ಪ್ರತೀ ಸೋಮವಾರ ಹಿರಿಯ ತಂತ್ರಜ್ಞಾನ ಬರಹಗಾರ ಅಶೋಕ್ ಕುಮಾರ್ ಉದಯವಾಣಿಯ ಸಂಪದ ಪುಟದಲ್ಲಿ ನಿಸ್ತಂತು ಸಂಸಾರ ಅಂಕಣ ಬರೆಯುತ್ತಾರೆ. ಕಳೆದ ಸೋಮವಾರ ಆ ಅಂಕಣದ ಒಳಗೆ ಹೊಕ್ಕು ಕುಳಿತುಕೊಳ್ಳಲು ಈ ಪುಟ್ಟ ಬ್ಲಾಗಿಗೂ ಸಾಧ್ಯವಾಯಿತು ಎಂಬುದು ನಮ್ಮ ಮಟ್ಟಿಗೆ ತುಂಬಾ ಸಂತಸದ ವಿಚಾರ. ಬ್ಲಾಗನ್ನು ಇ-ಪತ್ರಿಕೆಯಾಗಿಸಿದ ನವೀನ ಪ್ರಯೋಗ ಎಂಬ ಉಲ್ಲೇಖ ಉತ್ಪ್ರೇಕ್ಷೆ ಆಗಿರಲಾರದು ಎಂಬ ವಿಶ್ವಾಸ ನಮಲ್ಲಿದೆ. ನಮಗೆ ಸಿಕ್ಕಿದ ಪ್ರಶಂಸೆಗಳು ಏನಿದ್ದರೂ ಅವೆಲ್ಲ ಇಂಡಿಯಾ ವಾಟರ್ ಪೋರ್ಟಲ್ ಗುಂಪಿನ ನೀರ ನಿಶ್ಚಿಂತೆ ಕಾರ್ಯಾಗಾರ ತಂಡದ ಹರಿಪ್ರಸಾದ್ ನಾಡ್ಗ್, ಶಾರದಾ ಪ್ರಸಾದ್ ಮತ್ತು ವಸಂತ ಕಜೆ ಇವರಿಗೆ ಸಲ್ಲಬೇಕು. ನಮಗೆ ಬ್ಲಾಗಿನ ಬಾಗಿಲು ತೆರೆದು ತೋರಿಸಿದವರು ಅವರೇ. ಮಂಗಳೂರಿನಲ್ಲಿ ಮುತುವರ್ಜಿ ವಹಿಸಿ ಕಾರ್ಯಾಗಾರ ಏರ್ಪಡಿಸಿದ ಅಡ್ಡೂರು ಕೃಷ್ಣ ರಾವ್, ಶ್ರೀ ಪಡ್ರೆ... ಇವರಿಗೆಲ್ಲ ನಾವು ಸದಾ ಆಭಾರಿಗಳಾಗಿರುತ್ತೇವೆ. ನಿಮಗೆಲ್ಲ ಧನ್ಯವಾದಗಳು.
No comments:
Post a Comment