ಮಲಯಾಳ ಮನೋರಮಾದಲ್ಲಿ ನಮ್ಮ ಕುರಿತಾದ ವರದಿ ತೀರಾ ಅನಿರೀಕ್ಷಿತ. ಆ ವರದಿಯನ್ನು ಕಂಡು ಮನೋರಮಾ ನ್ಯೂಸ್ ಚಾನೆಲಿನ ವರದಿಗಾರರು ಮತ್ತು ಕ್ಯಾಮೆರಾಮೆನ್ ವಿಶೇಷ ಕಾರು ಮಾಡಿಕೊಂಡು ಕಾಸರಗೋಡಿನಿಂಡ ನಮ್ಮ ಹಳ್ಳಿಮೂಲೆಯ ನೀರ್ಚಾಲಿಗೆ ಭೇಟಿ ನೀಡುವುದು ಕನಸಿನಲ್ಲೂ ಗ್ರಹಿಸದ ವಿಚಾರ. ಊರಮಂದಿಗೆಲ್ಲ ಅಚ್ಚರಿ. ನಮ್ಮನ್ನು ಪ್ರಥಮವಾಗಿ ಗುರುತಿಸಿದ್ದು ಅಡಿಕೆ ಪತ್ರಿಕೆ, ಮತ್ತೆ ಕನ್ನಡ ಪ್ರಭದ ಬ್ಲಾಗಾಯಣ, ಚಿತ್ರದುರ್ಗದ ಸುದ್ದಿ ಗಿಡುಗ, ಪರ್ಯಾಯ ಬ್ಲಾಗ್ ಮತ್ತು ಉದಯವಾಣಿ ದಿನ ಪತ್ರಿಕೆ. ಉದಯವಾಣಿಯ ಸಂಪದ ಪುಟದಲ್ಲಿ ನಿಸ್ತಂತು ಸಂಚಾರ ಅಂಕಣದ ಮೂಲಕ ಹೊಚ್ಚಹೊಸ ತಂತ್ರಜ್ಞಾನ ಬೆಳವಣಿಗೆಯನ್ನು ಪರಿಚಯಿಸುವ ಅಶೋಕ್ ಕುಮಾರ್ ನಮ್ಮ ಬೆನ್ನು ತಟ್ಟಿದ್ದೂ ಬಹಳ ಹೆಮ್ಮೆಯ ವಿಚಾರ. ಹ್ಯಾಟ್ಸ್ ಆಫ್ ಟು ಯು ಆಲ್.....
No comments:
Post a Comment