-ಅಜೇಯಕೃಷ್ಣ. ಕೆ
ಆಗ ನಾನು ಮೂರನೇ ತರಗತಿ. ಆಗ ರಾತ್ರಿ ಹೊತ್ತಿನಲ್ಲಿ ನಮ್ಮ ತೋಟಕ್ಕೆ ಕಾಡುಹಂದಿಗಳು ಬರುವುದು ಸಾಮಾನ್ಯವಾಗಿತ್ತು. ಮನೆಯ ನಾಯಿಯೂ ಬೊಗಳುತ್ತಿತ್ತು. ನನ್ನ ತಂದೆ ಲೈಟು ಹಿಡಿದು ತೋಟಕ್ಕೆ ಹೋಗುತ್ತಿದ್ದರು. ಮರುದಿನ ಬೆಳಗ್ಗೆ ತಂದೆ ನನ್ನಲ್ಲಿ ಅದರ ಬಗ್ಗೆ ಹೇಳುತ್ತಿದ್ದರು. ಇದರಿಂದಾಗಿ ಹಂದಿ ನೋಡಬೇಕೆಂಬ ನನ್ನ ಆಸೆ ಹೆಚ್ಚಿತು. ಆ ದಿನ ರಾತ್ರಿ ನಾವಿಬ್ಬರೂ ಜತೆಯಾಗಿ ತೋಟಕ್ಕೆ ಹೋದೆವು. ಲೈಟಿನ ಬೆಳಕಿಗೆ ಹಂದಿಗಳ ಹಿಂಡು ಚದುರಿ ಓಡತೊಡಗಿದವು. ಓಡುವ ರಭಸಕ್ಕೆ ದಾರಿಯಲ್ಲಿದ್ದ ಕಲ್ಲು ಬಾವಿಗೆ ಬಿತ್ತು. ಆಗ ಹೆದರಿ ನಾನು ಮನೆಗೆ ಓಡಿದ ನೆನಪು ಇನ್ನೂ ಹಸಿರಾಗಿದೆ.
Bahala olleya prayatna..Intaha apoorva vedike, mattu karya nijakku shlaghaneeya..makkalalladida maanikyavannu prakashisuva e kelasa nimma adhyapaneya vruttige kalashaviddante...Keep it up
ReplyDeleteManorama B.N
wwww.noopurabhramari.com