯಿತು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಆತ ಅನೇಕ ಪ್ರಸಂಗಗಳನ್ನು ರಚಿಸುವುದರ ಜೊತೆಗೆ ‘ಸಭಾ ಲಕ್ಷಣ’ ಎಂಬ ಗ್ರಂಥವನ್ನೂ ಬರೆದು ತನ್ನ ಆರಾಧ್ಯ ದೈವ ಕಣಿಪುರ ಗೋಪಾಲಕೃಷ್ಣನ ಸನ್ನಿಧಿಗೆ ಸಮರ್ಪಿಸಿದ್ದಾನೆ.
ಪಾರ್ತಿಸುಬ್ಬನು ರಾಮಾಯಣ, ಮಹಾಭಾರತಗಳಿಂದ ಪ್ರಸಂಗಕ್ಕೆ ಅನುಕೂಲವಾಗುವಂತಹ ಸಂದರ್ಭಗಳನ್ನು ಆಯುದು ಜನಪದ ಸೈಲಿಯಲ್ಲಿ ಕೃತಿಗಳನ್ನು ರಚಿಸಿದ್ದಾನೆ. ಅವನ ಪದಗಳು ಸರಳ ಮತ್ತು ಗಾಂಭೀರ್ಯತೆಗಳಿಂದ ಕೂಡಿದೆ. ಆತನ ನೆನಪಿಗಾಗಿ ಕುಂಬಳೆಯ ಶೇಡಿಕಾವು ದೇವಾಲಯದ ಬಳಿ ಪಾರ್ತಿಸುಬ್ಬನ ಕಟ್ಟೆ ಇದೆ. ಈಗ ಕುಂಬಳೆಯಲ್ಲಿ ಪಾರ್ತಿಸುಬ್ಬ ಯಕ್ಷಗಾನ ಕಲಾಕೇಂದ್ರ ರೂಪುಗೊಂಡಿದೆ.
No comments:
Post a Comment